Tuesday, September 20, 2011

'ಬದಲಾವಣೆಯ ಹರಿಕಾರರಾಗಿ'

ಮಂಗಳೂರು,ಸೆಪ್ಟೆಂಬರ್.20 :ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪುವಲ್ಲಿಸಮನ್ವಯಕಾರರ ಪಾತ್ರ ಪ್ರಮುಖವಾಗಿದ್ದು, ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಸಮನ್ವಯಕಾರರ ಪಾತ್ರ ಹಿರಿದು ಎಂದು ರೋಶನಿಲಯ ಪ್ರಾಂಶುಪಾಲರಾದ ಜೆಸಿಂತ ಡಿಸಿಲ್ವಾ ಅವರು ಹೇಳಿದರು.
ಇಂದು ನಗರದ ನಂತೂ ರಿನ ಶಾಂತಿ ಕಿರಣ ದ ಪ್ಯಾಸ್ಟರ್ ಇನ್ಸ್ಟಿ ಟ್ಯೂಟ್ ನಲ್ಲಿ ಜಿಟಿ ಝಡ್(ಜ ರ್ಮನ್ ಟೆಕ್ನಿ ಕಲ್ ಕೋ ಆಪ ರೇಷನ್) ಸಹ ಯೋಗ ದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗ ಳೂರು, ಬಂ ಟ್ವಾಳ ತಾಲೂಕು ಗಳ ಗ್ರಾಮ ಪಂಚಾ ಯಿತಿ ಮತ್ತು ಸಮು ದಾಯ ಸೌಲಭ್ಯ ಕೇಂದ್ರ ಗಳಲ್ಲಿ ಕ ರ್ತವ್ಯ ನಿರ್ವ ಹಿಸ ಲಿರುವ ಸಮು ದಾಯ ಸೌಲಭ್ಯೀ ಕರಣಿ ಕರಿಗೆ 3 ದಿನಗಳ ತರ ಬೇತಿ ಕಾರ್ಯ ಕ್ರಮ ದಲ್ಲಿ ಮುಖ್ಯ ಅತಿಥಿ ಯಾಗಿ ಮಾತ ನಾಡು ತ್ತಿದ್ದರು.
ಸಾಮಾಜಿಕ ಬದಲಾವಣೆಯ ಹರಿಕಾರರು ಇಂದು ತರಬೇತಿ ಪಡೆಯಲಿರುವವರು ಎಂದ ಅವರು,ತಮ್ಮ ಪ್ರದೇಶದಲ್ಲಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ದೊರೆಯಲಿರುವ ಸೌಲಭ್ಯಗಳನ್ನು ಒದಗಿಸಬೇಕು.ಅವರ ಪ್ರಶ್ನೆಗಳಿಗೆ, ಸಂಶಯಗಳಿಗೆ ಉತ್ತರಿಸುವ ಅವರಿಂದ ದಾಖಲೆಗಳನ್ನು ಪಡೆಯುವ ಸಾಮಥ್ರ್ಯವಿರಬೇಕು.ಅವರಲ್ಲಿ ಜೀವನೋತ್ಸಾಹ ತುಂಬಲು ಶಕ್ತರಾಗಬೇಕು ಎಂದರು.
ಪ್ರಪಂಚ ಇಂದು ಆರ್ಥಿಕ ಹಿಂಜರಿ ತದಲ್ಲಿ ನಲು ಗುತ್ತಿ ದ್ದರೂ ನಮ್ಮ ದೇ ಶಕ್ಕೆ ಇದರ ಅನು ಭವ ವಾಗ ದಿರಲು ನಮ್ಮ ಜೀವನ ಮಟ್ಟ ಕಾರಣ. ಇಂ ದಿಗೂ ಗ್ರಾಮಾಂ ತರ ಪ್ರದೇಶ ದಲ್ಲಿ ಕನಿಷ್ಠ ಅಗತ್ಯ ಗಳೊಂ ದಿಗೆ ನಮ್ಮ ಜೀ ವನ ಸಾಗು ತ್ತಿರು ವುದೇ ಇದಕ್ಕೆ ಕಾರಣ ಎಂದರು.
ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಮಿಕ ಆಯುಕ್ತರಾದ ವೆಂಕಟೇಶ ಅಪ್ಪಯ್ಯ ಶಿಂಧಿಹಟ್ಟಿ ಅವರು, ಎರಡು ವರ್ಷದಿಂದಜಿ ಟಿ ಝಡ್ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಲು ಹಂತಹಂತವಾಗಿ ಕ್ರಮ ಕೈಗೊಂಡಿದ್ದು, ಒಂದೆಡೆಯಲ್ಲಿ ವಿವಿಧ ಇಲಾಖೆಗಳ ಸೌಲಭ್ಯಗಳು ಅರ್ಹರಿಗೆ ದೊರೆಯುವಂತಾಗಿಸಲು ಈ ಯೋಜನೆ ರೂಪಿಸಲಾಗಿದೆ ಎಂದರು. ಅಸಂಘಟಿತ ಕಾರ್ಮಿಕರೇ ಹೆಚ್ಚಾಗಿರುವ ನಮ್ಮಲ್ಲಿ ಅವರಿಗೊಂದು ಸಾಮಾಜಿಕ ಭದ್ರತೆ ನೀಡುವ ಯೋಜನೆ ಉತ್ತಮದ್ದಾಗಿದೆ ಎಂದರು. ಕೃಷಿ ಕಾರ್ಮಿಕರು, ನಿರ್ರ್ಮಾಣ ಕಾರ್ಮಿಕರು, ಗೃಹ ಕೃತ್ಯದ ಕಾರ್ಮಿಕರು, ವಸ್ತ್ರೋದ್ಯಮ ಕಾರ್ಮಿಕರು ಮತ್ತು ಅಗರ ಬತ್ತಿ ಕಾರ್ಮಿಕರಿಗೆ ಸಂಬಂಧಿಸಿ
ಸರ್ಕಾರದ ಸಾಮಾಜಿಕ ಸಹಾಯ ಕಾರ್ಯಕ್ರಮಗಳಾದ ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ, ಸ್ತ್ರೀ ಶಕ್ತಿ, ವೃದ್ಧಾಪ್ಯ ವೇತನ, ಹೊಸ ಪಿಂಚಣಿ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗಳಂತಹ ಸೌಲಭ್ಯಗಳನ್ನು ಅಸಂಘಟಿತ ವಲಯದವರಿಗೆ ಒದಗಿಸುವುದರೊಂದಿಗೆ ಪ್ರಥಮ ಹಂತದಲ್ಲಿ ಜಿಲ್ಲೆಯ ಮಂಗಳೂರು ಮತ್ತು ಬಂಟ್ವಾಳದ ಐವತ್ತು ಗ್ರಾಮಪಂಚಾಯಿತಿ ಹಾಗೂ ವಾರ್ಡುಗಳಲ್ಲಿ ಜಾರಿಗೊಳಿಸಲಾಗುವುದು ಎಂದರು. ತರಬೇತಿ ಸಮನ್ವಯಾಧಿಕಾರಿ ಶ್ರೀಮತಿ ಜಲಜಾ, ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ್, ಶಂಕರ್ ಉಪಸ್ಥಿತರಿದ್ದರು. ಕುಮಾರಿ ಸ್ವಾತಿ ಪ್ರಾರ್ಥಿಸಿದರು.ಜಿಲ್ಲಾ ಸಮನ್ವಯಾಧಿಕಾರಿ ಅಕ್ಷತಾ ಸ್ವಾಗತಿಸಿದರು.ಹಿರಿಯ ಕಾರ್ಮಿಕ ನಿರೀಕ್ಷಕರಾದ ಸತ್ಯನಾರಾಯಣ ವಂದಿಸಿದರು.