Sunday, December 5, 2010

ಮೂಡಬಿದ್ರೆಯಲ್ಲಿ ಅಧಿಕಾರಿಗಳೊಂದಿಗೆ ಸಂವಾದ

ಮಂಗಳೂರು,ಡಿಸೆಂಬರ್ 05: ಜೈನ ಕಾಶಿ 'ಮೂಡಬಿದ್ರೆಯ ಅಭಿವೃದ್ದಿಯಲ್ಲಿ ಸಮಸ್ಯೆ ಮತ್ತು ಸವಾಲುಗಳು' ವಿಷಯ ದಲ್ಲಿ ಜಿಲ್ಲಾ ಮಟ್ಟದ ಅಧಿಕಾ ರಿಗಳು ಮತ್ತು ಜನ ಪ್ರತಿ ನಿಧಿ ಗಳೊಂದಿಗೆ ಸಂವಾದ ಕಾರ್ಯ ಕ್ರಮವನ್ನು ಶನಿವಾರ ಆಯೋ ಜಿಸಲಾಗಿತ್ತು.ಮೂಡಬಿದರೆ ಕಾರ್ಯನಿರತ ಪತ್ರಕರ್ತರ ಸಂಘ ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಹಮ್ಮಿಕೊಂಡ ಸಂವಾದ ಕಾರ್ಯ ಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋದ್ ಯಾದವ್, ಸ್ಥಳಿಯ ಶಾಸಕರಾದ ಅಭಯ ಚಂದ್ರ ಜೈನ್,ಮಾಜಿ ಸಚಿವ ಅಮರನಾಥ ಶೆಟ್ಟಿ,ಸಮಾಜದ ಗಣ್ಯರು,ನಾಗರಿಕರು,ಜನಪ್ರತಿನಿಧಿಗಳು,ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.