Monday, July 18, 2011

ಉದ್ಯೋಗ ಖಾತ್ರಿಯಡಿ ಮಾದರಿ ಗ್ರಾಮಗಳ ಸೃಷ್ಟಿಗೆ ನಿರ್ಧಾರ

ಮಂಗಳೂರು,ಜುಲೈ.18:ಪುದುವೆಟ್ಟು, ಮುಚ್ಚೂರು, ನೀರುಮಾರ್ಗ, ಉಳಾಯಿಬೆಟ್ಟು, ಬನ್ನೂರು ಗ್ರಾಮಪಂಚಾಯಿತಿಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಮಾದರಿ ಗ್ರಾಮಪಂಚಾಯಿತಿಗಳನ್ನಾಗಿ ರೂಪಿಸಲು ನಿರ್ಧರಿಸಲಾಯಿತು.
ದುಡಿ ಯುವ ಕೈಗಳಿಗೆ ಕೆಲಸದ ಖಾತರಿ ನೀಡುವ ಮಹಾತ್ಮ ಗಾಂಧಿ ರಾ ಷ್ಟ್ರೀಯ ಉ ದ್ಯೋಗ ಖಾತರಿ ಯೋಜನೆ ಯನ್ನು ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಪರಿ ಣಾಮ ಕಾರಿ ಯಾಗಿ ಅನು ಷ್ಠಾನಕ್ಕೆ ತರಲು ಜಿಲ್ಲೆಯ ಒಂಬಡ್ಸ ಮೆನ್ ಅವರ ಅಧ್ಯಕ್ಷ ತೆಯಲ್ಲಿ ಜುಲೈ 16 ರಂದು ಜಿಲ್ಲಾ ಪಂಚಾ ಯಿತಿ ಯಲ್ಲಿ ಸೇರಿದ ಸರ್ಕಾ ರೇತರ ಸಂಘ ಸಂಸ್ಥೆ ಗಳ ಮತ್ತು ಜಿಲ್ಲಾ ಪಂಚಾ ಯತ್ ನ ಪ್ರಮುಖ ಅಧಿ ಕಾರಿ ಗಳ ಸಭೆ ಯಲ್ಲಿ ನಿರ್ಧಾ ರಕ್ಕೆ ಬರ ಲಾಯಿತು.
ಜಿಲ್ಲೆಯನ್ನು ದೂರು ರಹಿತ ನರೇಗಾವನ್ನಾಗಿ ರೂಪಿಸುವ ಹಾಗೂ ಈ ಯೋಜನೆಯಡಿಯಲ್ಲೇ ವಿನೂತನ ಮಾದರಿಗಳನ್ನು ಜಿಲ್ಲೆಯಿಂದ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂಬಂಧ ಆರ್ ಡಿ ಪಿ ಆರ್ ಸಚಿವರಾದ ಜಗದೀಶ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ದಕ್ಷಿಣ ಕನ್ನಡದ ಒಂಬಡ್ಸಮನ್ ಅವರ ಕಾರ್ಯವೈಖರಿಯನ್ನು ಪ್ರಶಂಸಿಸಲಾಯಿತಲ್ಲದೆ ಹೆಚ್ಚಿನ ಹೊಣೆಗಾರಿಕೆಯನ್ನೂ ವಹಿಸಲಾಯಿತು. ಇತರೆ ಜಿಲ್ಲೆಗಳಿಗಿಂತ ಈ ಯೋಜನೆಯಲ್ಲಿ ಜಿಲ್ಲೆ ಹಿಂದೆ ಬಿದಿದ್ದು ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಒತ್ತು ನೀಡಲು ಸಚಿವರು ಸೂಚಿಸಿದ್ದರು.
