Wednesday, April 3, 2013

ಶಸ್ತ್ರಾಸ್ತ್ರ ಹೊಂದಿರುವವರ ಗಮನಕ್ಕೆ

ಮಂಗಳೂರು,ಏಪ್ರಿಲ್.03 : ವಿಧಾನಸಭಾ ಚುನಾವಣೆ-2013ರ ಹಿನ್ನಲೆಯಲ್ಲಿ ವಿವಿಧ ಕಾರಣಗಳಿಂದ ಶಸ್ತ್ರಾಸ್ತ್ರ ಹೊಂದಲು ಲೈಸನ್ಸ್ ಪಡೆದಿರುವವರು ತಮ್ಮಲ್ಲಿರುವ ಆಯುಧಗಳನ್ನು ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಥವಾ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಿಗಳಲ್ಲಿ ಠೇವಣಿ ಇಡಲು ದ.ಕ. ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆಗಿರುವ  ಹರ್ಷ ಗುಪ್ತ ಅವರು ಸೂಚಿಸಿದ್ದಾರೆ.
ಇಂದು ಚುನಾ ವಣಾ ಸಂ ಬಂಧ ಕಾನೂನು ಪಾಲ ನೆಗೆ ಸಂಬಂ ಧಿಸಿ ದಂತೆ ಪೊಲೀಸ್ ಕಮಿಷ ನರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾ ರಿಗಳ ಜೊತೆ ನಡೆದ ಸಭೆ ಯಲ್ಲಿ ವಿಷಯ ವನ್ನು ಸ್ಪಷ್ಟ ಪಡಿ ಸಿದ ಜಿಲ್ಲಾಧಿ ಕಾರಿ ಗಳು, ಕೇಂದ್ರ ಚುನಾ ವಣಾ ಆಯೋ ಗದ ನಿರ್ದೇ ಶನ ದಂತೆ ಈ ಕ್ರಮ ಕೈ ಗೊಂಡಿದ್ದು, ಚುನಾ ವಣೆಯ ಅವಧಿ ಯಲ್ಲಿ ಸಾರ್ವ ಜನಿಕ, ಶಾಂತಿ ಸುವ್ಯ ವಸ್ಥೆ ಮತ್ತು ಸಾರ್ವ ಜನಿಕ ಸು ರಕ್ಷತೆ ಕಾಪಾ ಡುವ ದೃಷ್ಟಿ ಯಿಂದ ಈ ಆದೇಶ ಹೊರಡಿ ಸಲಾ ಗಿದೆ ಎಂದಿ ದ್ದಾರೆ.
ಜಿಲ್ಲೆಯಲ್ಲಿನ ಪ್ರಸಕ್ತ ಕಾನೂನು ಸುವ್ಯವಸ್ಥೆ ಪರಿಶೀಲನೆ ನಡೆಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಬೆಳೆ ರಕ್ಷಣೆಗಾಗಿ ಮತ್ತು ಆತ್ಮರಕ್ಷಣೆಗಾಗಿ ಮಂಜೂರು ಮಾಡಲಾಗಿರುವ ಆಯುಧ ಪರವಾನಿಗೆಗಳನ್ನು ಭಾರತೀಯ ಶಸ್ತ್ರಾಸ್ತ್ರ ಕಾಯಿದೆ 1959 ರ ಕಲಂ 17 (3) (ಬಿ) ಅನ್ವಯ ತಾತ್ಕಾಲಿಕ ಅವಧಿಗೆ ಅಮಾನತ್ತಿನಲ್ಲಿರಿಸುವುದು ಸೂಕ್ತ ಹಾಗೂ ಈ ಅವಧಿಯಲ್ಲಿ ಪರವಾನಿಗೆ ಹೊಂದಿರುವ ಆಯುಧ ಗಳನ್ನು ಠೇವಣಿಯಲ್ಲಿರಿಸುವುದು ಅವಶ್ಯ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು 20.4.13ರೊಳಗೆ ನಮೂನೆ ನಂಬರ್ 14ರ ಪರವಾನಿಗೆ ಹೊಂದಿರುವ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಿಗಳಲ್ಲಿ ಠೇವಣಿ ಇಡುವುದು. ಈ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ತಮ್ಮ ಬೆಳೆ ರಕ್ಷಣೆಗಾಗಿ ಆಯುಧದ ತೀರಾ ಅವಶ್ಯಕತೆ ಇದೆ ಎಂದಾದಲ್ಲಿ ಆದೇಶ ಹೊರಡಿಸಿದ ಒಂದು ವಾರದೊಳಗೆ ಸಂಬಂಧಪಟ್ಟ ಪೂರಕ ದಾಖಲೆಗಳೊಂದಿಗೆ ಸಂಬಂಧಪಟ್ಟ ತಹಸೀಲ್ದಾರ್ರಿಗೆ ಅಹವಾಲು ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.
ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವವರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ರಿವಾಲ್ವರ್ /ಪಿಸ್ತೂಲ್ ಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಹತ್ತಿರದ ನಮೂನೆ ನಂಬರ್ 14ರ ಪರವಾನಿಗೆ ಹೊಂದಿರುವ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಿಗಳಲ್ಲಿ ದಿನಾಂಕ 20.4.13ರೊಳಗೆ ಠೇವಣಿ ಇಡುವುದು. ಇಲ್ಲೂ ತೀರಾ ಅವಶ್ಯಕತೆ ಇದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಒಂದು ವಾರದೊಳಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಪೊಲೀಸ್ ಕಮಿಷನರ್, ಮಂಗಳೂರು ಹಾಗೂ ನಗರ ವ್ಯಾಪ್ತಿಯನ್ನುಳಿದ ಕಡೆ ಪೊಲೀಸ್ ಅಧೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆ ಇವರಿಗೆ ಸಲ್ಲಿಸುವುದು.
ಅಮಾನತ್ತಿನ ಅವಧಿ ಮುಗಿದ ತಕ್ಷಣ ಆಯುಧ ಠೇವಣಿ ಪಡೆದ ಅಧಿಕಾರಿಗಳು/ ಡೀಲರ್ಗಳು ಅಂತಹ ಆಯುಧಗಳನ್ನು ಠೇವಣಿದಾರರಿಗೆ ಹಿಂದಿರುಗಿಸುವಂತೆಯೂ. ಪರವಾನಿಗೆದಾರರು ಆಯುಧವನ್ನು ಮರು ಪಡೆದುಕೊಳ್ಳಬಹುದಾಗಿದೆ ಎಂದವರು ಹೇಳಿದ್ದಾರೆ.

