Sunday, April 21, 2013

ರಾಜಕೀಯ ಪಕ್ಪಗಳು ಮತ್ತು ಚುನಾವಣಾ ವೀಕ್ಷಕರ ಸಭೆ

ಮಂಗಳೂರು,ಏಪ್ರಿಲ್ .21:ರಾಜ್ಯ ಸಾರ್ವತ್ರಿಕ ಚುನಾವಣೆ-2013ನ್ನು ಯಶಸ್ವಿಯಾಗಿ ನಿರ್ವಹಿಸಲು ಎಲ್ಲರ ಸಹಕಾರದ ಅಗತ್ಯವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಹೇಳಿದರು.
                ಇಂದು ಜಿಲ್ಲಾಧಿ ಕಾರಿ ಗಳ ಕಚೇರಿ ಯಲ್ಲಿ ಆಯೋಜಿ ಸಲಾದ ರಾಜ ಕೀಯ ಪಕ್ಷ ಗಳ ಮತ್ತು ಚುನಾ ವಣಾ ವೀಕ್ಷ ಕರ ಸಭೆ ಯನ್ನು ಉದ್ದೇ ಶಿಸಿ ಮಾತ ನಾಡಿದ ಅವರು, ಚುನಾ ವಣಾ ಆಯೋ ಗದ ನಿರ್ದೇ ಶನ ದಡಿ ಜಿಲ್ಲಾ ಡಳಿತ ಸು ವ್ಯವ ಸ್ಥಿತ ಚುನಾ ವಣೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಕಾನೂನು ಪಾಲನೆಗೆ ಪೂರಕವಾಗಿಎಲ್ಲ ಕ್ರಮಗಳನ್ನು ತಂತ್ರಜ್ಞಾನಗಳನ್ನು ಬಳಸಿ ಅಳವಡಿಸಲಾಗಿದೆ.ರಾಜಕೀಯ ಪಕ್ಷಗಳಿಗೆ ಎಲ್ಲರೀತಿಯ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆಯನ್ನು ಮಾಡಲಾಗಿದೆ.
ಚುನಾ ವಣೆ ಯನ್ನು ನಿಷ್ಪಕ್ಷ ಪಾತ ವಾಗಿ ನಿರ್ವ ಹಿಸಲು ಜಿಲ್ಲಾ ಡಳಿತ ಕೈ ಗೊಂಡಿ ರುವಎಲ್ಲ ಕ್ರಮ ಗಳನ್ನು ಹಾಗೂ ವ್ಯವಸ್ಥೆ ಗಳನ್ನು ರಾಜ ಕೀಯ ಪಕ್ಷ ಮುಖಂ ಡರಿಗೆ ಜಿಲ್ಲಾ ಧಿಕಾ ರಿಗಳು ವಿವ ರಿಸಿ ದರು.ಯಾವುದೇ ಸಮ ಸ್ಯೆಗೆ 1077 ಕಂಟ್ರೋಲ್  ರೂಂ ಸಂಪರ್ಕಿಸಿ ಎಂದು ಅವರು ಹೇಳಿದರು. ಗುರು ತಿಸ ಲ್ಪಟ್ಟ ಪಕ್ಷ ಗಳ ಅಭ್ಯರ್ಥಿ ಗಳಿಗೆ ಮತ ದಾರರ ಪಟ್ಟಿ ಯನ್ನು ಶೀಘ್ರವೇ ವಿತ ರಿಸ ಲಾಗು ವುದು ಎಂದ ಅವರು, ಸ್ವೀಪ್ (ಮತ ದಾರರ ಜಾಗೃತಿ ಕಾರ್ಯ ಕ್ರಮ) ನಿಂದಾಗಿ ಮತ ದಾರರ ಪಟ್ಟಿಗೆ ಸುಮಾರು 62,000 ಹೆಸರು ಸೇರ್ಪಡೆ ಗೊಂಡಿದ್ದು, ಪೋಸ್ಟಲ್ ಬ್ಯಾಲೆಟ್ ಮತ್ತು ಸರ್ವಿಸ್ ವೋಟ್ ಗಳು ಲೋಪ ವಾಗ ದಂತೆ ಮುನ್ನೆ ಚ್ಚರಿಕೆ ಕ್ರಮ ಕೈ ಗೊಳ್ಳಲಾಗಿದೆ.
ರಾಜಕೀಯಪಕ್ಷಗಳ ಮುಖಂಡರುತಮ್ಮ ಸಮಸ್ಯೆಗಳನ್ನು, ಸಂಶಯಗಳನ್ನು ಸಭೆಯ ಮುಂದಿಟ್ಟರು.
 ಮತದಾನ ಮಾಡಲು ಬಿಎಲ್ಒಗಳು ಕೊಡುವ ವೋಟರ್ ಸ್ಲಿಪ್ ಕಾನೂನು ಬದ್ಧವಾಗಿದ್ದು, ಇತರ ಯಾವುದೇ ಗುರುತು ಪತ್ರ ಮತದಾನ ಮಾಡಲು ಅಗತ್ಯವಿರುವುದಿಲ್ಲ. ಹಾಗಾಗಿ ಮತದಾರರು ತಮ್ಮ ಮತ ಚಲಾಯಿಸಲು ವೋಟರ್ ಸ್ಲಿಪ್ ಬಳಸಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು. ಪೊಲೀಸ್ ಕಮಿಷನರ್ ಮನೀಷ್ ಕರ್ಬಿಕರ್, ಅಪರಜಿಲ್ಲಾಧಿಕಾರಿದಯಾನಂದ, ಪಾಲಿಕೆ ಆಯುಕ್ತರಾದ ಡಾ. ಹರೀಶ್, ಎಲ್ಲ ಚುನಾವಣಾಧಿಕಾರಿಗಳು, ಎಸ್ ಪಿ ಅಭಿಷೇಕ್ ಗೋಯಲ್ ಹಾಗೂ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿದ್ದರು.