Thursday, December 30, 2010

ಪಂಚಾಯತ್ ಮತದಾನಕ್ಕೆ ದ.ಕ ಜಿಲ್ಲಾಡಳಿತ ಸರ್ವಸನ್ನದ್ದ

ಮಂಗಳೂರು,ಡಿ.30:ದಕ್ಷಿಣ ಕನ್ನಡ ಜಿಲ್ಲೆಯ 35 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಮತ್ತು 129 ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಡಿಸೆಂಬರ್ 31,2010ರಂದು ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ಒಟ್ಟು 1027 ಮತಗಟ್ಟೆಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತಿಳಿಸಿದರು.
ಅವರಿಂದು ತಮ್ಮ ಕಚೇರಿಯಲ್ಲಿ ಚುನಾವಣೆ ಪೂರ್ವಸಿದ್ಧತೆಗೆ ಸಂಬಂಧ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯ ನ್ನುದ್ದೇಶಿಸಿ ಮಾತನಾಡು ತ್ತಿದ್ದರು.ಚುನಾವಣೆಯನ್ನು ಮುಕ್ತವಾಗಿ, ನಿಷ್ಪಕ್ಷಪಾತವಾಗಿ,ಶಾಂತಿಯುತವಾಗಿ ನಡೆಸಲು ಎಲ್ಲ ರೀತಿಯ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರು, ಮತದಾರರು, ಮತ್ತು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಸಹಕರಿಸಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅಂತಿಮವಾಗಿ 116 ಮಂದಿ ಕಣದಲ್ಲಿರುವರು. ತಾಲೂಕುಪಂಚಾಯಿತಿಯಲ್ಲಿ 374 ಸ್ಪರ್ಧಿಗಳಿರುವರು. ಒಟ್ಟು 925969 ಮತದಾರರಿದ್ದು,462135 ಪುರುಷ ಮತದಾರರು, 463834 ಮಹಿಳಾ ಮತದಾರರಿದ್ದಾರೆ. 1027 ಮತಗಟ್ಟೆಗಳಲ್ಲಿ 109 ಅತಿಸೂಕ್ಷ್ಮ, 133 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ.
ಒಟ್ಟು 6780 ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿರುವರು. 133 ಸೆಕ್ಟರ್ ಅಧಿಕಾರಿಗಳಿರುವರು.ಒಟ್ಟು 423 ವಾಹನಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಲಾಗಿದೆ. 242 ವಿಡಿಯೋ ಕ್ಯಾಮರಾಗಳನ್ನು ಮತಗಟ್ಟೆಯಲ್ಲಿ ಸಂದಿಗ್ದ ಘಟನೆಗಳ ವಿಡಿಯೋ ಚಿತ್ರೀಕರಣಕ್ಕೆ ಬಳಸಲಾಗಿದೆ. ಸೇವಾ ಮತದಾರರ ಸಂಖ್ಯೆ 883. ಅಂಚೆ ಮತಪತ್ರ ನೀಡಿಕೆ 883. ಸಿಬ್ಬಂದಿಗಳ ಸಂಖ್ಯೆ 1211. ಅಂಚೆ ಮತಪತ್ರ ನೀಡಿಕೆ 1126. ಒಟ್ಟು 2009.
ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ಅಗತ್ಯ ಔಷಧವಿರುವ ಮೆಡಿಕಲ್ ಕಿಟ್ ನ್ನು ಸರಬರಾಜು ಮಾಡಲಾಗಿದೆ. ಸಿಬ್ಬಂದಿಗಳಲ್ಲಿ ಯಾವುದೇ ರೀತಿ, ಗೊಂದಲ ಅಥವಾ ಮಾಹಿತಿ ಕೊರತೆ ನಿವಾರಿಸಲು ಜಿಲ್ಲಾ ಚುನಾವಣಾ ಮ್ಯಾನೇಜ್ ಮೆಂಟ್ ಪ್ಲಾನ್ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಹೆಲ್ಪ್ ಡೆಸ್ಕ್, ಪೋಲಿಂಗ್ ಸ್ಟೇಷನ್ ನಲ್ಲಿ ಸುವಿಧಾ ಕೇಂದ್ರಗಳನ್ನು ಮತದಾರರ ನೆರವಿಗೆ ಸ್ಥಾಪಿಸಲಾಗಿದೆ.ಹಿರಿಯ ನಾಗರೀಕರಿಗೆ ಆದ್ಯತೆ ನೀಡಲು ಸೂಚನೆ ನೀಡಲಾಗಿದೆ.
ರಾಜ್ಯ ಚುನಾವಣಾ ಆಯೋಗ ಚುನಾವಣಾ ವೀಕ್ಷಕರನ್ನು ನೇಮಿಸಿದ್ದು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಗೆ ಜಿ. ರಾಮಚಂದ್ರ ಐಎಎಸ್ 94498 58679, ಮಂಗಳೂರು ಉಪವಿಭಾಗಕ್ಕೆ ಕೆ ಟಿ ಕಾವೇರಿಯಪ್ಪ 9448421965, ಪುತ್ತೂರು ಉಪವಿಭಾಗಕ್ಕೆ ಇಕ್ಬಾಲ್ ಹುಸೇನ್ 98862 83990.
ಮತದಾರರ ಸಹಾಯವಾಣಿ: ಮಂಗಳೂರು ತಾಲೂಕು- 0824- 2220587, ಬಂಟ್ವಾಳ: 08255-232120, 232500, ಬೆಳ್ತಂಗಡಿ: 08256-233123, ಪುತ್ತೂರು: 08251-234099, ಸುಳ್ಯ: 08257-231231.
ಸಂಪರ್ಕ ಯೋಜನೆ: ಪ್ರತಿ 2 ಗಂಟೆಗೊಮ್ಮೆ ಮತದಾನದ ಅಂಕಿ ಅಂಶ ಮಾಹಿತಿ ಪಡೆಯಲು ತಾಲೂಕು ಮತ್ತು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ಸಂಪೆರ್ಕಿಸಬಹುದಾಗಿದೆ. ಮಂಗಳೂರು ತಾಲೂಕು- ಗೋವಿಂದ ಮಡಿವಾಳ- 96113-90191, ಬಂಟ್ವಾಳ ಕಿಶೋರ್ ಕುಮಾರ್-9449014905, ಬೆಳ್ತಂಗಡಿ-ಎನ್ ಮಾಣಿಕ್ಯ- 99844-82625. ಪುತ್ತೂರು- ಕೆ ಪಿ ನಾಗರಾಜ್-9449107111. ಸುಳ್ಯ ಪಿ.ಬೆಳ್ಳಿಯಪ್ಪ ಗೌಡ-94485-67127.
ಜಿಲ್ಲಾ ಮಟ್ಟದಲ್ಲಿ ಚಂದ್ರಶೇಖರ್- 99722035297, ಕವಿತ-99455 98333, ಪ್ರಶಾಂತ್ ಶೆಟ್ಟಿ- 93436- 07783,ಕಾರ್ತಿಕ್ 98453-96622,ಡಯಾನ- 99013-21864. ಪತ್ರಿಕಾ ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಉಪಸ್ಥಿತರಿದ್ದರು.