ಜನರ ಪಾಲ್ಗೊಳ್ಳುವಿಕೆ ಹಾಗೂ ಯೋಜನೆಯ ಅನುಷ್ಠಾನಕ್ಕೆ ಸರ್ಕಾರೇತರ ಸಂಘ ಸಂಸ್ಥೆಗಳ ನೆರವು ಪಡೆಯಲು ಹಾಗೂ ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ನೀಡಲು, ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಅಧಿಕಾರಿಗಳು ಯೋಜನೆಯ ಅನುಷ್ಠಾನವನ್ನು ಪ್ರೋತ್ಸಾಹಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆದ್ಯತೆ ನೀಡುವ ಬಗ್ಗೆ, ಅಂಗವಿಕಲರಿಗೆ ಶೇ. 25 ಕಡಿಮೆ ಕೆಲಸಕ್ಕೆ ಅವಕಾಶವಿರುವ ಬಗ್ಗೆ, ದುಡಿಯುವವರಿಗೆ ಮಾತ್ರ ಹಣ ಪಾವತಿಸುವ ಬಗ್ಗೆ, ಯೋಜನೆಯಿಂದಾಗುವ ತಾತ್ಕಾಲಿಕ ಮತ್ತು ದೂರಗಾಮಿ ಅನುಕೂಲಗಳ ಬಗ್ಗೆ, ಇನ್ನೂ ಹಲವು ಗ್ರಾಮಪಂಚಾಯಿತಿಗಳಲ್ಲಿ ಕಾಮಗಾರಿಗಳು ಆರಂಭವಾಗದ ಕುರಿತು, ವೈಯಕ್ತಿಕ ಮತ್ತು ಗುಂಪು ಕಾಮಗಾರಿ ಬಗ್ಗೆ ಎನ್ ಜಿ ಒಗಳಿಗೆ ಇರುವ ಹಲವು ಸಂಶಯಗಳಿಗೆ ಮುಖ್ಯ ಲೆಕ್ಕಾಧಿಕಾರಿ ರಾಮದಾಸ್ ಅವರು ಪರಿಹರಿಸಿದರು.
ಜಿಲ್ಲಾ ಪಂಚಾಯಿತಿ ಸಿ ಒ ಒ ಯೋಜನೆಯ ಬಗ್ಗೆ ಸಭೆಯ ಆರಂಭದಲ್ಲೇ ಮಾಹಿತಿ ನೀಡಿ. ಪಂಚಾಯಿತಿ ಸದಸ್ಯರ ಕೋರಿಕೆ ಮೇರೆಗೆ ಗ್ರಾಮಪಂಚಾಯಿತಿಗೆ ಉದ್ಯೋಗ ಖಾತ್ರಿ ಬಗ್ಗೆ ಮಾಹಿತಿ ನೀಡಲು ತೆರಳಿದರು. ಉದ್ಯೋಗ ಖಾತ್ರಿ ಬಗ್ಗೆ ದೂರುಗಳಿದ್ದರೆ ಮೊದಲು ಪಂಚಾಯಿತಿ ಕುಂದುಕೊರತೆ ಅಧಿಕಾರಿಗೆ ದೂರು ಕೊಡಿ, ಸ್ಪಂದಿಸದಿದ್ದರೆ ತಾಲೂಕು ಪಂಚಾಯಿತಿ ಇ ಒಗೆ ದೂರು ನೀಡಿ. ಇಲ್ಲೂ ಉತ್ತರ ದೊರೆಯದಿದ್ದರೆ ಸಿಇಒ ಅವರಿಗೆ ದೂರು ಕೊಡಿ ಎಂದ ಒಂಬಡ್ಸ್ ಮನ್ ಶೀನ ಶೆಟ್ಟಿ ಅವರು, ಅಂತಿಮವಾಗಿ ದೂರಿಗೆ ಉತ್ತರ ಸಿಗದಿದ್ದರೆ ತನ್ನ ಬಳಿ ಉತ್ತರ ದೊರಕಿಸಿಕೊಡುವ ವ್ಯವಸ್ಥೆ ಇದೆ ಎಂದರು. 