Thursday, January 24, 2013

ಪ್ರತಿ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ರೂ.30 ಕೋಟಿ :ಕೆ.ಎಸ್.ಈಶ್ವರಪ್ಪ

ಮಂಗಳೂರು, ಜನವರಿ. 24 :-ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಕಡೆ ಸರ್ವ ಋತು ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು,ಪ್ರತೀ ವಿಧಾನಸಭಾ ಕ್ಷೇತ್ರಕ್ಕೂ ತಲಾ ರೂ.30 ಕೋಟಿ ಅನುದಾನವನ್ನು ರಸ್ತೆಗಳ ಅಭಿವೃದ್ಧಿಗೆ ನೀಡಲು ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆಯೆಂದು ರಾಜ್ಯದ ಉಪ ಮುಖ್ಯಮಂತ್ರಿಗಳಾದ  ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದ್ದಾರೆ.
      ಅವರು ಬುಧ ವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣ ದಲ್ಲಿ ಸುಮಾರು 43.05 ಕೋಟಿ ವೆಚ್ಚದ ವಿವಿಧ ಅಭಿ ವೃದ್ಧಿ ಕಾಮ ಗಾರಿ ಗಳನ್ನು ಉದ್ಘಾ ಟಿಸಿ ಹಾಗೂ ಶಂಕು ಸ್ಥಾಪನೆ ನೆರ ವೇರಿಸಿ ಮಾತ ನಾಡಿ ದರು. ರಸ್ತೆ ಗಳ ಅಭಿ ವೃದ್ಧಿಗೆ ಪಟ್ಟಣ ಪಂಚಾ ಯತ್ ಗಳಿಗೆ     ತಲಾ ರೂ.5 ಕೋಟಿ, ಪುರ ಸಭೆ ಗಳಿಗೆ ರೂ.10 ಕೋಟಿ ಹಾಗೂ ನಗರ ಸಭೆ ಗಳಿಗೆ ರೂ.15 ಕೋಟಿ ಅನು ದಾನ ಬಿಡು ಗಡೆ ಮಾಡ ಲಾಗು ವುದೆಂದರು.
  ಕುಮ್ಕಿ, ಜಮ್ಮಾ , ಬಾಣೆ ಫಲಾ ನುಭ ವಿಗ ಳಿಗೆ ಹಕ್ಕು ಪತ್ರ ನೀಡಲು ಸಂಪುಟ ತೀರ್ಮಾ ನವಾ ದಂತೆ ನಗರ ಪ್ರದೇ ಶಗಳ ಕೊಳಚೆ ನಿವಾಸಿ ಗಳಿಗೂ ಹಕ್ಕು ಪತ್ರ ನೀಡುವ ಪ್ರ ಕ್ರಿಯೆಗೆ ಚಾಲನೆ ನೀಡ ಲಾಗಿದೆ ಎಂದು ತಿಳಿಸಿ ದರು.
      ಸಮಾ ರಂಭ ದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ರಾದ ಎಸ್.ಅಂಗಾರ,ಸಂಸದರಾದ ನಳಿನ್ ಕುಮಾರ್ ಕಟೀಲ್,ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಮುಂತಾದವರು ಭಾಗವಹಿಸಿದ್ದಾರು.