Thursday, September 22, 2011

ಪಾಲಿಕೆ ಆಯುಕ್ತರಾಗಿ ಡಾ.ಹರೀಶ್ ಕುಮಾರ್

ಮಂಗಳೂರು,ಸೆಪ್ಟೆಂಬರ್.22: ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಡಾ.ಹರೀಶ್ ಕುಮಾರ್ ಅವರು ಅಧಿಕಾರ ಸ್ವೀಕ ರಿಸಿದರು. ಇದು ವರೆಗೆ ಆಯುಕ್ತ ರಾಗಿದ್ದ ಡಾ. ಕೆ. ಎನ್. ವಿಜಯ ಪ್ರ ಕಾಶ್ ಅವರು ನಗರಾ ಭಿವೃದ್ಧಿಯ ಕುರಿತ ಪುಸ್ತಕ ಮತ್ತು ಲೇಖನಿ ಯನ್ನು ನೂತನ ಆಯು ಕ್ತರಿಗೆ ನೀಡುವ ಮೂಲಕ ಅಧಿಕಾರ ಹಸ್ತಾಂ ತರಿಸಿದರು.
ಡಾ.ಹರೀಶ್ ಕುಮಾರ್ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಸಾಯನ ಶಾಸ್ತ್ರ(ಎಂಎಸ್ಸಿ)ದಲ್ಲಿ ಸ್ನಾತಕೊತ್ತರ ಪದವಿ ಪಡೆದಿದ್ದಾರೆ.1999ರ ಬ್ಯಾಚ್ ನ ಕೆಎಎಸ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಬಳಿಕ ದ.ಕ. ಜಿಲ್ಲೆಯಲ್ಲಿಯೇ ಪ್ರೊಬೆಶನರಿ, ಅನಂತರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.