
ಜನತಾ ಮನೆ,ಭಾಗ್ಯ ಮಂದಿರ,ನೆರಳಿನ ಭಾಗ್ಯ,ಗ್ರಾಮೀಣ ಆಶ್ರಯ,ನಗರ ಆಶ್ರಯ,ನಗರ ಅಂಬೇಡ್ಕರ್,ಎಂಎಂಜಿವೈ ಸಾಲ ಮತ್ತು ಸಹಾಯಧನ ಯೋಜನೆ, ವಿಶೇಷ ವರ್ಗದ ಯೋಜನೆಗಳು ಹಾಗೂ ಇತ್ಯಾದಿ ವಸತಿ ಯೋಜನೆಗಳಡಿಯಲ್ಲಿ ಸಂಪೂರ್ಣ ಸಾಲ ಅಥವಾ ಸಾಲ ಮತ್ತು ಸಹಾಯಧನ ಪಡೆದು ಮನೆಗಳನ್ನು ನಿರ್ಮಿಸಿಕೊಂಡ ಎಲ್ಲಾ ವರ್ಗದ ಫಲಾನುಭವಿಗಳು ತಮ್ಮ ಸಾಲವನ್ನು ಸಂಪೂರ್ಣ ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯದೊಳಗೆ ಅಂದರೆ ದಿನಾಂಕ 31-3-12 ರೊಳಗೆ ಸಂಪೂರ್ಣ ಮೊತ್ತವನ್ನು ಮರು ಪಾವತಿಸಿದರೆ ಅಂತಹವರ ಬಡ್ಡಿಯನ್ನು ಮನ್ನಾ ಮಾಡಿ ಮನೆಯನ್ನು ಅಡಮಾನದಿಂದ ಋಣ ಮುಕ್ತಗೊಳಿಸಲಾಗುವುದು.
ಈ ಯೋಜನೆಯು 31-3-2011 ರ ಅಂತ್ಯಕ್ಕೆ ವಿವಿಧ ವಸತಿ ಯೋಜನೆಗಳಡಿಯಲ್ಲಿ ಪೂರ್ಣಗೊಂಡ ಮನೆಗಳಿಗೆ ಮಾತ್ರ ಅನ್ವಯಿಸುತ್ತದೆ. 2011-12 ನೇ ಸಾಲಿನ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆಯೆಂದು ಸರ್ಕಾರ ತನ್ನ ಆದೇಶದಲ್ಲಿ ಸೂಚಿಸಿರುತ್ತದೆ.