ಎಲ್ಲ ಶಿಕ್ಷಕರು ಗಮನಿಸಿ
 ಚುನಾ ವಣಾ ಘೋಷಣೆ ಹಿನ್ನಲೆ ಯಲ್ಲಿ ಶಾಲಾ ಶಿಕ್ಷ ಕರು ಬೇಸಿಗೆ ರಜೆ ಯಲ್ಲಿ ಕೇಂದ್ರ ಸ್ಥಾನ ಬಿಟ್ಟು ತೆರ ಳುವ ಸಂದ ರ್ಭದಲ್ಲಿ ಅಥವಾ ರಜೆಗೆ ಹೋಗುವ ಸಂದರ್ಭ ದಲ್ಲಿ ಸಕ್ಷಮ ಪ್ರಾಧಿ ಕಾರದ ಅನು ಮತಿ ಕಡ್ಡಾಯ ವಾಗಿ ಪಡೆಯ ಬೇಕೆಂದು ಜಿಲ್ಲಾಧಿ ಕಾರಿಗಳು ಸೂಚಿ ಸಿದ್ದಾರೆ.
ಯಶಸ್ವಿ ಚುನಾ ವಣಾ ಪಕ್ರಿಯೆಗೆ ಶಿಕ್ಷಕರ ಸಹಕಾರ ಅಗತ್ಯವಿರುವುದರಿಂದ ಶಿಕ್ಷಕರು ತಮ್ಮ ಶಾಲಾ ಮುಖ್ಯ ಶಿಕ್ಷಕರೊಂದಿಗೆ ಸಂಪರ್ಕದಲ್ಲಿರತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
       