12 ತಿಂಗಳೂ ಕೆಲಸಕ್ಕೆ ಈ ಕಾಯಿದೆಯಡಿ ಅವಕಾಶವಿದ್ದು 203 ಗ್ರಾಮಪಂಚಾಯಿತಿಯಲ್ಲಿ ಈಗಾಗಲೇ 93ಕಡೆ ಕೆಲಸ ಆರಂಭವಾಗಿದೆ ಎಂಬ ಮಾಹಿತಿಯನ್ನು ನೀಡಿದರು. ಪಂಚಾ ಯಿತಿ ಅಭಿವೃದ್ಧಿ ಗೆಂದೇ ಅಭಿವೃದ್ಧಿ ಪಡಿಸ ಲಾದ ಪಂಚತಂತ್ರ ವೆಬ್ ಸೈಟ್ ಸಾರ್ವಜ ನಿಕರಿ ಗಾಗಿ ಲಭ್ಯವಿದ್ದು, ಪಂಚಾ ಯಿತಿ ಅಭಿವೃದ್ಧಿ ಕೆಲಸ ಗಳಲ್ಲದೆ ಸರ್ವ ಮಾಹಿತಿಗಳು ಇದರಲ್ಲಿ ಲಭ್ಯವಿದೆ ಎಂದು ಮುಖ್ಯ ಲೆಕ್ಕಾಧಿ ಕಾರಿಗಳು ಹೇಳಿದರು. ಈ ಕುರಿತ ಮಾಹಿತಿ ಯನ್ನು ಇಂಜಿನಿ ಯರ್ ಅರುಣ್ ಅವರು ಪಿಪಿಟಿ ಪ್ರಸಂಟೇಷನ್ ಮೂಲಕ ತೋರಿಸಿದರು. ಎಲ್ಲ ಪಂಚಾಯಿತಿಗಳಲ್ಲೂ ಮಾಹಿತಿ ಗೋಡೆಗಳಿರಬೇಕು ಎಂದ ಅವರು, ಉದ್ಯೋಗ ಚೀಟಿ ಕೋರಿದ ಅರ್ಜಿಯನ್ನು ಬಾಕಿ ಇಡಲು ಅವಕಾಶವಿಲ್ಲ; ಅರ್ಜಿ ನೀಡಿದ ತಕ್ಷಣವೆ ವ್ಯಕ್ತಿಗೆ ಉದ್ಯೋಗ ಪಡೆಯುವ ಹಕ್ಕು ಈ ಕಾಯಿದೆಯಲ್ಲಿದೆ ಎಂದರು.
ಕಳೆದ ಸಾಲಿನಲ್ಲಿ ಈ ಯೋಜನೆಯಡಿ ಜಿಲ್ಲೆಗೆ 33 ಕೋಟಿ ರೂ. ಬಂದಿದ್ದು 17 ಕೋಟಿ ರೂ. ಖರ್ಚಾಗಿದೆ. ಪ್ರಸಕ್ತ ಸಾಲಿನಲ್ಲಿ 16 ಕೋಟಿ ಬಿಡುಗಡೆಯಾಗಿದ್ದು 77 ಲಕ್ಷ ರೂ. ಇದುವರೆಗೆ ಖರ್ಚಾಗಿದೆ ಎಂದು ಮುಖ್ಯ ಲೆಕ್ಕಾಧಿಕಾರಿ ರಾಮದಾಸ್ ಮಾಹಿತಿ ನೀಡಿದರು. ಯೋಜನೆಯ ಯಶಸ್ಸಿಗೆ ಜನರ ಪಾಲ್ಗೊಳ್ಳುವಿಕೆ ಅಗತ್ಯ ಎಂದ ಅವರು ಈ ಯೋಜನೆಯಡಿ ದುಡ್ಡಿಗೆ ಕೊರತೆ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸಿದರು. ವಿವಿಧ ತಾಲೂಕುಗಳಿಂದ ಬಂದ ಎನ್ ಜಿ ಒ ಗಳು ಪಾಲ್ಗೊಂಡು ಯೋಜನೆ ಬಗ್ಗೆ ಸಮಗ್ರ ಮಾಹಿತಿ ಪಡೆದರು.