Sunday, September 18, 2011

ಸ್ವಾತಂತ್ರ್ಯ ಹೋರಾಟ ಸ್ಮರಣೆ ಪ್ರತಿಯೊಬ್ಬರ ಕರ್ತವ್ಯ: ಕರುಣಾಕರ ಉಚ್ಚಿಲ

ಮಂಗಳೂರು,ಸೆಪ್ಟೆಂಬರ್ 18: ಸ್ವಾತಂತ್ರ್ಯಕ್ಕೋಸ್ಕರ ತನ್ನ ಮಕ್ಕಳ ಬಲಿದಾನ ಮಾಡಿದ ಟಿಪ್ಪುವಿನ ದೇಶಭಕ್ತಿಯ ಬಗ್ಗೆ, ನಮ್ಮ ಸ್ವಾತಂತ್ರ್ಯದ ಹೋರಾಟ, ಬಲಿದಾನಗಳ ಬಗ್ಗೆ ಇಂದಿನ ಜನಾಂಗ ತಿಳಿಯಬೇಕಿದೆ. ಇತಿಹಾಸದ ಅರಿವು ವಿದ್ಯಾರ್ಥಿಗಳಿಗಿರಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕರುಣಾಕರ ಕೆ ಉಚ್ಚಿಲ ಅವರು ಹೇಳಿದರು.ಅವರು ಸಂ ಸ್ಕೃತಿ ಮಂತ್ರಾ ಲಯ ನವ ದೆಹಲಿ, ಕನ್ನಡ ಮತ್ತು ಸಂ ಸ್ಕೃತಿ ಇಲಾಖೆ ಬೆಂಗ ಳೂರು ಇವರ ಆಶ್ರ ಯದಲ್ಲಿ ಮಂಗ ಳೂರಿನ ಸೋ ಮೇಶ್ವರ- ಉಚ್ಚಿಲದ ಬೋವಿ ಹಿರಿಯ ಪ್ರಾಥ ಮಿಕ ಶಾಲೆ ಯಲ್ಲಿ ಆಯೋ ಜಿಸ ಲಾದ ಭಾರತ ಸ್ವಾ ತಂತ್ರ್ಯ ಸಂಗ್ರಾ ಮದ 150 ನೇ ವರ್ಷಾ ಚರಣೆ ಮತ್ತು ಟಿಪ್ಪು ಸುಲ್ತಾ ನರ ಸ್ಮರ ಣಾರ್ಥ ಸಾಂಸ್ಕೃ ತಿಕ ಕಾರ್ಯ ಕ್ರಮ ದಲ್ಲಿ ವಿಶೇಷ ಉಪ ಸ್ಥಿತಿ ವಹಿಸಿ ಮಾತ ನಾಡು ತ್ತಿದ್ದರು.1857ರ ಸಿಪಾಯಿ ದಂಗೆ ಯಿಂದ ಆರಂ ಭಿಸಿ ಸ್ವಾ ತಂತ್ರ್ಯ ಲಭಿಸಿ ದವರೆ ಗಿನ ಘಟನೆ ಗಳನ್ನು ಸ್ಮರಿ ಸಿದ ಅವರು, ಗಾಂಧೀ ಜಿಯ ವರ ಜೊತೆ ಗಿದ್ದ ಸುಧಾ ಕರ ಚತು ರ್ವೇದಿ ಅವರ ಅನು ಭವ ಗಳನ್ನು ಸಭೆ ಯಲ್ಲಿ ಹಂಚಿ ಕೊಂಡರು. ಇಲಾಖೆ ವತಿಯಿಂದ ಹಿರಿಯರನ್ನು ಸನ್ಮಾನಿಸಲಾಯಿತು. ಶಾಸಕ ಯು ಟಿ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾ ಯತ್ ಸದಸ್ಯ ರಾದ ಸತೀಶ್ ಕುಂಪಲ, ತಾಲೂಕು ಪಂಚಾ ಯತ್ ಸದಸ್ಯ ರಾದ ಶ್ರೀಮತಿ ಧನ್ಯ ವತಿ, ದೇವಕಿ ರಾಘವ, ಗ್ರಾಮ ಪಂಚಾ ಯತ್ ಅಧ್ಯಕ್ಷ ರಾದ ಶ್ರೀಮತಿ ಕಮಲ, ಉಪಾ ಧ್ಯಕ್ಷ ರಾದ ಕೆ. ರಮೇಶ್ , ಶಾಲಾ ಮುಖ್ಯೋ ಪಾಧ್ಯಾ ಯರು, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಗಳ ವೆಂ.ನಾಯಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಕಾ.ತ. ಚಿಕ್ಕಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.