Sunday, April 28, 2013

ಪಣಂಬೂರು ಕಡಲಕಿನಾರೆಯಲ್ಲಿ ಮತದಾನ ಜಾಗೃತಿ

ಮಂಗಳೂರು, ಎಪ್ರಿಲ್. 28:- ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವ ತತ್ವ ಸಿದ್ದಾಂತಗಳ ಸಮರ್ಪಕ ಅನುಷ್ಟಾನಕ್ಕೆ ನಾಂದಿಯಾಗಬೇಕೆಂಬ ಭಾರತ ಚುನಾವಣಾ ಆಶಯದಂತೆ ಸ್ವೀಪ್ ಕಾರ್ಯಕ್ರಮದಡಿ ಇಂದು ಮಂಗಳೂರಿನ ಪಣಂಬೂರು ಕಡಲಕಿನಾರೆಯಲ್ಲಿ ಜಿಲ್ಲಾಡಳಿತ ಮತ್ತು ಬೀಚ್ ಡೆವಲಪ್ಮೆಂಟ್ ಇವರ ಸಹಯೋಗದಲ್ಲಿ ನಡೆದ ಗಾಳಿಪಟವನ್ನು ಹಾರಿಸುವ ಮುಖಾಂತರ ಮತದಾನ ಜಾಗೃತಿಗೆ ಚಾಲನೆ ನೀಡಿದರು.
      ಈ ಕಾರ್ಯ ಕ್ರಮ ದಲ್ಲಿ ಭಾಗ ವಹಿ ಸಿದ್ದ ಜಿಲ್ಲಾ ಚುನಾ ವಣಾ ಧಿಕಾರಿ ಹಾಗೂ ಜಿಲ್ಲಾ ದಂಡಾ ಧಿಕಾ ರಿಗ ಳಾದ ಹರ್ಷ ಗುಪ್ತ ಅವರು ಮಾತ ನಾಡಿ, ಪ್ರತಿ ಯೊಬ್ಬರೂ ಮತದಾನ ಮಾಡುವ ಮೂಲಕ ಉತ್ತಮ ಸರ್ಕಾರ ರಚನೆ ಯಂತಹ ಪ್ರಜಾಸತ್ತಾತ್ಮಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು  ಜನತೆಗೆ ಕರೆ ನೀಡಿದ್ದಾರೆ.
     ಮಕ್ಕಳ ಮೂಲಕ ಮತ ದಾನದ ಅರಿವು ಮೂಡಿ ಸುವ ವಿನೂ ತನ ಕಾರ್ಯ ಕ್ರಮ ದಲ್ಲಿ ಮಕ್ಕ ಳಿಂದ ಪೋಷ ಕರಿಗೆ ಅರಿವು ಮೂಡಿ ಸುವ ಪ್ರಯ ತ್ನವೂ ನಡೆ ಯಿತು. ಮೇ ಐದರ ಮತ ದಾನ ಮಿಸ್ ಮಾಡ ಬೇಡಿ ಎಂದು ಮಕ್ಕಳು ಘೋಷಣೆ ಗಳನ್ನು  ಕೂಗಿ ದರು. ತಮ್ಮ ಹೆತ್ತವ ರನ್ನು ಮತ ದಾನಕ್ಕೆ ಅಂದು ಕಳು ಹಿಸುವ ಪ್ರತಿಜ್ಞೆ ಯನ್ನು ಮಾಡಿದರು. ಮಕ್ಕಳಿಗಾಗಿ ಈ ಸಂಧರ್ಭದಲ್ಲಿ ವಿವಿಧ ಆಟೋಟಗಳನ್ನು ಏರ್ಪಡಿಸಿ  ಬಹುಮಾನಗಳನ್ನು,  ಗಣ್ಯರಿಂದ ವಿತರಿಸುವ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮದಲ್ಲಿ ಸಿಡಿಪಿಒ  ಶ್ಯಾಮಲ, ಎ ಎಸ್ ಗೋಪಾಲಕೃಷ್ಣ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ||ಕೆ.ಎನ್.ವಿಜಯಪ್ರಕಾಶ್, ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ||ಹರೀಶ್ ಕುಮಾರ್ ಮುಂತಾದವರು ಹಾಜರಿದ್ದರು. ಮದು ಮತ್ತು ವಿಸ್ಮಯ ವಿನಾಯಕ್ ಅವರು ಮಕ್ಕಳಿಗೆ ಆಟೋಟಗಳನ್ನು ಹಾಗೂ ಪ್ರಾಣಿ ಪಕ್ಷಿಗಳ ಅನುಕರಣೆ ಮುಂತಾದ ಮನರಂಜನೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.