Monday, September 26, 2011

ಅ.6ರಂದು ವಿಶ್ವೇಶ್ವರಯ್ಯ ಮಾದರಿ ರಸ್ತೆ ಕಾಮಗಾರಿಗೆ ಚಾಲನೆ

ಮಂಗಳೂರು,ಸೆಪ್ಟೆಂಬರ್.26: ಮಂಗಳೂರು ನಗರದ ರಸ್ತೆ ಅಭಿವೃದ್ದಿಯ ಹೊಸ ಆಯಾಮಕ್ಕೆ ಮೊದಲ ಹೆಜ್ಜೆಯಾಗಿ ನಗರದ
ಬಿಲ್ಡರ್ ಹಾಗೂ ಇಂಜನಿಯರ್ ಗಳ ಸಹಕಾರದಲ್ಲಿ ಪಾಲಿಕೆ ವ್ಯಾಪ್ತಿಯ 23 ರಸ್ತೆಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ.
ಇಂದು ಜಿಲ್ಲಾ ಧಿಕಾರಿ ಕಚೇರಿ ಯಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ.ಪಾಲೆ ಮಾರ್ ಅವರ ಅಧ್ಯಕ್ಷ ತೆಯಲ್ಲಿ ನಡೆದ ಬಿಲ್ಡರ್ ಮತ್ತು ಇಂಜನಿ ಯರ್ಸ್ ಅಸೋ ಸಿಯೇ ಶನ್ ಸಹ ಭಾಗಿ ತ್ವದ ಸಭೆ ಯಲ್ಲಿ ಈ ನಿರ್ಧಾರ ಕೈ ಗೊಳ್ಳ ಲಾಯಿತು.60 ಜನ ಇಂಜಿ ನಿಯರ್ ಗಳನ್ನು ರಸ್ತೆ ಕಾಮ ಗಾರಿ ಗಳ ಮೇಲು ಸ್ತುವಾ ರಿಗಾಗಿ ಒದಗಿಸಲು ಇಂಜಿನಿಯರ್ಸ್ ಅಸೋಸಿಯೇಶನ್ ಸಭೆಯಲ್ಲಿ ಒಪ್ಪಿಗೆ ಸೂಚಿಸಿತು. ಅಕ್ಟೋಬರ್ 6 ರಂದು ನಗರದ ಕೆಪಿಟಿಯಿಂದ ಕಾವೂರು ಮರಕಡದವರೆಗಿನ ರಸ್ತೆ(ವಿಮಾನ ನಿಲ್ದಾಣ ರಸ್ತೆ)ಯನ್ನು ವಿಶ್ವೇಶ್ವರಯ್ಯ ಮಾದರಿ ರಸ್ತೆಯನ್ನಾಗಿ ಪರಿವರ್ತಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.ಸಭೆಯ ಬಳಿಕ ಸುದ್ದಿ ಗಾರ ರೊಂದಿಗೆ ಮಾತ ನಾಡಿದ ಜಿಲ್ಲಾ ಉಸ್ತು ವಾರಿ ಸಚಿ ವರು ನಗ ರದ ರಸ್ತೆ ಕಾಮ ಗಾರಿ ಗಳಿಗೆ ಬಿಲ್ಡರ್ ಗಳು ಅಗತ್ಯ ಕಾರ್ಮಿ ಕರನ್ನು ಒದ ಗಿಸ ಲಿದ್ದು, ಇಂಜಿ ನಿಯರ್ ಅಸೋ ಸಿಯೇ ಶನ್ನ ವರು ಕಾಮ ಗಾರಿಯ ಮೇಲು ಸ್ತುವಾ ರಿಗಾಗಿ ಇಂಜ ನಿಯರ್ ಗಳನ್ನು ಒದ ಗಿಸ ಲಿದ್ದಾರೆ. ಕಾಮ ಗಾರಿ ಗಳ ವೆಚ್ಚ ಮತ್ತು ಕಾರ್ಮಿ ಕರ ವೆಚ್ಚ ವನ್ನು ಸರ ಕಾರವೇ ಭರಿ ಸಲಿದೆ.ಅಕ್ಟೋ ಬರ್ 6 ರಿಂದ ಆರಂಭಗೊಳ್ಳುವ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಆರು ತಿಂಗಳೊಳಗೆ ಪೂರ್ಣಗೊಳಿಸಲು ಸಭೆಯಲ್ಲಿ ಕಾಲಮಿತಿ ನಿಗದಿಪಡಿಸಲಾಗಿದೆ. ಕಾಮಗಾರಿಗೆ ಅಗತ್ಯವಾದ ಸಾಮಗ್ರಿಗಳನ್ನು ಸರಕಾರಿ ಸಂಸ್ಥೆಯಾದ ನಿರ್ಮಿತಿ ಕೇಂದ್ರದ ಮೂಲಕ ರಾಜ್ಯ ಸರಕಾರ ಪೂರೈಸಲಿದೆ ಎಂದ ಅವರು ಎಲ್ಲಾ ಕಾಮಗಾರಿಗಳು ಸರ್ಕಾರದ ನಿರ್ದೇಶನ ಮತ್ತು ಕಾನೂನಿನ ಚೌಕಟ್ಟಿನಲ್ಲೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ವಿಧಾನ ಸಭಾ ಉಪಸಭಾಪತಿ ಮತ್ತು ಸ್ಥಳೀಯ ಶಾಸಕರೂ ಆದ ಎನ್. ಯೋಗೀಶ್ ಭಟ್, ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಪ್ರಭಾರ ಅಪರ ಜಿಲ್ಲಾಧಿಕಾರಿ ಕೆ.ಟಿ. ಕಾವೇರಿಯಪ್ಪ, ಬಿಲ್ಡರ್ ಗಳು, ಇಂಜಿನಿಯರ್ಸ್ ಅಸೋಸಿಯೇಶನ್ನ ಪದಾಧಿಕಾರಿಗಳು,ಮತ್ತು ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.