ನಮ್ಮ ಸಮಾಜದಲ್ಲಿ ಮಹಿಳೆಯರ ಸಾಕ್ಷರತೆ ಬಗ್ಗೆ ನಾವು ಹೆಚ್ಚಿನ ಗಮನ ಹರಿಸಬೇಕಿದೆ.ಕುಟುಂಬದಲ್ಲಿ ಕಲಿತ ಮಹಿಳೆಯರಿದ್ದರೆ ಇಡೀ ಕುಟುಂಬವೇ ಸಾಕ್ಷರ ಕುಟುಂಬವಾಗುತ್ತದೆ. ಸಾಕ್ಷರಸ್ಥರಾಗಿ ಪರಿಸರ ಸ್ವಚ್ಛತೆಗೆ ಗಮನ ಹರಿಸಿ ಪ್ಲಾಸ್ಟಿಕ್ ಮುಕ್ತ ಪರಿಸರ ಮಾಡೋಣ ಎಂದು ಕರೆಯಿತ್ತರು.
ಜಿಲ್ಲಾ ನವಸಾಕ್ಷರರ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ್ಯೆ ಹಾಗೂ ಬನ್ನೂರು ಗ್ರಾಮ ಪಂಚಾಯತ್ ಅದ್ಯಕ್ಷ್ಯೆ ಸೇಸಮ್ಮ ಮಾತನಾಡಿ ಮೊದಲು ನಮ್ಮ ಮನೆ ಸ್ವಚ್ಚ ಮಾಡಿ ನಂತರ ಇತರರಿಗೆ ಸ್ವಚ್ಚತೆ ಬಗ್ಗೆ ತಿಳಿಸಬೇಕೆಂದರು.ಗ್ರಾಮ ಪಂಚಾಯತ್ ಗಳಿಂದ ಸಾಕ್ಷರತಾ ಕಾರ್ಯಕ್ರಮಗಳಿಗೆ ರೂ.25ಸಾವಿರ ಅನುದಾನವನ್ನು ದೊರಕಿಸುವುದಾಗಿ ತಿಳಿಸಿದರು.
ಒಂಬುಡ್ಸ್ ಮನ್ ಶೀನ ಶೆಟ್ಟಿ ಅವರು ಮಾತನಾಡಿ ಅಕ್ಟೋಬರ್ 2 ರ ಗಾಂಧಿಜಯಂತಿಯಂದು ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ,ಸ್ವಚ್ಛ ಹಾಗೂ ಬೃಷ್ಠಾಚಾರ ಮುಕ್ತ ಜಿಲ್ಲೆಯನ್ನಾಗಿಸುವ ಬಗ್ಗೆ ಹಲವು ಗ್ರಾಮ ಪಂಚಾಯತ್ ಗಳು ಪ್ರಮಾಣ ಪತ್ರ ಸ್ವೀಕರಿಸಿದೆ ಎಂದರು. ಇದಕ್ಕಾಗಿ ಗ್ರಾಮ ಪಂಚಾಯತ್ ಗಳೊಂದಿಗೆ ನವಸಾಕ್ಷರ ಸ್ವಯಂ ಸೇವಕರು ಸ್ವಚ್ಛತಾ ಸೈನಿಕರು ಪ್ರತೀ ಮನೆ ಸಾಕ್ಷರ ಮನೆಯಾಗಿಸಿ ಸ್ಚಚ್ಛ ಮನೆಯನ್ನಾಗಿಸಿ ಸಮೃದ್ಧ ಮಾದರಿ ಮನೆಗಳಾಗಿಸುವಲ್ಲಿ ಕಾರ್ಯೋನ್ಮುಖರಾಗುವಂತೆ ತಿಳಿಸಿದರು.
ನವಸಾಕ್ಷರರಾದ ಶ್ರೀಮತಿ ಯಶೋಧ,ಹುಸೇನ್,ನಾರಾಯಣ,ಕಾಂತಾ ಪೂಜಾರಿಮುಂತಾದವರು ಮಾತನಾಡಿದರು.ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಮಮತಾ ಹಾಗೂ ಶ್ರೀಕರೀ ಅವರು ಮಾತನಾಡಿದರು.ವಯಸ್ಕರ ಶಿಕ್ಷಣಾಧಿಕಾರಿ ಮಲ್ಲೇಶಪ್ಪ ವಂದಿಸಿದರು.