Thursday, January 31, 2013

ಪಡೀಲ್ -ಬಜಾಲ್ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ 5.16 ಕೋ. ರೂ. ಬಿಡುಗಡೆ

ಮಂಗಳೂರು,ಜನವರಿ.31;ಪಡೀಲ್ ಬಜಾಲ್ನಲ್ಲಿ ರೈಲ್ವೆ ಕೆಳ ಸೇತುವೆ  ನಿರ್ಮಾಣ ಮಾಡಲು 5,16,06,814 ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.  ಶೀಘ್ರದಲ್ಲಿ ಟೆಂಡರ್ ಪ್ರಕ್ರೀಯೆಗೆ ಚಾಲನೆ ನೀಡಲಾಗುವುದು ಎಂದು ಸಂಸದ ನಳೀನ್ ಕುಮಾರ್  ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ರೈಲ್ವೆ ಇಲಾಖೆ ಹಾಗು ಇತರ ಇಲಾಖಾ ಅಧಿಕಾರಗಳೊಂದಿಗೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರೈಲ್ವೆ ಇಲಾ ಖೆಯ ಅಧಿಕಾ ರಿಗಳ ಜೊತೆ ನಡೆದ ಸಭೆ ಯಲ್ಲಿ ಸರ ಕಾರ ದಿಂದ ಯೋಜ ನೆಗೆ ಸಂಬಂ ಧಿಸಿ ದಂತೆ ಕೋರ ಲಾದ ಅನು ದಾನದ ಪ್ರಕಾರ ರೈಲ್ವೆ ಇಲಾಖೆ 2,87,43,583 ರೂಪಾಯಿ ಹಾಗು ಕರ್ನಾಟಕ ಸರಕಾರ 2,28,63,258 ರೂಪಾಯಿ ಅನುದಾನ ಬಿಡುಗಡೆ ಮಾಡಿ ಆದೇಶ ಮಾಡಲಾಗಿದೆ ಎರಡು ವಾರದಲ್ಲಿ ಟೆಂಡರ್ ಕರೆದು ಮೂರನೆ ವಾರದಲ್ಲಿ ಟೆಂಡರ್ ತೆರೆಯಲಾಗುವುದು ಎಂದು ಸಂಸದರು ಸಭೆಗೆ ತಿಳಿಸಿದರು.ಮನಪಾದಿಂದ ಬರಬೇಕಾದ ಅನುದಾನ ಶೀಘ್ರವಾಗಿ ಬಂದಲ್ಲಿ ಟೆಂಡರ್ ಪ್ರಕ್ರೀಯೆ ತ್ವರಿತಗೊಳಿಸಲಾಗುವುದು ಎಂದು ಪಾಲ್ಘಾಟ್ ರೈಲ್ವೆ ವಿಭಾಗದ ಹೆಚ್ಚುವರಿ ನಿರ್ದೇಶಕರಾದ ಮೋಹನ್ ಮೆನನ್ ತಿಳಿಸಿದರು. 17.63ಕೋಟಿ ರೂ.ವೆಚ್ಚದಲ್ಲಿ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಅಭಿವೃದ್ದಿ :-ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣವನ್ನು 17.63 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಸಿದ್ಧ ಪಡಿಸಲಾಗಿದೆ ಎಂದು ಮೋಹನ್ ಮೆನನ್ ತಿಳಿಸಿದರು.ಪ್ರಸಕ್ತ ಮಂಗಳೂರು ರೈಲ್ವೆ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ಯೋಜನೆ ಬೆಲ್ಜಿಯಂ ತಾಂತ್ರಿಕ ಸಲಹೆಗಾರರ ಸಹಾಯದೊಂದಿಗೆ ಪ್ರಗತಿಯಲ್ಲಿದೆ ಎಂದು ಮೋಹನ್ ಮೆನನ್ ತಿಳಿಸಿದರು.
