Friday, April 5, 2013

ಡಾ. ಬಾಬು ಜಗಜೀವನರಾಮ್ 106ನೇ ಜನ್ಮದಿನಾಚರಣೆ

ಮಂಗಳೂರು, ಏಪ್ರಿಲ್.05: ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ ಹಾಗೂ ಭಾರತದ ಮಾಜಿ ಪ್ರಧಾನಿ ದಿವಂಗತ ಡಾ .ಬಾಬು ಜಗ ಜೀವನ ರಾಮ್ ಅವರ  106ನೇ ಜನ್ಮ ದಿನಾಚರಣೆ  ಸರಳವಾಗಿ ಆಚರಿಸಿದರು.  ಡಾ .ಬಾಬು ಜಗ ಜೀವನ ರಾಮ್ ಅವರ ಛಾಯಾ ಚಿತ್ರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ  ಹರ್ಷ ಗುಪ್ತ ಅವರು ಮಾಲಾ ರ್ಪಣೆ ಮಾಡಿ ಗೌರವ ಸಲ್ಲಿಸಿ ದರು.  ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್, ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ,ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖಾಧಿಕಾರಿ ಅರುಣ್ ಫುಟರ್ಾಡೋ ಕಾರ್ಯಕ್ರಮ ನಿರೂಪಿಸಿದರು.