Saturday, April 6, 2013

ಮತದಾರರ ಪಟ್ಟಿ ಪರಿಷ್ಕರಣ ಕೇಂದ್ರ: ಜಿಲ್ಲಾಧಿಕಾರಿ ಅನಿರೀಕ್ಷಿತ ಭೇಟಿ

ಮಂಗಳೂರು,ಏಪ್ರಿಲ್.06 : ಯುವಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಪ್ರಕ್ರಿಯೆಯನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರು ಖುದ್ದಾಗಿ ಏಪ್ರಿಲ್ 5 ರಂದು ಮಹಾ ನಗರ ಪಾಲಿಕೆ ಮತ ದಾರರ ನೋಂ ದಣಿ ಕೇಂ ದ್ರಕ್ಕೆ ಭೇಟಿ ನೀಡಿ, ಅಲ್ಲಿರುವ ಸಾಫ್ಟ ವೇರ್ ಹಾಗೂ ಈ ಪ್ರ ಕ್ರಿಯೆ ಯಲ್ಲಿ ಭಾಗಿ ಯಾಗಿ ರುವ ಸಿಬ್ಬಂದಿ ಗಳ ಕಾರ್ಯ ವೈಖರಿ ಯನ್ನು ಖುದ್ದಾಗಿ ಪರಿ ಶೀಲಿಸಿ ದರು.
ಸ್ಟೇಟ್ ಎನ್ಹ್ಯಾ ಸ್ಸಡ್ ಇಲೆ ಕ್ಟ್ರಲ್ ರೋಲ್ ಸಿಸ್ಟಂ ಮತ ದಾರರ ಸೇರ್ಪ ಡೆಗಿ ರುವ ವಿಶೇಷ ಸಾಫ್ಟ್  ವೇರ್ ಇದಾ ಗಿದ್ದು, ಸಮಗ್ರ ಮಾಹಿತಿ ಗಳಿಲ್ಲದೆ ಫಾರ್ಮ 6ನ್ನು ಇದು ಸ್ವೀಕ ರಿಸು ವುದಿಲ್ಲ. ಈ ಸಾಫ್ಟ್ ವೇರ್ ನ ಕಾರ್ಯ ವೈಖರಿ ಯನ್ನು ಅವರು ಪರಿ ಶೀಲಿ ಸಿದರು.
ಮತದಾರರ ಜಾಗೃತಿ ಸ್ವೀಪ್ ಕಾರ್ಯಕ್ರಮಕ್ಕೆ ಪ್ರಚಾರ ನೀಡುವ ಕಾರ್ಯಕ್ರಮದ ಅಂಗವಾಗಿ ಅಲ್ಲಿಂದ ಆಕಾಶವಾಣಿಗೆ ತೆರಳಿದ ಜಿಲ್ಲಾಧಿಕಾರಿಗಳು, ಅಲ್ಲಿ ಮತದಾನದ ಮಹತ್ವದ ಬಗ್ಗೆ ಓದುಗರಿಗೆ ಸಂದೇಶ ನೀಡಿದರು.
ಅಲ್ಲಿಂದ ತಾಲೂಕು ಪಂಚಾಯಿತಿ ಕಚೇರಿಗೂ ಸಿಯರ್ಸ್ ಸಾಫ್ಟ್ವೇರ್ ಅಳವಡಿಕೆ ಸಂಬಂಧ ತೆರಳಿ ಪರಿಶೀಲನೆ ನಡೆಸಿದರು.