Saturday, December 4, 2010

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಇಳಿಕೆ: ಸುಭೋದ್ ಯಾದವ್

ಮಂಗಳೂರು, ಡಿಸೆಂಬರ್ 04:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮರ್ಪಕ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದಿಂದಾಗಿ ಒಂದು ಸಾವಿರ ಶಿಶುಗಳ ಜನನದಲ್ಲಿ ಶಿಶು ಮರಣ ಪ್ರಮಾಣ 10-11 ಕ್ಕೆ ಇಳಿದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಭೋದ್ ಯಾದವ್ ತಿಳಿಸಿದ್ದಾರೆ.ಅವರು ಇಂದು ನಗರದ ವೆನ್ ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಯುನಿಸೆಫ್ ವತಿಯಿಂದ ಆಯೋಜಿಸಿದ್ದ ಶಿಶು ಮರಣ ಪ್ರಕರಣ ಪರಿಶೀಲನಾ ಪದ್ಧತಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆ ಅತ್ಯಂತ ವಿದ್ಯಾ ವಂತ ರಿರುವ ಜಿಲ್ಲೆ ಯಾಗಿದ್ದು ಅಭಿವೃದ್ಧಿ ಶೀಲ ರಾಷ್ಟ್ರ ಗಳಲ್ಲಿ ಇರು ವಂತೆ ಶಿಶು ಮರಣ ಪ್ರಮಾಣ 2-3 ಕ್ಕೆ ಬರ ಬೇಕು.ಈ ದಿಸೆಯಲ್ಲಿ ಆರೋಗ್ಯ ಕಾರ್ಯ ಕ್ರಮಗಳ ಅನು ಷ್ಟಾನ ಜಿಲ್ಲೆಯಲ್ಲಿ ಇನ್ನು ಹೆಚ್ಚು ಪರಿಣಾ ಮಕಾರಿಯಾಗುವಂತೆ ಕ್ರಮ ವಹಿಸಬೇಕೆಂದರು.
ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ವರದಿಗಳು ಸಮರ್ಪಕವಾಗಿಲ್ಲ.ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂಕೆಲವೊಮ್ಮೆ ಮನೆಗಳಲ್ಲಿ ಆಗುವ ಶಿಶು ಮರಣ ವರದಿಗೆ ಸೇರಿರುವುದಿಲ್ಲ.ಆದ್ದರಿಂದ ನಿಖರವಾದ ಶಿಶು ಮರಣಗಳ ದಾಖಲೆಯಾಗಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಾನವನ ಅಭಿವೃದ್ಧಿ ಸೂಚ್ಯಂಕದಲ್ಲಿ ಶಿಶು ಮರಣ ಪ್ರಮಾಣ ಅತ್ಯಂತ ಪ್ರಮುಖ.ಎಲ್ಲಾ ರಂಗಗಳಲ್ಲಿ ಅತ್ಯಂತಮುಂದುವರಿದ ದ.ಕ.ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ವರದಿಗಳು ವಿಭಿನ್ನ ರೀತಿಯ ಅಂಕಿ ಅಂಶಗಳಿಂದ ಕೂಡಿದೆ. ಆದ್ದರಿಂದ ಶಿಶು ಮರಣ ಖಾಸಗಿ ಆಸ್ಪತ್ರೆಯಲ್ಲಿ ಆಗಲೀ ಅಥವಾ ಸರಕಾರ ಆಸ್ಪತ್ರೆಯಲ್ಲೇ ಆಗಲಿ ಮನೆಯಲ್ಲೇ ಆಗಲಿ ಅದು ಸರಿಯಾದ ರೀತಿ ದಾಖಲಾತಿ ಆಗುವ ಕಾರ್ಯ ಪ್ರಾಮಾಣಿಕವಾಗಿ ಆಗಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್ ಅವರು ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀ ರಂಗಪ್ಪ ಅವರು ಪ್ರಾಸ್ತಾ ವಿಕ ವಾಗಿ ಮಾತ ನಾಡಿ 2005 ಕ್ಕಿಂತ ಮೊದಲು ರಾಷ್ಟ್ರ ಮಟ್ಟ ದಲ್ಲಿ ಶಿಶು ಮರಣ 60,ರಾಜ್ಯ ಮಟ್ಟ ದಲ್ಲಿ ಈ ಪ್ರಮಾಣ 52 ಇದ್ದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದು 14.6 ಆಗಿತ್ತು.ಆದರೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಆರಂಭವಾದ ನಂತರ ರಾಷ್ಟ್ರ ಮಟ್ಟದಲ್ಲಿ ಶಿಶು ಮರಣ ಪ್ರಮಾಣ 53, ರಾಜ್ಯ ಮಟ್ಟದಲ್ಲಿ 45 ಇದ್ದಾಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಪ್ರಮಾಣ 10.5 ಆಗಿತ್ತು ಎಂದು ತಿಳಿಸಿದರು. ಕಸ್ತೂರ್ಬಾ ವೈದ್ಯ ಕಾಲೇಜಿನ ಮಕ್ಕಳ ವಿಭಾಗದ ಪ್ರೊ.ಬಿ.ಎಸ್.ಬಾಳಿಗ,ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕರಾದ ಪ್ರೊ.ಎಸ್.ಶಿವಾನಂದ,ಹೈದರಾಬಾದ್ನ ಯುನಿಸೆಫ್ ಸಂಸ್ಥೆಯ ಡಾ. ಸಂಜೀವ ಉಪನಿರ್ದೇಶಕರಾದ ಡಾ.ಲಕ್ಷ್ಮಿನಾರಾಯಣ ಮುಂತಾದವರು ಉಪಸ್ಥಿತರಿದ್ದರು.