Thursday, September 29, 2011

ಮಂಗಳಗಂಗೋತ್ರಿಯಲ್ಲಿ ಪ್ರವಾಸೋದ್ಯಮ ದಿನಾಚರಣೆ

ಮಂಗಳೂರು,ಸೆಪ್ಟೆಂಬರ್.29: ಭಾರತ ಸಾಂಸ್ಕೃತಿಕ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರವಾಗಿದ್ದು, ಇಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ ಹೇಳಿದ್ದಾರೆ.ಅವರು ವಿಶ್ವ ವಿದ್ಯಾನಿ ಲಯ ದಲ್ಲಿ ಎಂ.ಬಿ.ಎ ಟೂರಿಸಂ ವಿಭಾಗ ಹಮ್ಮಿ ಕೊಂಡಿದ್ದ `ವಿಶ್ವ ಪ್ರವಾ ಸೋದ್ಯಮ ದಿನಾ ಚರಣೆ'ಯನ್ನು ಉದ್ಘಾಟಿಸಿ ಮಾತ ನಾಡಿದರು.ವಿಶ್ವ ದಲ್ಲಿ ಅನೇಕ ರಾಷ್ಟ್ರಗಳಿಗೆ ಪ್ರವಾಸೋ ದ್ಯಮವೇ ದೇಶದ ಆದಾಯದ ಪ್ರಮುಖ ಮೂಲ ವಾಗಿದೆ. ಭಾರತ ದೇಶವು ಪ್ರವಾಸೋ ದ್ಯಮದಲ್ಲಿ ಮುಂಚೂಣಿ ಯಲ್ಲಿದ್ದು ಉತ್ತಮ ವಿದೇಶಿ ವಿನಿಮಯ ಗಳಿಸುತ್ತಿದೆ ಎಂದ ಅವರು ಪ್ರವಾಸೋದ್ಯಮ ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಒಂದು ಅತ್ಯುತ್ತಮ ಮಾಧ್ಯಮವಾಗಿದೆ ಎಂದು ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡ ಹಿರಿಯ ವಿದ್ವಾಂಸ ಡಾ.ಪ್ರಭಾಕರ ಜೋಷಿ ಅವರು ಮಾತನಾಡಿದರು.ದಕ್ಷಿಣ ಕನ್ನಡ ಜಿಲ್ಲಾ ವಾರ್ತಾ ಧಿಕಾರಿ ರೋಹಿಣಿ ಕೆ. ಅವರು ಟೂರಿಸಂ ಕ್ಲಬ್ ನ್ನು ಉದ್ಘಾ ಟಿಸಿದರು.ವಿಶ್ವ ವಿದ್ಯನಿಲಯ ಹಣ ಕಾಸು ಅಧಿಕಾರಿ ಪ್ರೊ.ಫಕೀರಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಂ.ಬಿ.ಎ ವಿಭಾಗ ಮುಖ್ಯಸ್ಥೆ ಮುಸ್ತ್ಯಾರಿ ಬೇಗಂ ಮತ್ತು ಟೂರಿಸಂ ಕ್ಲಬ್ ಕಾರ್ಯದರ್ಶಿ ರೈಸಾ ಸುಲ್ತಾನ್,ಎಂ.ಬಿ.ಎ. ಟೂರಿಸಂ ಸಹಾಯಕ ಪ್ರಾಧ್ಯಾಪಕ ಜೋಸೆಫ್, ಪ್ರೊ.ಮಲ್ಲಿಕಾರ್ಜುನಪ್ಪ, ಶ್ರೀಧರ್ ನಾಯಕ್ ಉಪಸ್ಥಿತರಿದ್ದರು.