Saturday, December 4, 2010

ಮಂಗಳೂರಿನಲ್ಲಿ ಎರಡು ಭೂಮಿ ಕೇಂದ್ರಗಳ ಆರಂಭ: ಶಾಸಕ ಯೋಗಿಶ್ ಭಟ್

ಮಂಗಳೂರು, ಡಿಸೆಂಬರ್ 04:ಸಾರ್ವಜನಿಕರಿಗೆ ಅನುಕೂಲವಾಗುವ ಸಲುವಾಗಿ ಮಂಗಳೂರು ತಾಲೂಕಿನಲ್ಲಿ ಇನ್ನೂ ಎರಡು ಭೂಮಿ ಕೇಂದ್ರಗಳನ್ನು ಸರ್ಕಾರ ಮಂಜೂರು ಮಾಡಿದೆಯೆಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್.ಯೋಗೀಶ್ ಹೇಳಿದ್ದಾರೆ. ಅವರು ಇಂದು ನಗರದ ಪುರಭವನದಲ್ಲಿ ಏರ್ಪಡಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಮಂಗಳೂರು ನಗರ ಪಾಲಿಕೆಯ ಪ್ರಮುಖ ರಸ್ತೆಗಳ ಕಾಂಕ್ರಿಟೀಕರಣ ಕಾಮಗಾರಿ ಮುಗಿದ ಬಳಿಕ ಒಳ ರಸ್ತೆಗಳ ಕಾಮಾಗಾರಿ ಕೈ ಗೆತ್ತಿಕೊಳ್ಳ ಲಾಗುವುದು,ಇದಕ್ಕಾಗಿ 42 ಕೋಟಿ ರೂಪಾಯಿಗಳನ್ನು ಮೀಸಲಿ ಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಮತ್ಸ್ಯಾಶ್ರಯ ಯೋಜನೆಯಡಿಯಲ್ಲಿ ವಸತಿ ಹೀನ ಮೀನುಗಾರರಿಗೆ ತಲಾ ರೂ.40,000 ದಂತೆ ಇಬ್ಬರು ಮೀನುಗಾರರಿಗೆ ಸಹಾಯಧನದ ಚೆಕ್ ಗಳನ್ನು ಶಾಸಕರು ವಿತರಿಸಿದರು. ಅಂಗವಿಕಲ ,ವಿಧವಾ ಹಾಗೂ ಸಂಧ್ಯಾ ಸುರಕ್ಷತಾ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರಗಳನ್ನು ಸಹ ಹಂಚಲಾಯಿತು.ಮಹಾನಗರಪಾಲಿಕೆ ಮೇಯರ್ ರಜನಿ ದುಗ್ಗಣ್ಣ,ಉಪ ಮೇಯರ್ ರಾಜೇಂದ್ರ ಕುಮಾರ್,ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ,ಮಂಗಳೂರು ಉಪವಿಭಾಗಧಿಕಾರಿ ಪ್ರಭುಲಿಂಗ ಕವಳಿಕಟ್ಟಿ,ಎಸಿಪಿ ರವೀಂದ್ರ ಗಡದಿ,ನಗರಪಾಲಿಕೆ ಆಯುಕ್ತರಾದ ಡಾ.ವಿಜಯಪ್ರಕಾಶ್,ಮೂಡ ಆಯುಕ್ತ ಮಧುಕರ್ ಗಡ್ಕರ್, ಪಾಲಿಕೆ ಸದಸ್ಯರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.