Saturday, January 19, 2013

ಸುಲ್ತಾನ್ ಬತ್ತೇರಿ - ತಣ್ಣೀರು ಬಾವಿ ತೂಗು ಸೇತುವೆ ಕಾಮಗಾರಿಗೆ ಚಾಲನೆ

ಮಂಗಳೂರು,ಜನವರಿ.19: ಬಹು ನಿರೀಕ್ಷಿತ ಮಂಗಳೂರಿನ ಸುಲ್ತಾನ್ ಬತ್ತೇರಿಯಿಂದ ಕಡಲ ಕಿನಾರೆ ತಣ್ಣೀರು ಬಾವಿಗೆ ಸಂಪರ್ಕಿಸುವ ತೂಗು ಸೇತುವೆಯ ಕಾಮಗಾರಿಗೆ ಶುಕ್ರವಾರ  ರಾಜ್ಯ ಉನ್ನತ ಶಿಕ್ಷಣ ಹಾಗೂ  ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಟಿ. ರವಿ ಅವರು ಚಾಲನೆ ನೀಡಿದರು.ವಿಧಾನ ಸಭಾ ಉಪ ಸಭಾ ಪತಿ ಹಾಗೂ ಸ್ಥಳಿಯ ಶಾಸಕ ರಾದ ಎನ್. ಯೋಗಿಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕೃಷ್ಣ ಜೆ. ಪಾಲೆ ಮಾರ್, ವಿಧಾನ ಪರಿ ಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೇಯರ್ ಶ್ರೀ ಮತಿ ಗುಲ್ಜಾರ್ ಭಾನು, ಉಪ ಮೇಯರ್ ಅಮಿತಾ ಕಲಾ, ಕರ್ನಾಟಕ ಮೀನು ಗಾರಿಕಾ ಅಭಿ ವೃದ್ಧಿ ನಿಗ ಮದ ಅಧ್ಯಕ್ಷ ನಿತಿನ್ ಕುಮಾರ್, ಸ್ಥಳಿಯ ಪಾಲಿಕೆ ಸದಸ್ಯೆ ಸರೋಜಿನಿ ಕೋಟ್ಯಾನ್, ಜಿಲ್ಲಾಧಿಕಾರಿ ಎನ್. ಪ್ರಕಾಶ್, ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಕಾಮರಾರಿಯ ತಾಂತ್ರಿಕ ಸಲಹೆಗಾರ ಸೇತುವೆ ತಜ್ಙ ಗಿರೀಶ್ ಭಾರದ್ವಾಜ್ ಸುಳ್ಯ, ಗುತ್ತಿಗೆದಾರ ಯೋಜಕ ಸಂಸ್ಥೆಯ ಆಡಳಿತ ನಿರ್ದೇಶಕ ಜಗದೀಶ್ ಬೋಳುರು ಅವರು ಉಪಸ್ಥಿತರಿದ್ದರು.
  ಸಂದರ್ಭ ದಲ್ಲಿ ಮಾತ ನಾಡಿದ ಯೋಗಿಶ್ ಭಟ್ ಅವರು ಮಂಗ ಳೂರಿ ನಲ್ಲಿ ಪ್ರವಾ ಸೋದ್ಯಮ ಬೆಳೆ ಯಲು ಬೇಕಾದ ಎಲ್ಲಾ ನೆರ ವನ್ನು ಸರ್ಕಾರ ನೀಡು ತ್ತಿದೆ. 3 ಡಿ ತಾರಾ ಲಯ, 250 ಕೋಟಿ ರೂಪಾಯಿ ವೆಚ್ಚ ದಲ್ಲಿ ಮರೈನ್ ಅಕ್ವೇ ರಿಯಂ ಪಾರ್ಕ್, ಅಂತರಾಷ್ಟ್ರೀಯ ಗಾಲ್ಫ್ ಕೋರ್ಸ್, ಜಲ ಕ್ರೀಡೆಗಳಿಗೆ ಈಗಾಗಲೇ ಮಂಜೂರಾತಿದೊರೆತ್ತಿದ್ದು, ಶೀಘ್ರದಲ್ಲೇ ಕಾಮಗಾರಿಗಳು ಆರಂಭಗೊಳ್ಳಲಿವೆ.ಬಹು ನಿರೀಕ್ಷಿತ 12 ಕೋಟಿ ರೂಪಾಯಿ ವೆಚ್ಚದ ತೂಗು ಸೇತುವೆಯ ಕಾಮಗಾರಿ ನಿಗದಿತ ಕಾಲಮಿತಿ18 ತಿಂಗಳೊಳಗೆ ಪೂರ್ಣಗೊಳಿಸಲು ಗುತ್ತಿಗೆ ವಹಿಸಿರುವ ಯೋಜಕ ಸಂಸ್ಥೆ ಅವರಿಗೆ ಸೂಚಿಸಲಾಗಿದೆ.ಮುಂದಿನ ದಿನಗಳಲ್ಲಿ ಮಂಗಳೂರು ಪ್ರವಾಸೋದ್ಯಮ ಕ್ಷೇತ್ರದಲ್ಲಿ  ತನ್ನ ಛಾಪನ್ನು ಒತ್ತಲಿದೆ  ಎಂದರು.