Friday, January 25, 2013

'ಯಶಸ್ವಿ ಪ್ರಜಾಪ್ರಭುತ್ವಕ್ಕೆ ಮತದಾನದ ಹಕ್ಕನ್ನು ಬಳಸಿ'

ಮಂಗಳೂರು, ಜನವರಿ.25:- ಯಶಸ್ವಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದೊಂದು ಮತವೂ ಮಹತ್ವ. ಮತದಾನದ ಹಕ್ಕನ್ನು ಹೊಂದಿರುವ ಪ್ರತಿಯೊಬ್ಬನ್ನು ತನ್ನ ಹಕ್ಕನ್ನು ಚಲಾಯಿಸುವ ಮೂಲಕ ಸುಭದ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ತನ್ನ ಕೊಡುಗೆ ನೀಡಬೇಕೆಂದು  ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ. ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.
ರಾಷ್ಟ್ರೀಯ ಮತ ದಾರ ರರ ದಿನಾ ಚರಣೆ ಯಂಗ ವಾಗಿ ನಗ ರದ ಪುರ ಭವನ ದಲ್ಲಿ ಜಿಲ್ಲಾ ಡಳಿತ ಆಯೋ ಜಿಸಿದ ಕಾರ್ಯ ಕ್ರಮ ಉದ್ಘಾ ಟಿಸಿ ಅವರು ಮಾತ ನಾಡು ತ್ತಿದ್ದರು.
40 ಕೋಟಿ ಯುವ ಮತ ದಾರರು ನಮ್ಮ ದೇಶದ ಶಕ್ತಿ ಯಾಗಿದ್ದು, ಎಲ್ಲ ಯುವ ಕರು ತಮ್ಮ ಹಕ್ಕನ್ನು ಚಲಾ ಯಿಸಿ ದರೆ ವ್ಯವಸ್ಥೆ ಯಲ್ಲಿ ಸಕಾ ರಾತ್ಮಕ ಬದ ಲಾವಣೆ ಸಾಧ್ಯ ವಿದೆ ಎಂದ ಅವರು, ದೇಶದಲ್ಲಿ ಶೇ. 30ರಷ್ಟು ಬಡತನ, ಶೇ. 30ರಷ್ಟು ಅನಕ್ಷರತೆ, ಶೇ. 25ರಷ್ಟು ಜನರು ಮೂಲಭೂತ ಸೌಕರ್ಯ ಕೊರತೆಯನ್ನು ಎದುರಿಸುತ್ತಿದ್ದಾರೆ. ದೇಶದ ಜನ ಸಂಖ್ಯೆ ಯಲ್ಲಿ ಒಟ್ಟು 76 ಕೋಟಿ ಮತ ದಾರ ರಿದ್ದಾರೆ. ಇಂತಹ ಸಂದ ರ್ಭದಲ್ಲಿ ದೇಶ ವನ್ನು ಅಭಿ ವೃದ್ಧಿ ಯತ್ತ ಮುನ್ನ ಡೆಸುವ ಉತ್ತಮ ರಾಜ ಕೀಯ ನಾಯ ಕತ್ವದ ಅಗತ್ಯ ವಿದೆ. ಮತ ದಾನದ ಮಹತ್ವ ವನ್ನು ಅರಿತು ದೇಶಕ್ಕೆ ಸಮರ್ಥ ಮುಂದಾ ಳತ್ವ ನೀಡಬಲ್ಲ ನಾಯಕನನ್ನು ಆಯ್ಕೆ ಮಾಡುವ ಹೊಣೆ  ನಮ್ಮೆಲ್ಲರದು ಎಂದು ಡಾ. ಶಾಂತಾರಾಮ ಶೆಟ್ಟಿ ಪ್ರತಿಪಾದಿಸಿದರು.
 ಮತದಾನದ ಮಹತ್ವದ ಕುರಿತಂತೆ ಪ್ರಧಾನ ಭಾಷಣ ಮಾಡಿದ ಮಂಗಳಗಂಗೋತ್ರಿಯ ರಾಜ್ಯಶಾಸ್ತ್ರ ಪ್ರೊ. ಪಿ.ಎಲ್. ಧರ್ಮ ಅವರು, ಜಾಗೃತ ಜನರಿಂದ ಉತ್ತಮ ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವದ ಬೆಳವಣಿಗೆಗೆ ಮತದಾನದಲ್ಲಿ ಸಕ್ರಿಯ ಭಾಗವಹಿಸುವಿಕೆಯ ಅಗತ್ಯವಿದೆ ಎಂದರು. ದೇಶದಲ್ಲಿ ಯುವಜನತೆ ಮತದಾನದಿಂದ ದೂರ ಇರುವುದು ಆತಂಕಕಾರಿ  ಸಂಗತಿ ಎಂದು ಹೇಳಿದರು.
