Thursday, April 25, 2013

ಸಹಾಯಕ ಖರ್ಚು ವೆಚ್ಚ ವೀಕ್ಷಕರ ವಿಶೇಷ ಸಭೆ

ಮಂಗಳೂರು, ಏಪ್ರಿಲ್. 25 : ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಸಮರ್ಪಕವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ವಿನೂತನ ಕ್ರಮಗಳ ಬಗ್ಗೆ ಸಹಾಯಕ ಖರ್ಚುವೆಚ್ಚ ವೀಕ್ಷಕರಿಗೆ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಮಾಹಿತಿ ನೀಡಿದರು.
           ಜಿಲ್ಲಾ ಧಿಕಾ ರಿಗಳ ಕಚೇರಿ ಯಲ್ಲಿ ಆಯೋ ಜಿಸಲಾ ಗಿದ್ದ ವಿಶೇಷ ಸಭೆ ಯನ್ನು ದ್ದೇಶಿಸಿ ಮಾತ ನಾಡಿದ ಜಿಲ್ಲಾ ಧಿಕಾ ರಿಗಳು ಚುನಾ ವಣೆಯಲ್ಲಿ ಖರ್ಚು ವೆಚ್ಚ ವೀಕ್ಷ ಕರ ಪಾತ್ರ ಅ ತ್ಯಂತ ಪ್ರಮುಖ ವಾಗಿದ್ದು ಅವ ರಿಗೆ ಅಗತ್ಯ ವಿರುವ ಎಲ್ಲ ಪೂರಕ ಮಾಹಿತಿ ಗಳನ್ನು ನೀಡಲು ಜಿಲ್ಲಾ ಡಳಿತ ಕೈ ಗೊಂಡಿ ರುವ ಆನ್ ಲೈನ್ ಮಾಹಿ ತಿಯ ಬಗ್ಗೆ ವಿವರಿ ಸಿದರು.
ಇದ ರಿಂದ ಖರ್ಚು ವೆಚ್ಚ ವೀಕ್ಷ ಕರಿಗೆ ಶ್ಯಾಡೋ ರಿಜಿ ಸ್ಟರ್ ನಿರ್ವ ಹಣೆಗೆ ಅನು ಕೂಲ ವಾಗಲಿದೆ. ಪ್ರತಿ ಯೊಂದು ವರ ದಿಗೂ ವಿವಿಧ ಕರ್ತವ್ಯ ಗಳಲ್ಲಿ ನಿರತ ವಾಗಿ ರುವ ಅಧಿ ಕಾರಿ ಗಳನ್ನು ನಿರಂತರ ಸಂಪ ರ್ಕಿಸುವ ಹಾಗೂ ಮಾಹಿತಿ ಕೋರುವ ಕೆಲಸ ತಪ್ಪ ಲಿದೆ ಎಂದು ಜಿಲ್ಲಾಧಿ ಕಾರಿ ಗಳು ಹೇಳಿದರು. ಅಧಿ ಕಾರಿ ಗಳು ತಮ್ಮ ಅಧಿ ಕಾರ ವ್ಯಾಪ್ತಿ ಯನ್ನು ಅರಿತು ಸಂಪೂ ರ್ಣವಾಗಿ ಕ್ರಮ ಕೈ ಗೊಳ್ಳಲು ಪ್ರೇರೇಪಿಸಿದ ಜಿಲ್ಲಾಧಿಕಾರಿಗಳು, ಕೆಲಸವನ್ನು ಸುಸೂತ್ರವಾಗಿ ನಿರ್ವಹಿಸಲು ತಾಂತ್ರಿಕತೆಯ ನೆರವಿನಿಂದ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.