Thursday, January 31, 2013

'ಸಮಗ್ರ ಬೆಳವಣಿಗೆಗೆ ಪೌಷ್ಟಿಕ ಆಹಾರ'

ಮಂಗಳೂರು, ಜನವರಿ.31: ಊಟ ಬಲ್ಲವನಿಗೆ ರೋಗವಿಲ್ಲ; ಆರೋಗ್ಯವೇ ಭಾಗ್ಯ ಈ ಎಲ್ಲ ಗಾದೆಗಳು ಮಾನವನ ಆರೋಗ್ಯದ  ಮಹತ್ವವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸೃಷ್ಟಿಯಾದವು. ಮಾನವ ಹಸಿವೆ ತೀರಿಸಲು ಮಾತ್ರ ತಿನ್ನದೇ ದೇಹದ ಸಮಗ್ರ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಹಾರವನ್ನು ಸೇವಿಸಬೇಕೆಂದು ಹಿರಿಯ ಮಲೇರಿಯಾ ಪರಿವೀಕ್ಷಕರಾದ ಜಯರಾಮ್ ಪೂಜಾರಿ ಅವರು ಹೇಳಿದರು.
        ಅವ ರಿಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂ ಕಿನ ಪೂಂಜಾಲ ಕಟ್ಟೆಯ ಮುರು ಘೇಂದ್ರ ಸಭಾ ಭವನ ದಲ್ಲಿ ವಾರ್ತಾ ಇಲಾಖೆ, ಗ್ರಾಮ ಪಂಚಾ ಯತ್ ಪಿಲಾತ ಬೆಟ್ಟು, ಕಾರ್ಯ ನಿರತ ಪತ್ರ ಕರ್ತರ ಸಂಘ ಬಂಟ್ವಾಳ ತಾಲೂಕು ಮತ್ತು ಮುರು ಘೇಂದ್ರ ಮಿತ್ರ ಮಂಡಳಿ, ವನಿತಾ ಸಮಾಜ ಪೂಂಜಾ ಲಕಟ್ಟೆ ಇವರ ಸಂಯು ಕ್ತಾಶ್ರ ಯದಲ್ಲಿ ಆಯೋಜಿಸಲಾದ 'ಅಪೌಷ್ಟಿಕತೆ ನಿವಾರಣೆ' ಕುರಿತ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ನಮ್ಮ ಆಹಾರ ದಲ್ಲಿ ಐದು ಅಂಶ ಗಳು ಮುಖ್ಯ ವಾಗಿ ರಬೇಕಾ ಗಿದ್ದು, ಧಾನ್ಯ, ಬೇಳೆ ಕಾಳು ಗಳು, ಸೊಪ್ಪು ತರ ಕಾರಿ, ಹಾಲು, ಹಣ್ಣು ಗಳು ಮಾನ ವನ ಆರೋ ಗ್ಯದ ಸಮಗ್ರ ಬೆಳ ವಣಿ ಗೆಗೆ ಅಗತ್ಯ ಎಂದರು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿ ಯಾನ ದಿಂದ ಗ್ರಾಮೀಣ ಆರೋಗ್ಯ ಸದೃಢಗೊಳಿಸುವಲ್ಲಿ ಪರಿಣಾಮಕಾರಿ ಕೆಲಸಗಳಾಗಿವೆ. ನಮ್ಮ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಇದೆ. ಆದರೆ ತಾಯಿ ಮರಣ ಪ್ರಮಾಣ ಕನಿಷ್ಠ ಗೊಳಿಸಲು ಇನ್ನಷ್ಟು ಸಾಧನೆಯಾಗಬೇಕಿದೆ ಎಂದರು.
