Tuesday, April 16, 2013

ವಿಧಾನಸಭಾ ಚುನಾವಣೆಗೆ ವೀಕ್ಷಕರ ನೇಮಕ

ಮಂಗಳೂರು, ಎಪ್ರಿಲ್. 16:-ದಕ್ಷಿಣಕನ್ನಡ ಜಿಲ್ಲೆಯ  ವಿಧಾನಸಭಾ ಚುನಾವಣೆಗೆ ವೀಕ್ಷಕರಾಗಿ ಎಂಟು ಮಂದಿಯನ್ನು ಚುನಾವಣಾ ಆಯೋಗ ನೇಮಕ ಮಾಡಿದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ತಕರಾರುಗಳಿದ್ದಲ್ಲಿ ದೂರವಾಣಿ ಇಲ್ಲವೇ ಪತ್ರದ ಮೂಲಕ ಇವರನ್ನು ಸಂಪರ್ಕಿಸಬಹುದಾಗಿದೆ.
ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ನೇಮಕಗೊಂಡಿರುವ ವೀಕ್ಷಕರ ಹೆಸರು ಹಾಗೂ ಅವರ ಸಂಚಾರಿ ದೂರವಾಣಿ ಸಂಖ್ಯೆಗಳು ಈ ಕೆಳಗಿನಂತಿವೆ.
200 ಬೆಳ್ತಂಗಡಿ ಕ್ಷೇತ್ರಕ್ಕೆ ವೀಕ್ಷಕರಾಗಿ ಡಾ.ಜಗದೀಶ್ ಡಿ.ಪಾಟೀಲ್, ಇವರ ದೂರವಾಣಿ ಸಂಖ್ಯೆ 9483506408/201 ಮೂಡಬಿದ್ರೆ ಕ್ಷೇತ್ರಕ್ಕೆ  ಮುಖೇಶ್ ಕುಮಾರ್ ದೂರವಾಣಿ ಸಂಖ್ಯೆ 9483506401/202, ಮಂಗಳೂರು ಉತ್ತರ ಕ್ಷೇತ್ರಕ್ಕೆ ಡಾ.ದಿನೇಶ್ ಕುಮಾರ್ ಗೋಯಲ್ ದೂರವಾಣಿ ಸಂಖ್ಯೆ 9483506402/203, ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಪುಷ್ಯಪತಿ ಸಕ್ಸೇನಾ ದೂರವಾಣಿ ಸಂಖ್ಯೆ 9483506403/204, ಮಂಗಳೂರು ಕ್ಷೇತ್ರಕ್ಕೆ  ಆರ್.ಸಿ.ವರ್ಮಾ ದೂರವಾಣಿ ಸಂಖ್ಯೆ 9483506384/205, ಬಂಟ್ವಾಳ ಕ್ಷೇತ್ರಕ್ಕೆ  ಪರಶುರಾಮ ಮಿಶ್ರಾ ದೂರವಾಣಿ ಸಂಖ್ಯೆ 9483506405/206 ,ಪುತ್ತೂರು ಕ್ಷೇತ್ರಕ್ಕೆ  ಮಂಜು ರಾಜ್ಪಾಲ್ ದೂರವಾಣಿ ಸಂಖ್ಯೆ 9483506406 ಮತ್ತು 207 ಸುಳ್ಯ ಕ್ಷೇತ್ರಕ್ಕೆ ಅನಿಲ್ ಕುಮಾರ್ ಸಿಂಗ್ ದೂರವಾಣಿ ಸಂಖ್ಯೆ 9483506407 ಆಗಿರುತ್ತದೆ. ಜಿಲ್ಲೆಗೆ ಪೋಲೀಸ್ ವೀಕ್ಷಕರಾಗಿ  ರವಿಕಾಂತ್ ಮಿತ್ತಲ್ ದೂರವಾಣಿ ಸಂಖ್ಯೆ 9483506383 ಆಗಿರುತ್ತದೆ.
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ತಕರಾರುಗಳಿದ್ದಲ್ಲಿ ಸಾರ್ವಜನಿಕರು ಮೇಲಿನ ವೀಕ್ಷಕರುಗಳಿಗೆ ಮನವಿ ಸಲ್ಲಿಸಬಹುದೆಂದು ಜಿಲ್ಲಾ ಚುನಾವಣಾಧಿಕಾರಿಗಳು/ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.
ಚುನಾವಣೆ ಕುರಿತ ಖರ್ಚುವೆಚ್ಚದ ವೀಕ್ಷಕರುಗಳಾಗಿ 200 ಬೆಳ್ತಂಗಡಿ/201 ಮೂಡಬಿದ್ರಿ/206 ಪುತ್ತೂರು /207 ಸುಳ್ಯಕ್ಷೇತ್ರದವೀಕ್ಷಕರಾಗಿ ವಿನೀಶ್ ಚೌಧರಿದೂರವಾಣಿ ಸಂಖ್ಯೆ 9483506411,204ಮಂಗಳೂರು ದಕ್ಷಿಣ ,205 ಬಂಟ್ವಾಳ ಕ್ಷೇತ್ರದ ವೀಕ್ಷಕರಾಗಿ ಆರ್.ಕೆ. ಅಗರ್ವಾಲ್ 9483506388/202ಮಂಗಳೂರು ಉತ್ತರ,203 ಮಂಗಳೂರು ದಕ್ಷಿಣ ಕ್ಷೇತ್ರದ ವೀಕ್ಷಕರಾಗಿ  ಮೊಹಮದ್ ಶಂಸದ್ ಅಲಂ ದೂರವಾಣಿ ಸಂಖ್ಯೆ 9483506399  ಆಗಿರುತ್ತದೆ. ಚುನಾವಣೆಖರ್ಚು ವೆಚ್ಚಕ್ಕೆ  ಸಂಬಂಧಿಸಿದಂತೆ ಯಾವುದೇ ತಕರಾರುಗಳಿದ್ದಲ್ಲಿ ಸಾರ್ವಜನಿಕರು ಮೇಲಿನ ವೀಕ್ಷಕರುಗಳಿಗೆ ಮನವಿ ಸಲ್ಲಿಸಬಹುದೆಂದು ಜಿಲ್ಲಾ ಚುನಾವಣಾಧಿಕಾರಿಗಳು/ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.