Saturday, January 26, 2013

ದಕ್ಷಿಣ ಕನ್ನಡ: ನೆಹರು ಮೈದಾನದಲ್ಲಿ ಸಂಭ್ರಮದ 64ನೇ ಗಣರಾಜ್ಯೋತ್ಸವ 5000 ಮಕ್ಕಳಿಂದ ಗಾನ -ನೃತ್ಯ ವೈಭವ

ಮಂಗಳೂರು, ಜನವರಿ.26: ಪ್ರಜಾಪ್ರಭುತ್ವದ ಮಹತ್ವ ಮತ್ತು ಸಮಾನ ಸಮಾಜ ನಿರ್ಮಾಣಕ್ಕೆ  ಸರ್ಕಾರ ಕೈಗೊಂಡ ಕ್ರಮಗಳು, ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನಗರದ ನೆಹರು ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ  ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಮಾತನಾಡಿದರು.
ಪೆರೇಡ್ ವೀಕ್ಷಿ ಸಿದ ಬಳಿಕ ನೀಡಿದ ತಮ್ಮ ಸಂದೇ ಶದಲ್ಲಿ ಅವರು ರಾಜ್ಯ ಸರ ಕಾರವು ಜಿಲ್ಲೆಯಲ್ಲಿ ಹಮ್ಮಿ ಕೊಂಡ ವಿವಿಧ ಅಭಿ ವೃದ್ಧಿ ಕಾರ್ಯ ಕ್ರಮ ಗಳ ಮಾಹಿತಿ ನೀಡಿ ದರು. ಪುತ್ತೂರಿನ ಕೊಯಿಲ ದಲ್ಲಿ ಪಶು ಸಂಗೋ ಪನಾ ಕಾಲೇಜು ತೆರೆ ಯಲು ಸರ ಕಾರ ಅನುಮೋದನೆ ನೀಡಿ ರುವು ದಾಗಿ ಹೇಳಿದ ಅವರು, ದ.ಕ. ಜಿಲ್ಲೆ ಯಲ್ಲಿ ಪ್ರವಾ ಸೋದ್ಯಮ ಉತ್ತೇ ಜನಕ್ಕೆ ಸಂಬಂ ಧಿಸಿ ಹಲವು ಯೋಜನೆ ಗಳನ್ನು ಕೈಗೆತ್ತಿಕೊಂಡಿರುವುದಾಗಿ ತಿಳಿಸಿದರು.
ಪಿಲಿಕುಳದಲ್ಲಿ 24.5 ಕೋಟಿ  ವೆಚ್ಚದಲ್ಲಿ ವಿನೂತನ 3ಡಿ ತಾರಾಲಯವನ್ನು ಆದಷ್ಟು ಶೀಘ್ರದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಾಗುವುದು.ಸಿಂಥೆಟಿಕ್ ಟ್ರಾಕ್, ಜಿಲ್ಲಾ ರಂಗಮಂದಿರ, ಲೇಡಿಗೋಶನ್ ಆಸ್ಪತ್ರೆಯ ನವೀಕರಣ, ಮಂಗಳೂರು ಮಿನಿ ವಿಧಾನಸೌಧ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳು ಆರಂಭಗೊಂಡಿರುವುದಾಗಿ ಅವರು ತಿಳಿಸಿದರು.