ಕಂಕ ನಾಡಿ ಪ್ರದೇಶದ ಪಡೀಲ್ -ಬಜಾಲ್ ರೈಲ್ವೆ ಕೆಳ ಸೇತುವೆ ರಸ್ತೆಗೆ ಸಂಬಂ ಧಿಸಿ ದಂತೆ ಒಟ್ಟು 11 ಕೋಟಿ ರೂಪಾ ಯಿಯ ಯೋಜನೆ ಯನ್ನು ಮಂಗ ಳೂರು ಮಹಾ ನಗರ ಪಾಲಿಕೆ ಹಾಗು ದಕ್ಷಿಣ ರೈಲ್ವೆ ವಿಭಾ ಗದ ನಡುವೆ ಶೇ 50:50 ರ ಅನು ಪಾತ ದಲ್ಲಿ ವೆಚ್ಚವನ್ನು ಭರಿಸ ಬೇಕಾ ಗಿದೆ,ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಹಾಗು ರೈಲ್ವೆ ಸಚಿವಾಲಯ  ಅನುದಾನ ದೊಂದಿಗೆ ನಿವರ್ಾಹಣಾ ವೆಚ್ಚದ ಶೇ 30ನ್ನು ರೈಲ್ವೆ ಇಲಾಖೆ ನೀಡಲು ಸಮ್ಮತಿಸಿದೆ .ಬೈಕಂಪಾಡಿ ರೈಲ್ವೆ ಮೇಲ್ ಸೇತುವೆ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಪರಿಷೃತ ಯೋಜನೆ ತಯಾರಿಸಲು ನಳಿನ್ ಕುಮಾರ್ ಸೂಚಿಸಿದರು.
ಸುರತ್ಕಲ್-ಬಿ.ಸಿ.ರೋಡ್ ಚತುಷ್ಪಥ ರಸ್ತೆ ಕಾಮಗಾರಿಯನ್ನು ಎಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಕುಂದಾಪುರ- ತಲಪಾಡಿ ಚತುಷ್ಪಥ ಕಾಮಗಾರಿ 2014ರಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀರಾಮ್ ಮಿಶ್ರಾ ಸಭೆಗೆ ತಿಳಿಸಿದರು.
ಮಂಗ ಳೂರು ಸೆಂಟ್ರಲ್  ರೈಲ್ವೆ ನಿಲ್ದಾಣ ದ ಅಭಿ ವೃದ್ಧಿ ಬಹು ಉಪ ಯೋಗಿ ಸಂಕೀ ರ್ಣದ ರಚನೆ ಹಾಗು ಕಂಕ ನಾಡಿ ಜಂಕ್ಷನ್ ರೈಲ್ವೆ ನಿಲ್ದಾ ಣದ ಸಮಸ್ಯೆ ಗಳ ಬಗ್ಗೆ ಸಭೆ ಯಲ್ಲಿ ಭಾಗ ವಹಿ ಸಿದ ಪ್ರತಿ ನಿಧಿ ಗಳು ಅಧಿ ಕಾರಿ ಗಳ ಗಮನ ಸೆಳೆ ದರು.ಬೈಕಂ ಪಾಡಿ ರೈಲ್ವೆ ಮೇಲ್ಸೇ ತುವೆ ಕಾಮ ಗಾರಿ ತ್ವರಿತ ವಾಗಿ ಕೈ ಗೊಳ್ಳಲು ಸಂಸದ ನಳಿನ್ ಕುಮಾರ್ ಸೂಚಿಸಿದರು.
ಚೆರ್ವತ್ತೂರು -ಮಂಗಳೂರು ಪ್ಯಾಸೆಂಜರ್ ರೈಲು ಮತ್ತು ಕಬಕ-ಪುತ್ತೂರು ರೈಲಿನಲ್ಲಿ ಬರುವ ವಿದ್ಯಾರ್ಥಿಗಳು ಮತ್ತು ನೌಕರರಿಗೆ ಅನುಕೂಲವಾಗುವಂತೆ  ಬೆಳಗ್ಗೆ ಹಿಂದೆ ನಿಗದಿಯಾದ ಸಮಯದಂತೆ 9 ಗಂಟೆಗೆ ಮುಂಚಿತವಾಗಿ ಈ ಎರಡೂ ರೈಲುಗಳು ಮಂಗಳೂರು ತಲುಪಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೋರಿಕೆಗೆ ಸ್ಪಂದಿಸಿದ ರೈಲ್ವೇ ಇಲಾಖಾಧಿಕಾರಿಗಳು ಸಮ್ಮತಿಸಿದರು.
     ಸಭೆಯಲ್ಲಿ ವಿಧಾನಸಭೆಯ ಉಪಸಭಾಪತಿ ಎನ್.ಯೋಗೀಶ್ ಭಟ್,ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾಧಿಕಾರಿ ಪ್ರಕಾಶ್ ,ಅಪರ ಜಿಲ್ಲಾಧಿಕಾರಿ ದಯಾನಂದ,ಮನಪಾ ಆಯುಕ್ತ ಡಾ ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.