Tuesday, April 2, 2013

ಚುನಾವಣಾ ನಿರ್ವಹಣೆಗೆ ವಿವಿಧ ಅಧಿಕಾರಿಗಳಿಗೆ ಹೊಣೆ

ಮಂಗಳೂರು. ಏಪ್ರಿಲ್.02: ಚುನಾವಣೆಯ ವಿವಿಧ ಕರ್ತವ್ಯಗಳ ಹೊಣೆಯನ್ನು ಜಿಲ್ಲಾಧಿಕಾರಿಗಳು ವಿಂಗಡಿಸಿ ಹಂಚಿದ್ದು, ಚುನಾವಣಾ ವೆಚ್ಚ ವಿಭಾಗದ ಎಲ್ಲ ಹೊಣೆ ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಅವರಿಗೆ ವಹಿಸಲಾಗಿದೆ. ಚುನಾವಣಾ ವಿಭಾಗದ ಹೊಣೆಯನ್ನು ಪಾಲಿಕೆಯ ಇನ್ನೋರ್ವ ಅಧಿಕಾರಿ ಶ್ರೀಮತಿ ಪ್ರಮೀಳಾ ಅವರಿಗೆ ವಹಿಸಲಾಗಿದೆ. ಸ್ವೀಪ್ ನ ಹೊಣೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರಿಗೆ ವಹಿಸಲಾಗಿದೆ. ಎಂ ಸಿ ಎಂ ಸಿ ಸಮಿತಿಯ ಹೊಣೆ ಜಿಲ್ಲಾ ವಾರ್ತಾಧಿಕಾರಿಗಳದ್ದು. ಉಳಿದೆಲ್ಲ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆಯ ಮೇಲ್ವಿಚಾರಣೆ ಅಪರ ಜಿಲ್ಲಾಧಿಕಾರಿಗಳದ್ದಾಗಿರುತ್ತದೆ. ಸ್ಮಾರ್ಟ್ ಫೋನ್ ಮತ್ತು ಇತರ ತಾಂತ್ರಿಕ ವಿಭಾಗದ ಹೊಣೆ ಎನ್ ಐ ಸಿ ಅಧಿಕಾರಿ ಅಶ್ವಿನ್ ಅವರದ್ದು ಎಂದು ಕರ್ತವ್ಯ ಹಂಚಿಕೆ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.