Thursday, September 22, 2011

ರಾತ್ರಿ ವಸತಿರಹಿತರಿಗೆ ತಾತ್ಕಾಲಿಕ ವಸತಿ ಕೇಂದ್ರ

ಮಂಗಳೂರು,ಸೆ.21:ಮಂಗಳೂರು ಮಹಾ ನಗರ ಪಾಲಿಕೆ ರಾತ್ರಿ ವಸತಿ ರಹಿತರಿಗೆ,
ನಿರ್ಗತಿ ಕರಿಗೆ ನಗರದಲ್ಲಿ 3.30 ಕೋಟಿ ರೂ. ವೆಚ್ಚದಲ್ಲಿ ತಾತ್ಕಾಲಿಕ ವಸತಿ ಕೇಂದ್ರವನ್ನು ಆರಂಭಿಸುವುದು ಎಂದು ಪಾಲಿಕೆ ಆಯುಕ್ತರಾದ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು.
ನಗರದಲ್ಲಿ ಬುಧವಾರ ಸಂಜೆ ತಾತ್ಕಾಲಿಕ ವಸತಿ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಅವರು,ಪದವಿನಲ್ಲಿ, ಬಂದರಿನಲ್ಲಿ ಇಂತಹುದೇ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದ್ದು ನಗರದಲ್ಲಿ ಕೂಲಿ, ಹಮಾಲಿ ಸೇರಿದಂತೆ ದುಡಿಯುವವರಿಗೆ ರಾತ್ರಿ ತಂಗಲು ಅವಕಾಶ ಮಾಡಿ ಕೊಡಲಾಗುವುದು. ಉಪಮೇಯರ್ ಗೀತಾ ನಾಯಕ್ ಕೇಂದ್ರವನ್ನು ತಾತ್ಕಾಲಿಕ ಕೇಂದ್ರ ಉದ್ಘಾಟಿಸಿದರು.