Wednesday, December 29, 2010

ಜಿಲ್ಲೆಯಲ್ಲಿ 81 ಅತಿಸೂಕ್ಷ್ಮ ಮತಗಟ್ಟೆ

ಮಂಗಳೂರು,ಡಿ.29:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 31ರಂದು ನಡೆಯಲಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆಸಲು ಎಲ್ಲ ರೀತಿಯ ಬಂದೋಬಸ್ತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.

ಇಂದು ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿ ಯಲ್ಲಿ ಮಾತ ನಾಡುತ್ತಿದ್ದ ಅವರು, ಚುನಾವಣಾ ಬಂದೋಬಸ್ತ್ ಸಂಬಂಧ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬೆಳ್ತಂಗಡಿ ತಾಲೂಕಿನ 31 ನಕ್ಸಲ್ ಪೀಡಿತ ಪ್ರದೇಶ ಸೇರಿದಂತೆ ಒಟ್ಟು 81 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದರು. ಉಳಿದಂತೆ 101 ಸೂಕ್ಷ್ಮ ಹಾಗೂ 546 ಸಾಮಾನ್ಯ ಮತಗಟ್ಟೆಗಳು, 4 ಡಿ ಎಸ್ ಪಿ, 12 ಸಿಪಿಐಗಳು, 30 ಜನ ಎಎಸ್ ಪಿ, 85 ಹೆಡ್ ಕಾನ್ಸ್ ಟೇಬಲ್ ಗಳು ಹಾಗೂ 814ಜನ ಪೊಲೀಸರು ಸೇರಿದಂತೆ 750 ಜನ ಹೋಮ್ ಗಾರ್ಡ್ಸ್ ಗಳನ್ನು ನಿಯೋಜಿಸಲಾಗಿದೆ ಎಂದರು.
ಚುನಾವಣೆ ಸಂಬಂಧ ಏನಾದರೂ ಗೊಂದಲ, ಗಲಭೆ ಉಂಟಾದಲ್ಲಿ 4-5 ನಿಮಿಷದಲ್ಲಿ ಸಂಚಾರಿ ಪೊಲೀಸ್ ದಳದವರು ತಲುಪುವ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮತದಾನ ಶಾಂತಿಯುತವಾಗಿ ನಡೆಸಲು ಸರ್ವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.