ಮತದಾನದಿಂದ ಸಾಮಾಜಿಕ ಕ್ರಾಂತಿ ಸಾಧ್ಯ; ಸಮುದಾಯ ಅಭಿವೃದ್ಧಿ, ಸಹಬಾಳ್ವೆ ರಾಜಕೀಯ ಶಿಕ್ಷಣದಿಂದ ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು ಎಂದು ಪಿ.ಎಲ್. ಧರ್ಮ ತಿಳಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎನ್. ಪ್ರಕಾಶ್, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಮತದಾನದ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದು ಸಂತಸದ ಸಂಗತಿ ಎಂದರು.
ಹಾಗಿ ದ್ದರೂ ಪ್ರಸ್ತುತ ಶೇ. 60ರಿಂದ 65ರಷ್ಟು ಪ್ರಮಾ ಣದಲ್ಲಿ ಮಾತ್ರವೇ ಮತ ದಾನ ಆಗು ತ್ತಿದ್ದು, ಇದ ರಿಂದ ಪ್ರಜಾ ಪ್ರಭುತ್ವ ವ್ಯ ವಸ್ಥೆಗೆ ತೊಡ ಕಾಗು ತ್ತಿದೆ. ಈ ಬಗ್ಗೆ ಯುವ ಜನತೆ ಜಾಗೃ ತರಾಗಿ ಮತ ದಾನದ ಪ್ರಾಮು ಖ್ಯತೆ ಯನ್ನು ತಿಳಿದು ಕೊಂಡು ಇತರ ರಲ್ಲಿ ಅರಿವು ಮೂಡಿ ಸುವ ಕೆಲಸ ಮಾಡ ಬೇಕೆಂದು ಜಿಲ್ಲಾ ಧಿಕಾರಿ ನುಡಿ ದರು.
ಕಾರ್ಯ ಕ್ರಮದಲ್ಲಿ ಸಾಂಕೇ ತಿಕ ವಾಗಿ ನೂತನ ವಾಗಿ ಹೆಸರು ನೊಂದಾ ಯಿಸಿದ 8 ಮತ ದಾರ ರಿಗೆ ಗುರು ತಿನ ಚೀಟಿ ಯನ್ನು ವಿತ ರಿಸ ಲಾಯಿತು. ಮತ ದಾರರ ದಿನಾ ಚರಣೆ ಅಂಗ ವಾಗಿ ಶಾಲಾ, ಕಾಲೇಜು ಗಳ ವಿದ್ಯಾರ್ಥಿ ಗಳಿಗೆ ವಿವಿಧ ಸ್ಪರ್ಧೆ ಗಳನ್ನು ಆಯೋ ಜಿಸ ಲಾಗಿದ್ದು, ಈ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ಮತದಾನದ ಬಗ್ಗೆ ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಅಪರ ಜಿಲ್ಲಾ ಧಿಕಾರಿ ದಯಾ ನಂದ್ ಸ್ವಾಗ ತಿಸಿ ಪ್ರಾಸ್ತಾ ವಿಕ ನುಡಿ ಗಳ ನ್ನಾಡಿದರು. ಮಂಗ ಳೂರು ವಿಭಾ ಗದ ಸಹಾ ಯಕ ಆಯುಕ್ತ ಎಂ.ವಿ. ವೆಂಕ ಟೇಶ್, ಜಿಲ್ಲಾ ಪಂಚಾ ಯತ್  ಉಪ ಕಾರ್ಯ ದರ್ಶಿ ಶಿವ ರಾಮೇ ಗೌಡ ಉಪ ಸ್ಥಿತ ರಿದ್ದರು. ಸಭಾ ಕಾರ್ಯ ಕ್ರಮಕ್ಕೆ ಮೊದಲು ವಿದ್ಯಾರ್ಥಿ ಗಳು, ಅಧಿ ಕಾರಿ ಗಳು ಹಾಗೂ ಶಿಕ್ಷಕ ರನ್ನೊ ಳಗೊಂಡು ಮಾನವ ಸರ ಪಳಿ ಕಾರ್ಯ ಕ್ರಮ ನಡೆಯಿತು. ವಿಜೇತ ತಂಡ ಗಳಿಂದ ಕಾರ್ಯ ಕ್ರಮವೂ ನೆರವೇರಿತು.