ನಾಡಿನ ಸ್ವಾತಂತ್ರ್ಯ ಹೋರಾಟಗಾರರ ಕನಸು, ಹಿರಿಯರ ಆಶಯಗಳನ್ನು ಸಾಕಾರಗೊಳಿಸುವ ಬದ್ಧತೆ ನಮ್ಮದಾಗಬೇಕು. ಸರ್ವಧರ್ಮ ಸಹಿಷ್ಣುತೆ, ಭ್ರಾತೃತ್ವದ ಭವ್ಯ ಪರಂಪರೆ ಕಾಯ್ದುಕೊಳ್ಳುವ ಹೊಣೆ ನಮ್ಮ ಮೇಲಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗುವುದು ಕೇವಲ ಆಡಳಿತಾತ್ಮಕ ತೀಮರ್ಾನಿಗಳಿಂದಷ್ಟೇ ಅಲ್ಲ, ಪ್ರಜೆಗಳ ಸಕ್ರಿಯ ಪಾಲ್ಗೊಳ್ಳುವಿಕೆಯೂ ಮುಖ್ಯ. ಇಂದು ಮತದಾನದ ಪ್ರಮಾಣ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವುದು  ವಿಷಾದಕರ ಎಂದ ಸಿ.ಟಿ. ರವಿ, ಚುನಾವಣೆಗಳಿಂದ ಸುಶಿಕ್ಷಿತರು ದೂರವುಳಿದರೆ ಅರ್ಥಪೂರ್ಣ ಪ್ರಜಾಪ್ರಭುತ್ವ ಅಸಾಧ್ಯ ಎಂದರು.
ಈ ಸಾಲಿ ನಲ್ಲಿ ಆರಂಭಿ ಸಲಾ ಗಿರುವ ಸರ್ವೋ ತ್ತಮ ಸೇವಾ ಪ್ರಶಸ್ತಿ ಯನ್ನು ಬಂಟ್ವಾ ಳದ ಸಮು ದಾಯ ಆರೋಗ್ಯ ಕೇಂದ್ರದ  ಡಾ. ದುರ್ಗಾ ಪ್ರಸಾದ್ ಎಂ.ಆರ್. ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾ ಖೆಯ ಉಪ ನಿರ್ದೇ ಶಕ ಶರಣ ಬಸಪ್ಪ, ಮಂಗ ಳೂರು ಮಹಾ ನಗರ ಪಾಲಿಕೆಯ ಆರೋಗ್ಯ ಅಭಿಯಂತರ ಮಂಜುನಾಥ ಆರ್. ಶೆಟ್ಟಿ ಹಾಗೂ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ಜೂಲಿಯಟ್ ಫೆರ್ನಾಂಡಿಸ್  ನೀಡಲಾಯಿತು.
ಕ್ರೀಡಾ ಸಾಧಕರಾದ ಅವನಿ ಎಸ್. ಕುಮಾರ್, ಬಿ. ಸಂಕೇತ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಾಧಕರನ್ನು ಗೌರವಿಸಲಾಯಿತು. ಪೆರೇಡ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಎನ್ಸಿಸಿ ನೇವಿ ಸೀನಿಯರ್ ತಂಡಕ್ಕೆ ಪ್ರಥಮ ಹಾಗೂ ಎನ್ಸಿಸಿ ಏರ್ವಿಂಗ್ ತಂಡಕ್ಕೆ ದ್ವಿತೀಯ ಬಹುಮಾನ ನೀಡಲಾಯಿತು. ಪೆರೇಡ್ ನಲ್ಲಿ 20 ವಿವಿಧ ತಂಡಗಳು ಹಾಗೂ 2 ಪೊಲೀಸ್ ವಾದ್ಯ ವೃಂದ ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಉಪ ಮೇಯರ್ ಅಮಿತಕಲಾ, ಶಾಸಕರಾದ ಎನ್.ಯೋಗೀಶ್ ಭಟ್, ಯು.ಟಿ.ಖಾದರ್, ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೊರಗಪ್ಪ ನಾಯ್ಕ, ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಉಪಮೇಯರ್ ಅಮಿತ ಕಲಾ,ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರಡ್ಡಿ, ಜಿಲ್ಲಾಧಿಕಾರಿ ಎನ್. ಪ್ರಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕರ್ಬಿಕರ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಮೈದಾನದಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ವಿಜೃಂಭಿಸಿದ `ಗಾನ- ನೃತ್ಯ ರಾಷ್ಟ್ರೀಯ ಭಾವೈಕ್ಯ ಸಂಗಮ'
ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಯ ಮುತುವರ್ಜಿಯಿಂದ ನಗರದ ನೆಹರೂ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇಂದು ನಗರದ 23 ಶಾಲೆಗಳ 4,500 ರಷ್ಟು ವಿದ್ಯಾರ್ಥಿಗಳು ಗಾನ- ನೃತ್ಯದ ಮೂಲಕ ರಾಷ್ಟ್ರೀಯ ಭಾವೈಕ್ಯ ಸಂಗಮ ಆಕರ್ಷಣೀಯವಾಗಿ ಮೂಡಿಬಂತು.
