Friday, December 31, 2010

ಜಿಲ್ಲೆಯಲ್ಲಿ ಶಾಂತಿಯುತ 67.76% ಮತದಾನ: ಜಿಲ್ಲಾಧಿಕಾರಿ

ಮಂಗಳೂರು, ಡಿಸೆಂಬರ್.31: ದಕ್ಷಿಣ ಕನ್ನಡ ಜಿಲ್ಲಾಡಳಿತ ನಡೆಸಿದ ಚುನಾವಣಾ ಪೂರ್ವ ಸಿದ್ಧತೆಗಳಿಂದಾಗಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನವಾಗಿದ್ದು, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತಿಳಿಸಿದರು.
ಪೂರ್ವ ಸಿದ್ಧತೆಗಳು ಫಲಕಾ ರಿಯಾ ಗಿದ್ದು, ಜಿಲ್ಲೆ ಯಲ್ಲಿ ಒಟ್ಟು 7 ಕಡೆ ಮತ ಯಂತ್ರ ದಲ್ಲಿ ತೊಂದರೆ ವರದಿ ಯಾಗಿ ದ್ದರೂ ತಕ್ಷಣವೇ ಸೂಕ್ತ ಕ್ರಮ ಕೈಗೊಂಡಿದ್ದು, ಎಲ್ಲೆಡೆ ಮತ ದಾರ ರಿಂದ ಜಿಲ್ಲಾ ಡಳಿತದ ಕ್ರಮ ಗಳಿಗೆ ಶ್ಲಾಘನೆ ವ್ಯಕ್ತ ವಾಗಿದೆ ಎಂದರು. ಮಂಗಳೂರು ತಾಲೂಕಿನ ಪೆರ್ಮುದೆ, ಕಿನ್ನಿಗೋಳಿ ಯಲ್ಲಿ ಬಂಟ್ವಾಳದ ಶಂಬೂರಿನಲ್ಲಿ, ಸುಳ್ಯದ ಅಡ್ಪಾಂಗಾಯ, ಬೆಳ್ಳಾರೆ, ಬೆಳ್ತಂಗಡಿ, ಕೊಕ್ಕಡದಲ್ಲಿ ಮತಯಂತ್ರ ಲೋಪ ವರದಿಯಾದ ತಕ್ಷಣವೇ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. 1027 ಮತದಾನ ಕೇಂದ್ರಗಳಲ್ಲಿ ಒದಗಿಸಿದ್ದ ಸುವಿಧಾ ವ್ಯವಸ್ಥೆ, ಹಾಗೂ ಸಂಪರ್ಕ ವ್ಯವಸ್ಥೆ (ಕಮ್ಯುನಿಕೇಷನ್ ಸಿಸ್ಟಮ್) ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಬಗ್ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದರು.
ಬೆಳ್ತಂಗಡಿಯ ಎಳನೀರು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದು, ಅಂತಿಮ ಕ್ಷಣ ದವ ರೆಗೂ ಜಿಲ್ಲಾ ಡಳಿತ ಮತ ದಾನ ಮಾಡಲು ಮತ ದಾರರ ಮನ ವೊಲಿ ಕೆಗೆ ಪ್ರಯ ತ್ನಿಸಿದೆ; ಆದರೆ ಮತ ದಾನ ವಾಗಿಲ್ಲ ಎಂದ ಜಿಲ್ಲಾಧಿ ಕಾರಿಗಳು, ಉಳಿದಂತೆ ನಕ್ಸಲ್ ಪೀಡಿತ ಪ್ರದೇಶ ಸೇರಿದಂತೆ ಅತಿಸೂಕ್ಷ್ಮ ಹಾಗೂ ಸೂಕ್ಷ್ಮ ಪ್ರದೇಶ ಗಳಲ್ಲೂ ಜನರು ಮತದಾನದಲ್ಲಿ ಪಾಲ್ಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.