ಎಲ್ಲ ಗ್ರಾಮಪಂಚಾಯಿತಿಗಳು ಕ್ರಿಯಾ ಯೋಜನೆಯೊಂದಿಗೆ ಮಾಹಿತಿಯನ್ನುತಮಗೆ ನಾಲ್ಕು ದಿನಗಳೊಳಗಾಗಿ ಕಳುಹಿಸಿಕೊಡಬೇಕು ಎಂದ ಅವರು,ಉಡುಪಿ ಜಿಲ್ಲೆ ಈ ನಿಟ್ಟಿನಲ್ಲಿ ಮಾದರಿ ಕೆಲಸ ಮಾಡಿದೆಎಂದರು.ಜಾತಿಆಧಾರಿತ ಗಣತಿ ಸಂದರ್ಭದಲ್ಲಿ ಅಂಗವಿಕಲರನ್ನು ಸೇರಿಸಬೇಕೆಂದು ಎಂದು ಸರ್ಕಾರಕ್ಕೆ ತಾವು ಸಲಹೆ ಮಾಡಿರುವುದಾಗಿ ನುಡಿದರು.
ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿರುವ 203 ಗ್ರಾಮಪಂಚಾಯಿತಿಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು 36 ಜನ ಹಾಗೂ ಒಬ್ಬರೇ ಒಬ್ಬ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿದ್ದು ಇವರಿಗೆ ಗ್ರಾಮಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅನುದಾನದಿಂದ ಕನಿಷ್ಠ ಭತ್ಯೆ ನೀಡಿದರೆ ಕರ್ತವ್ಯ ನಿರ್ವಹಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆಎಂದರು.
ಜಿಲ್ಲೆಯ ಎಲ್ಲ ಗ್ರಾಮ ಪಂಚಾ ಯತ್ ಮತ್ತು ತಾಲೂಕು ಪಂಚಾ ಯತ್ ನಲ್ಲಿ ಅಂಗ ವಿಕ ಲರ ಅಭಿ ವೃದ್ಧಿಗೆ ಅನು ದಾನ ಮೀಸ ಲಿಟ್ಟಿ ರುವುದು ಶ್ಲಾಘ ನೀಯ ಬೆಳ ವಣಿಗೆ ಎಂದ ಅವರು, ಸಮೀ ಕ್ಷೆಗೆ ಉತ್ತಮ ತರ ಬೇತಿಯ ಅಗತ್ಯ ವಿದೆ ಎಂದರು.ವಿಶ್ವ ಆರೋಗ್ಯ ಸಂಸ್ಥೆಯ ಮಾನ ದಂಡ ದಂತೆ ಹತ್ತು ಶೇಕಡ ಅಂಗವೈಕಲ್ಯವಿದ್ದರೂ ಅವರು ಅಂಗವಿಕಲರೇ ಎಂದರು.ಮಾಸಾಶನಕ್ಕೆ ಮಾತ್ರ ಆದಾಯ ಪ್ರಮಾಣ ಪತ್ರ ಅಗತ್ಯವಿದೆ.ಉಳಿದೆಲ್ಲ ಸೌಲಭ್ಯಗಳಿಗೆ ಅವರು ಅಂಗವಿಕಲರಾದರೆ ಸಾಕು ಎಂಬುದನ್ನು ಸ್ಪಷ್ಟ ಪಡಿಸಿದರು.ಅಂಗವಿಕಲರ ಮನೆ ದುರಸ್ತಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಅಪರ ಜಿಲ್ಲಾಧಿಕಾರಿ ಕೆ ಟಿ ಕಾವೇರಿಯಪ್ಪಅವರು ಸಮಸ್ಯೆ ಪರಿಹಾರಕ್ಕೆ ಸಲಹೆ ನೀಡಿದರು.ಅಂಗವಿಕಲರ ಹೆಸರಿನಲ್ಲಿ ಮನೆಯ ದಾಖಲೆ ಪತ್ರಇಲ್ಲದಿದ್ದರೆ, ಮಹಜರು ಮಾಡಿ ಇಂದಿನ ಸಭೆಯ ನಡಾವಳಿ ಆದೇಶವನ್ನು ಲಗತ್ತಿಸಿ ಎಂದರು.
ನೇರ ಹಾಗೂ ಪರೋಕ್ಷ ಪುನರ್ ವಸತಿಕಲ್ಪಿಸುವ ಬಗ್ಗೆಯೂ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು.ಸ್ಥಳೀಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದರೆ ಸಮಸ್ಯೆಯ ಪ್ರಮಾಣ ಕಡಿಮೆಯಾಗಲಿದೆ ಎಂದರು.ನಗರಾಭಿವೃದ್ಧಿ ಕೋಶದ ಅಧಿಕಾರಿ ತಾಕತ್ ರಾವ್, ಅಸಿಸ್ಟೆಂಟ್ ಸೆಕ್ರೆಟರಿ ಶಿವರಾಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಶಕುಂತಳಾ, ಅಂಗವಿಕಲ ಕಲ್ಯಾಣಾಧಿಕಾರಿ ಗಂಗಾಧರಯ್ಯ ಉಪಸ್ಥಿತರಿದ್ದರು.ಸಭೆಯಲ್ಲಿ ಪಾಲ್ಗೊಂಡ ಅಂಗವಿಕಲರು ಹಾಗೂ ಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ರಾಜಣ್ಣ ಅವರ ಗಮನಕ್ಕೆ ತಂದರು.ಸಭೆಯ ಬಳಿಕ ಜಿಲ್ಲಾಧಿಕಾರಿಗಳು, ಸಿಇಒ ಮತ್ತು ಪಾಲಿಕೆ ಆಯುಕ್ತರು ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ಜಿಲ್ಲೆಯಲ್ಲಿ ಅಂಗವಿಕಲರಿಗಾಗಿರುವ ಸೌಲಭ್ಯ ನೀಡುವುದಾಗಿ ಹೇಳಿದರು.