ಜಿಲ್ಲಾ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಇದೇ ಪ್ರಥಮ ಬಾರಿಗೆ ನಗರದ ಬಹುತೇಕ ಶಾಲೆಗಳ ಭಾರೀ ಸಂಖ್ಯೆಯ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ರಾಷ್ಟ್ರೀಯ ಭಾವೈಕ್ಯ ಸಂಗಮದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲುಸ್ತುವಾರಿ ಹಾಗೂ ಶಾಲಾ ಶಿಕ್ಷಕರ ವಿಶೇಷ ಮಾರ್ಗದರ್ಶನ ಮತ್ತು ಮುತುವರ್ಜಿಯಲ್ಲಿ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ತಮ್ಮ ಕಲಾ ಪ್ರತಿಭೆಯನ್ನು ಮೆರೆದರು.
ಸಾರೇ ಜಹಾಂ ಸೆ ಅಚ್ಚಾ..., ಜೈ ಭಾರತ ಜನ ನಿಯ ತನು ಜಾತೆ... ಪಾಪು ಲ್ಲಾರು ಪಿಲ್ಲ ಲ್ಲಾರು..., ಎಲೆ ಗಳು ನೂರಾರು ಭಾವದ..., ಜೋ ಲಾಲಿ...., ಕೂಡಿ ವಿಳಿ ಯಾಡು ಪಾಪ..., ಒಂದೇ ಒಂದೇ ನಾವೆ ಲ್ಲರೂ ಒಂದೇ..., ಹಮ್ ಹೋಂ ಗೇ ಕಾಮಿ ಯಾಬ್... ಮೊದ ಲಾದ ಹಾಡು ಗಳನ್ನು ಒಂದರ ಮೇಲೊಂ ದರಂತೆ ಧ್ವನಿ ಸುರು ಳಿಯ ಹಿನ್ನೆಲೆ ಯೊಂದಿಗೆ 2600 ರಷ್ಟು ವಿದ್ಯಾ ರ್ಥಿಗಳು ಗಾಯನ ಮಾಡಿ ದರೆ, ಆ ಹಾಡು ಗಳಿಗೆ ಲಯ ಬದ್ಧ ವಾಗಿ ವಿವಿಧ ಶಾಲೆ ಗಳ 2000 ಕ್ಕೂ ಅಧಿಕ ವಿದ್ಯಾರ್ಥಿ ಗಳು ಸರಳ ವಾದ ಉಡುಗೆ ತೊಡುಗೆ ಗಳೊಂ ದಿಗೆ ಹೆಜ್ಜೆ ಹಾಕಿ ಮನ ಸೆಳೆ ದರು.
ರಾಷ್ಟ್ರೀಯ ಭಾವೈಕ್ಯ ಸಂಗಮದಲ್ಲಿ ಪಾಲ್ಗೊಂಡ ವಿವಿಧ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ 5000ಕ್ಕೂ ಅಧಿಕ ಮಂದಿಗೆ ಬೆಳಗ್ಗಿನ ಉಪಹಾರವನ್ನು ಕಸಾಪ ಅಧ್ಯಕ್ಷ ಪ್ರದೀಪ್ ಕಲ್ಕೂರ ಅವರು ನೀಡಿ ಸಹಕರಿಸಿದರು.