ಚುನಾವಣೆ ಪ್ರಚಾರ ಅನುಮತಿ ಪಡೆಯಲು ಏಕಗವಾಕ್ಷಿ ಕೇಂದ್ರ

 ಚುನಾವಣೆ ಸಮಯದಲ್ಲಿ ಪ್ರಚಾರ, ಮೆರವಣಿಗೆ ನಡೆಸುವ ವೇಳೆ ಅಥವಾ ಸಾರ್ವಜನಿಕ ಸಮಾರಂಭಗಳಿಗೆ ಸಂಬಂಧಿಸಿದಂತೆ ಪರವಾನಿಗೆ ಪಡೆಯಲು  ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀ ಹರ್ಷ ಗುಪ್ತ ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿಧರ್ಾರ ಪ್ರಕಟಿಸಿದ ಅವರು ಎಲ್ಲ 8 ವಿಧಾನಸಭಾಕ್ಷೇತ್ರಗಳ ಆರ್ ಒ ಕಚೇರಿಯಲ್ಲಿ ಏಕಗವಾಕ್ಷಿ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದರು.
ಕಳೆದ ಚುನಾವಣೆಗಳಲ್ಲಿ ರಾಜಕೀಯ ಕಾರ್ಯಕ್ರಮಗಳಿಗೆ ಪರವಾನಿಗೆ ಪಡೆಯಲು ವಿವಿಧ ಇಲಾಖೆಗಳಿಗೆ ತೆರಳಿ ಪಡೆಯಬೇಕಾಗಿರುವುದರಿಂದ ತೀರಾ ವಿಳಂಬವಾಗುತ್ತಿದೆ ಎಂಬ ದೂರುಗಳ ಹಿನ್ನಲೆಯಲ್ಲಿ ಈ ಹೊಸ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಅವರು ನುಡಿದರು.
ಡಿಸ್ಟ್ರಿಕ್ಟ್ ಕಂಟ್ರೋಲ್ ರೂಂ ನಂಬ್ರ. 1077
ಬೇರೆ ಬೇರೆ ಇಲಾಖೆ ಗಳ ಅನು ಮತಿ ಗಾಗಿ ಆಯಾ ಇಲಾಖೆ ಗಳಿಗೆ ಅಲೆಯು ವುದನ್ನು ಈ ವ್ಯವಸ್ಥೆ ತಪ್ಪಿಸ ಲಿದೆ. ಜಿಲ್ಲಾ ಚುನಾವ ಣಾಧಿ ಕಾರಿಗಳೂ ಆಗಿರುವ ಜಿಲ್ಲಾಧಿ ಕಾರಿಗಳು, ವಿವಿಧ ಇಲಾಖೆಯ ಮುಖ್ಯ ಸ್ಥರನ್ನು ನೋಡಲ್ ಅಧಿಕಾರಿ ಯಾಗಿ ಈ ಪ್ರಕ್ರಿಯೆ ಯಲ್ಲಿ ನೇಮಿಸಿದ್ದು, ಪೊಲೀಸ್ ಇಲಾಖೆ- ಸರ್ಕಲ್ ಇನ್ಸ್ಪೆಕ್ಟರ್, ಸಾರಿಗೆ ಇಲಾಖೆ- ಸಾರಿಗೆ ಅಧಿಕಾರಿ, ಸ್ಥಳೀಯ ಸಂಸ್ಥೆ-  ನಗರ ಕಮಿಷನರ್, ಮುಖ್ಯಾಧಿಕಾರಿ. ಗ್ರಾಮಾಂತರ- ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪಂಚಾಯತ್.  ಚುನಾವಣಾಧಿಕಾರಿ ಕಚೇರಿ- ಸಹಾಯಕ ಚುನಾವಣಾಧಿಕಾರಿಗಳು ತಂಡದ ಸದಸ್ಯರಾಗಿರುತ್ತಾರೆ.
ಸಹಾಯಕ ಚುನಾವಣಾಧಿಕಾರಿಯವರು ಅರ್ಜಿಯನ್ನು ಒಂದು ಗಂಟೆಗಳ ಒಳಗೆ ಸಂಬಂಧಿತ ಇಲಾಖೆಯ ನೋಡಲ್ ಅಧಿಕಾರಿಯವರಿಗೆ ತಲುಪಿಸುವರು. ಇಲಾಖೆಯ ನೋಡಲ್ ಅಧಿಕಾರಿಗಳು 24 ಗಂಟೆಯೊಳಗೆ ಅಧೀನ ಹಂತದ ಕಚೇರಿಯಿಂದ ಅರ್ಜಿಯ ಕುರಿತು ನಿಯಮಾನುಸಾರ ಅಭಿಪ್ರಾಯ ಪಡೆದು ಸಹಾಯಕ ಚುನಾವಣಾಧಿಕಾರಿಯವರಿಗೆ ಲಿಖಿತ ನೀಡುವುದು.
ಸಹಾಯಕ ಚುನಾವಣಾಧಿಕಾರಿಯವರು ಪರಿಶೀಲಿಸಿ ಪುರಸ್ಕರಿಸಬಹುದಾದ ಅರ್ಜಿಯನ್ನು ಚುನಾವಣಾಧಿಕಾರಿಗೆ ಒಪ್ಪಿಸುವುದು. ಚುನಾವಣಾಧಿಕಾರಿಯವರು ನಿಯಮಾನುಸಾರ ಅನುಮತಿ ನೀಡಿ ಈ ಕುರಿತು ಡಿಸ್ಟ್ರಿಕ್ಟ್ ಕಂಟ್ರೋಲ್ ರೂಮ್ (1077) ಗೆ ಮಾಹಿತಿ ನೀಡುವುದು.
ಅನುಮತಿ ನೀಡಿರುವ ಪ್ರಕರಣಗಳನ್ನು ಚುನಾವಣಾ ಖರ್ಚು ವೆಚ್ಚಗಳ ಲೆಕ್ಕಾಚಾರದ ಉದ್ದೇಶಕ್ಕಾಗಿ ಮತ್ತು ಮಾದರಿ ನೀತಿ ಸಂಹಿತೆಯ ಪಾಲನೆಗಾಗಿ ನಿಗದಿತ ತಂಡಗಳು ಮುಂಚಿತವಾಗಿ ಚುನಾವಣಾಧಿಕಾರಿಯವರಿಗೆ ತಿಳಿಸುವುದು.
ರಾಜಕೀಯ ಪಕ್ಷಗಳು ಅಥವಾ ಚುನಾವಣಾ ಅಭ್ಯರ್ಥಿಗಳು ರಾಜಕೀಯ ಸಭೆ, ಸಮಾರಂಭ, ಸಮಾವೇಶ, ರ್ಯಾಲಿಗಳು ಅಥವಾ ಯಾವುದೇ ಚುನಾವಣಾ ಸಂಬಂಧಿ ಕಾರ್ಯಕ್ರಮ ನಡೆಸುವಾಗ ಮಾದರಿ ನೀತಿ ಸಂಹಿತೆ ಪಾಲನೆ ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.