Tuesday, September 27, 2011

' ಪ್ರವಾಸೋದ್ಯಮಕ್ಕೆ ಜನರ ಸಹಕಾರ ಅಗತ್ಯ '

ಮಂಗಳೂರು,ಸೆಪ್ಟೆಂಬರ್.27:ಕಡಲ ತೀರದ ಕರಾವಳಿಯಲ್ಲಿ ಪ್ರವಾಸೋದ್ಯಮ ಯಶಸ್ಸು ಕಾಣಬೇಕಾದರೆ ಜನತೆಯ ಸಹಕಾರ ಅಗತ್ಯವಾಗಿ ಬೇಕು. ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕೆಂದು ವಿಧಾನ ಸಭಾ ಉಪಸಭಾಪತಿ ಎನ್.ಯೋಗಿಶ್ ಭಟ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಡಳಿತ, ಪ್ರವಾ ಸೋದ್ಯಮ ಇಲಾಖೆ,ಮಂಗ ಳೂರು ಅಸೋಸಿ ಯೇಷನ್ ಅಫ್ ಟ್ರಾವೆಲ್ ಏಜಂಟ್ ಮತ್ತು ಪಣಂಬೂರು ಬೀಚ್ ಅಭಿ ವೃದ್ದಿ ಸಂಸ್ಥೆ ಗಳ ಸಹ ಭಾಗಿತ್ವ ದಲ್ಲಿ ನಗರ ದಲ್ಲಿ ಆಯೋ ಜಿದ್ದ ವಿಶ್ವ ಪ್ರವಾ ಸೋದ್ಯಮ ದಿನಾ ಚರಣೆ ಯನ್ನು ಉದ್ಘಾ ಟಿಸಿ ಅವರು ಮಾತ ನಾಡಿದರು. ಕರಾ ವಳಿ ಯಲ್ಲಿ ಪ್ರವಾ ಸೋದ್ಯ ಮಕ್ಕೆ ವಿಫುಲ ಅವ ಕಾಶ ಗಳಿವೆ.ಈ ನಿಟ್ಟಿನಲ್ಲಿ ಆನೇಕ ಯೋಜ ನೆಗಳ ಪ್ರಸ್ತಾಪ ವನ್ನು ಸರ್ಕಾರಕ್ಕೆ ಸಲ್ಲಿಸ ಲಾಗಿದೆ.ಮುಂದಿನ ದಿನ ಗಳಲ್ಲಿ ಅವು ಗಳನ್ನು ಹಂತ ಹಂತವಾಗಿ ಅನು ಷ್ಟಾನಕ್ಕೆ ತರು ವುದ ರೊಂದಿಗೆ ಆ ಮೂಲಕ ಮಂಗಳೂರನ್ನು ಪ್ರವಾಸೋದ್ಯಮದಲ್ಲಿ ವಿಶ್ವ ಮಟ್ಟದಲ್ಲಿ ಗುರುತ್ತಿಸುವ ಪ್ರಯತ್ನ ನಡೆಸ ಲಾಗುವುದು ಎಂದರು.ಸಂಸದ ನಳಿನ್ ಕುನಾರ್ ಕಟೀಲ್, ಶಾಸಕರಾದ ಯು.ಟಿ. ಖಾದರ್,ಬಿ.ರಮನಾಥ ರೈ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಎಂ.ಆರ್.ಪ್ರಕಾಶ್,ಮಂಗಳೂರು ಅಸೋಸಿಯೇಷನ್ ಅಫ್ ಟ್ರಾವೆಲ್ ಏಜಂಟ್ ಅಧ್ಯಕ್ಷ ರೋಷನ್ ಪಿಂಟೊ,ಪಣಂಬೂರು ಬೀಚ್ ಅಭಿವೃದ್ದಿ ಸಂಸ್ಥೆಯ ಕಾರ್ಯನಿರ್ವಾಕಧಿಕಾರಿ ಯತೀಶ್ ಬೈಕಂಪಾಡಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.