ಹದಿಹರೆಯದ ಆರೋಗ್ಯ, ಅದರಲ್ಲೂ ಮುಖ್ಯವಾಗಿ ಹದಿಹರೆಯದ ಹೆಣ್ಣು ಮಕ್ಕಳ ಆರೋಗ್ಯ ಉತ್ತಮವಾದರೆ ಆರೋಗ್ಯವಂತ ಸಮಾಜ ನಿರ್ಮಾಣ ಖಂಡಿತ ಸಾಧ್ಯ ಎಂದ ಅವರು, ಹೆಣ್ಣೊಬ್ಬಳು ಆರೋಗ್ಯವಾಗಿದ್ದರೆ, ಇಡೀ ಕುಟುಂಬ ಹಾಗೂ ಸಮಾಜ ಆರೋಗ್ಯಪೂರ್ಣವಾಗಿರಲು ಸಾಧ್ಯ. ಸ್ವಚ್ಛ ಹಾಗೂ ವಿಟಮಿನ್ಯುಕ್ತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಭಾಗ್ಯ ಲಭ್ಯ. ಈ ಉದ್ದೇಶದಿಂದಲೇ ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿ ಎಂಬ ಘೋಷವಾಕ್ಯ ಸೃಷ್ಟಿಯಾದದ್ದು ಎಂದರು. ಆಹಾರ ಸೇವನೆಯಲ್ಲಿ ನಿರ್ಲಕ್ಷ್ಯ, ಅಪೌಷ್ಟಿಕತೆಯಿಂದ ಸಮಾಜದ ಮೇಲಾಗುವ ದುಷ್ಪರಿಣಾಮಗಳನ್ನು ನೀಡಿದರಲ್ಲದೆ. ಆಹಾರ ಸೇವನೆಗೆ ಸಂಬಂಧಿಸಿದಂತೆ ಮಹಿಳೆಯರಲ್ಲಿದ್ದ ಸಂಶಯಗಳಿಗೆ ಉತ್ತರ ನೀಡಿದರು.
ಕಾರ್ಯ ಕ್ರಮವನ್ನು ಪಿಲಾತ ಬೆಟ್ಟು ಗ್ರಾಮ ಪಂಚಾ ಯತ್ ಅಧ್ಯಕ್ಷ ರಾದ ಶ್ರೀಮತಿ ಭಾರತಿ ಶೆಟ್ಟಿ ಉದ್ಘಾ ಟಿಸಿದರು. ಮುರು ಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ರಾದ ವಿಕ್ಟರ್ ಡಿ ಸೋಜಾ, ಮುರು ಘೇಂದ್ರ ವನಿತಾ ಸಮಾ ಜದ ಅಧ್ಯಕ್ಷ ರಾದ ಶ್ರೀಮತಿ ಉಮಾ ಡಿ. ಗೌಡ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜ ನೆಯ ಯೋಜನಾ ಧಿಕಾರಿ ಶ್ರೀ ಮತಿ ದಯಾ ವತಿ ಎಸ್, ಬಂಟ್ವಾಳ ತಾಲೂ ಕಿನ ಕಾರ್ಯನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವ ಕರ್ಮ ವೇದಿಕೆ ಯಲ್ಲಿ ದ್ದರು. ವಾರ್ತಾ ಧಿಕಾರಿ ರೋಹಿಣಿ ಸ್ವಾಗ ತಿಸಿ ದರು. ಸಂದೀಪ್ ಸಾಲ್ಯಾನ್ ವಂದಿ ಸಿದರು. ರತ್ನ ದೇವ್ ಪೂಂಜಾ ಲಕಟ್ಟೆ ಕಾರ್ಯ ಕ್ರಮ ನಿರೂ ಪಿಸಿ ದರು.
ಕಾರ್ಯ ಕ್ರಮದ ಬಳಿಕ ಸಂಸಾರ ತಂಡ ದಿಂದ 'ಸಾವ ಯವ ಅಜ್ಜ' ಬೀದಿ ನಾಟಕ ವನ್ನು ಪ್ರದ ರ್ಶಿಸಿದರು.