Saturday, September 17, 2011

ವಾಸದ ಉದ್ದೇಶದಿಂದ ಮನೆಗಳ ನಿರ್ಮಾಣಕ್ಕೆ ನಿರಾಕ್ಷೇಪಣಾಪತ್ರ ನೀಡಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅಧಿಕಾರ-ಪಾಲೇಮಾರ್

ಮಂಗಳೂರು,ಸೆಪ್ಟೆಂಬರ್.17 : ಕರಾವಳಿ ನಿಯಂತ್ರಣ ವಲಯದ 2 ನೇ ವರ್ಗದಲ್ಲಿ ವಾಸದ ಮನೆಗಳನ್ನು ನಿರ್ಮಿಸಲು ನಿರಾಕ್ಷೇಪಣಾ ಪತ್ರಕ್ಕಾಗಿ ಅರ್ಜಿಗಳನ್ನು ಬೆಂಗಳೂರಿನ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಇಲ್ಲಿಯವರೆಗೆ ಸಲ್ಲಿಸಬೇಕಾಗಿತ್ತು.
ಇದರಿಂದ 4-5 ತಿಂಗಳು ನಿರಾಕ್ಷೇಪಣಾ ಪತರಕ್ಕಾಗಿ ಕಾಯ ಬೇಕಾಗಿತ್ತು.ಆದರೆ ಮಾನ್ಯ ಪರಿಸರ ಖಾತೆ ಸಚಿವರು ಹಾಗೂ ದಕ್ಷಿಣಕನ್ನಡ ಜಿಲ್ಲೆ ಉಸ್ತುವಾರಿ ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಚರ್ಚಿಸಿದ ಮೇರೆಗೆ ದಿನಾಂಕ 15-9-11 ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಇನ್ನು ಮುಂದೆ ನಿರಾಕ್ಷೇಪಣಾ ಪತ್ರವನ್ನು ಆಯಾ ಜಿಲ್ಲೆಯ ಪ್ರಾದೇಶಿಕ ನಿರ್ದೇಶಕರು (ಪರಿಸರ) ಇವರು ನೀಡಲು ನಿರ್ಣಯಿಸಿರುತ್ತಾರೆ.