Friday, January 25, 2013

ವಾಹನ ಚಾಲಕರಿಗೆ ಅಪಘಾತ ಪರಿಹಾರ ಯೋಜನೆ

ಮಂಗಳೂರು, ಜನವರಿ.25:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನರ್ಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕ ಅಪಘಾತ ಪರಿಹಾರ ಯೋಜನೆಯಡಿ ಒಟ್ಟು 9109 ಚಾಲಕರು ಹೆಸರು ನೊಂದಾಯಿಸಿದ್ದು ಅವರಿಗೆ ಗುರುತಿನ ಚೀಟಿಗಳನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್ ತಮ್ಮ ಕಚೇರಿಯಲ್ಲಿ ಗುರುವಾರ ವಿತರಿಸಿದರು.
         ಜಿಲ್ಲೆ ಯಲ್ಲಿ 1684 ಖಾಸಗಿ ಬಸ್ಸು ಗಳು, 1452 ಮ್ಯಾಕ್ಸಿ ಕ್ಯಾಬ್ ಗಳು ಸೇರಿ ದಂತೆ ಇನ್ನೂ ಹೆಚ್ಚಿನ ಸಂಖ್ಯೆ ಯಲ್ಲಿ ಖಾಸಗಿ ವಾಣಿಜ್ಯ ವಾಹನ ಚಾಲ ಕರು ಕರ್ತವ್ಯ ನಿರ್ವಹಿ ಸುತ್ತಿ ದ್ದಾರೆ. ಇವರೆಲ್ಲರೂ ಈ ಯೋಜನೆ ಯಡಿ ತಮ್ಮ ಹೆಸ ರನ್ನು ನೊಂದಾ ಯಿಸಿ ದ್ದಲ್ಲಿ ಆಕ ಸ್ಮಿಕ ಜರು ಗುವ ಅಪಘಾ ತಗಳಿಂದ ಪ್ರಾಣಾ ಪಾಯ, ಅಂಗ ಊನ ಮುಂತಾದ ಮಾರ ಣಾಂತರಿಕ ಗಾಯಾ ಳುಗಳ ಕುಟುಂಬ ದವರಿಗೆ ಈ ಯೋಜನೆಯಿಂದ ದೊರಕುವ ಪರಿಹಾರ ಸ್ವಲ್ಪ ಮಟ್ಟಿನ ಆರ್ಥಿಕ ಬಲ ನೀಡಲಿದೆ. ಆದ್ದರಿಂದ ಈ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
       ಮಾರಣಾಂತಿಕ ಪರಿಹಾರವಾಗಿ ರೂ. 2ಲಕ್ಷದವರೆಗೂ ಪರಿಹಾರ ದೊರಕಲಿದೆ ಎಂದ ಜಿಲ್ಲಾಧಿಕಾರಿಗಳು, ಅಸಂಘಟಿತ ವಲಯಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದೆ.
      ವಾಹನ ಚಾಲಕ ರಿಗೆ ವಾಹನ ಚಲಾ ಯಿಸು ವಾಗಲೇ ಅಪ ಘಾತ ವಾಗ ಬೇಕೆಂ ದಿಲ್ಲ. ಆಕ ಸ್ಮಿಕ ಸಾವಿಗೂ ಸಹ ಈ ಯೋಜನೆ ಯಲ್ಲಿ ಪರಿ ಹಾರ ವಿದೆ. ಆದರೆ ಮೃತ ವ್ಯಕ್ತಿ ಈ ಯೋಜನೆ ಯಲ್ಲಿ ಹೆಸರು ನೋಂದಾ ಯಿಸಿ ಕೊಂಡಿದ್ದ ಗುರು ತಿನ ಚೀಟಿ ಹೊಂದಿ ರಬೇಕು ಎಂದು ಅವರು ತಿಳಿಸಿ ದರು.
 ಮಾಧ್ಯಮ ಗೋಷ್ಟಿ ಯಲ್ಲಿ ಕಾರ್ಮಿಕ ಅಧಿಕಾರಿ ಮಹೇಶ್, ಆನಂದಮೂರ್ತಿ ಮುಂತಾದವರು ಹಾಜರಿದ್ದರು.