Thursday, December 9, 2010

ಭಾರತ ವೈವಿಧ್ಯಮಯ ಸಂಸ್ಕೃತಿಯ ತವರು: ರಾಷ್ಟ್ರಪತಿ

ಮಂಗಳೂರು,ಡಿ.09:ಜಾತ್ಯಾತೀತ ರಾಷ್ಟ್ರ ಭಾರತ ವೈವಿಧ್ಯಮಯ ಸಂಸ್ಕೃತಿಯ ತವರೂರು. ನಮ್ಮಲ್ಲಿ ಹಲವು ಭಾಷೆ,ಜಾತಿ,ಸಂಸ್ಕೃತಿಗಳಿದ್ದು,ದೇಶದ ಅಭಿವೃದ್ಧಿಗೆ ಪ್ರತಿಯೊಂದು ಸಂಸ್ಕೃತಿ, ಭಾಷೆಯ ಕೊಡುಗೆ ಅನನ್ಯ ಎಂದು ಭಾರತದ ಸನ್ಮಾನ್ಯ ರಾಷ್ಟ್ರಪತಿ ಶ್ರೀಮತಿ ಪ್ರತಿಭಾಸಿಂಗ್ ದೇವಿ ಪಾಟೀಲ್ ಅವರು ಹೇಳಿದರು.ಅವ ರಿಂದು ನಗ ರದ ನೆಹರು ಮೈದಾನಿ ನಲ್ಲಿ ವಿಶ್ವ ಕೊಂಕಣಿ ಏಕತಾ ದಿವಸ ಸಮಾ ವೇಶ ದಲ್ಲಿ ಪಾ ಲ್ಗೊಂಡು ಮಾತ ನಾಡು ತ್ತಿದ್ದರು. 1567 ರಲ್ಲಿ ಕೊಂಕಣಿ ಭಾಷೆಯ ಡಿಕ್ಷ ನರಿ ಪ್ರಕಟ ಗೊಂಡಿದ್ದು ಪ್ರಾಚೀನ ಭಾಷೆ ಗಳಲ್ಲಿ ಒಂದಾ ಗಿದೆ. ಜಾತಿ, ಧರ್ಮ ವನ್ನು ಮೀರಿ ಕೊಂಕಣಿ ಭಾಷೆ ಬೆಳೆ ದಿದ್ದು, ಸಂವಿ ಧಾನದ 8ನೇ ಪರಿಚ್ಛೇ ದದಲ್ಲೂ ಭಾಷೆಗೆ ಸ್ಥಾನ ದೊರೆ ತಿದೆ ಎಂದರು. ಶಿಕ್ಷಣ ಸಂಸ್ಥೆ ಗಳನ್ನು ಬಹ ಳಷ್ಟು ವರ್ಷ ಗಳ ಹಿಂದೆ ಯೇ ಕೊಂಕ ಣಿಗರು ಸಮಾ ಜಕ್ಕೆ ನೀಡಿದ್ದು, ದೇಶ ವನ್ನು ಅಭಿ ವೃದ್ಧಿ ಪಥ ದಲ್ಲಿ ಕೊಂಡೊ ಯ್ಯಲು ಕೊಂಕಣಿ ಭಾಷಿ ಗರು ನೀಡಿದ ಕೊಡುಗೆ ಅತ್ಯ ಮೂಲ್ಯ ವಾದುದು ಎಂದರು.ವೈವಿಧ್ಯ ತೆಯಲ್ಲಿ ಏಕತೆ, ಶಾಂತಿ ಸಹ ಬಾಳ್ವೆ ಭಾರತ ದೇಶದ ಪ್ರಮುಖ ಲಕ್ಷಣ ವಾಗಿದ್ದು, ಕೊಂಕಣಿ ಭಾಷೆ ಹಾಗೂ ಜನರೂ ಇದರಲ್ಲಿ ಗುರುತಿ ಸಿಕೊಂ ಡಿದ್ದಾರೆ ಎಂದರು.ರಾಜ್ಯ ಸರ್ಕಾ ರದ ಪ್ರತಿ ನಿಧಿ ಯಾಗಿ ಆಗಮಿ ಸಿದ್ದ ಉನ್ನತ ಶಿಕ್ಷಣ ಸಚಿವ ರಾದ ಡಾ ವಿ. ಎಸ್. ಆಚಾರ್ಯ ಅವರು, ಕೊಂಕಣಿ ಸಮ್ಮೇ ಳನಕ್ಕೆ ಶುಭ ಹಾರೈ ಸಿದರು. ಉತ್ತರ ಕಾಂಡ ರಾಜ್ಯ ಪಾಲ ರಾದ ಶ್ರೀಮತಿ ಮಾರ್ಗ ರೆಟ್ ಆಳ್ವ ಕೊಂಕಣಿ ಎಂದು ಗುರುತಿ ಸಿಕೊ ಳ್ಳಲು ತಮಗೆ ಹೆಮ್ಮೆ ಎಂದರು. ರಾಜ್ಯ ಪಾಲ ರಾದ ಹಂಸ ರಾಜ್ ಭಾರ ದ್ವಾಜ ಅವರು ಸಭೆ ಯನ್ನು ದ್ದೇಶಿಸಿ ಮಾತ ನಾಡಿದರು. ಶ್ರೀಮತಿ ಪ್ರಫುಲ್ಲತಾ ಭಾರ ದ್ವಾಜ, ಶ್ರೀ ದೇವಿ ಸಿಂಗ್ ಶೆಖಾ ವತ್, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಡೋಲ್ಪಿ ಡಿ ಸೋಜಾ ಅವರು ವೇದಿಕೆಯಲ್ಲಿದ್ದರು. ರೊನಾಲ್ಡ್ ಕುಲಾಸೋ ಸ್ವಾಗತಿಸಿದರು.