Saturday, January 26, 2013

ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ನಿರ್ವಹಣಾ ವ್ಯವಸ್ಥೆ ಉದ್ಘಾಟನೆ


ಮಂಗಳೂರು, ಜನವರಿ. 26:- ರಾಜ್ಯ ಸರ್ಕಾರದ ಇನ್ನೊಂದು ಮಹತ್ವಾಕಾಂಕ್ಷಿ ಯೋಜನೆ ಸಾರ್ವಜನಿಕ ಕುಂದುಕೊರತೆಗಳ ನಿರ್ವಹಣಾ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಮೂರನೇ ಮಹಡಿಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಟಿ ರವಿ ಅವರು ಉದ್ಘಾಟಿಸಿದರು. ಈ ವ್ಯವಸ್ಥೆ ಯಡಿ ನಾಗ ರಿಕರು ತಮ್ಮ ಅಹ ವಾಲು/ ಕುಂದು ಕೊರತೆ ಯನ್ನು ಇಂಟರ್ ನೆಟ್ ಮುಖೇನ ದಾಖಲಿ ಸಬಹು ದಲ್ಲದೆ, ದೂರಿನ ಬಗ್ಗೆ ವಿವಿಧ ಹಂತ ಗಳಲ್ಲಿ ಪರಿ ಶೀಲಿ ಸಬಹುದು.
 ದಾಖ ಲಿಸಿದ ದೂರುಗಳ ಶೀಘ್ರ ವಿಲೇವಾರಿ ಕೋರಿ ನೆನಪೋಲೆಗಳನ್ನು ಸಲ್ಲಿಸಬಹುದು. ಇಂಟರ್ ನೆಟ್ ನಲ್ಲಿ ಅರ್ಜಿ ದಾಖಲಾದ ಕೂಡಲೇ ಅರ್ಜಿಯನ್ನು ದೂರಿಗೆ ಸಂಬಂಧಿಸಿದ ಇಲಾಖೆಯ ಪ್ರಥಮ ಹಂತದ ಅಧಿಕಾರಿಗಳಿಗೆ ರವಾನಿಸುತ್ತಾರೆ.
ಮಾನಿಟರಿಂಗ್ ಮೇಜು: ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾನಿಟರಿಂಗ್ ಸೆಲ್ ಇರಲಿದೆ. ಈ ಸೆಲ್ ನಿಂದಲೇ ಇಂಟರ್ನೆಟ್ ಮೂಲಕ ಬಂದ ಕುಂದುಕೊರತೆಗಳ ಅರ್ಜಿಯನ್ನು ಸೂಕ್ತ ಕ್ರಮಕ್ಕಾಗಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಕುಂದುಕೊರತೆ/ಅಹವಾಲಿನ ಇತ್ಯರ್ಥಕ್ಕೆ ಗಮನಹರಿಸುವಂತೆ ಕ್ರಮವಹಿಸಲಾಗು ವುದು.

www.dk.nic.in £À°è public grievance ಲಿಂಕ್ ಗೆ ಹೋಗಬೇಕು ಅಥವಾ 
URL: http://stg3.kar.nic.in /pgrcdk


ಸಾರ್ವಜನಿಕ ಕುಂದುಕೊರತೆಗಳ ನಿರ್ವಹಣಾ ವ್ಯವಸ್ಥೆ:

ಸಾರ್ವಜನಿಕ ಕುಂದುಕೊರತೆಗಳ ನಿರ್ವಹಣಾ ವ್ಯವಸ್ಥೆಯು ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ವ್ಯವಸ್ಥೆಯನ್ವಯ ಸಾರ್ವಜನಿಕ ದೂರುಗಳಿಗೆ ಸಂಬಂಧಿಸಿ, ನಾಗರಿಕರು ತಮ್ಮ ದೂರುಗಳನ್ನು ಇಂಟರ್ ನೆಟ್ ಮೂಲಕ ನೇರವಾಗಿ ದಾಖಲಿಸಬಹುದು ಮತ್ತು ಅದರ ವಿಲೇವಾರಿ ಬಗ್ಗೆ ಸಂಬಂಧಿಸಿದ ಮಾಹಿತಿಯನ್ನು ಇಂಟರ್ ನೆಟ್ ಮೂಲಕವೇ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ನಾಗರಿಕರು ಈ ವ್ಯವಸ್ಥೆಯಿಂದ ಅವರ ಅಹವಾಲು/ ಕುಂದು ಕೊರತೆಗಳನ್ನು ಇಂಟರ್ ನೆಟ್ ಉಪಯೋಗಿಸುವ ಮೂಲಕ ದಾಖಲಿಸಬಹುದು. ಅದರ ವಿವಿಧ ಹಂತಗಳನ್ನು ಪರಿಶೀಲಿಸಬಹುದು ಮತ್ತು ಈಗಾಗಲೇ ದಾಖಲಿಸಿರುವ ಕುಂದು ಕೊರತೆಗಳ ಶೀಘ್ರ ವಿಲೇವಾರಿ ಕೋರಿ ನೆನಪೋಲೆಗಳನ್ನು ಸಲ್ಲಿಸಲೂ ಬಹುದು.
ಒಂದು ಕುಂದು ಕೊರತೆ ಅರ್ಜಿಯು ಕಂಪ್ಯೂಟರ್ ನಲ್ಲಿ ದಾಖಲಾದ ಕೂಡಲೇ ಅವು ವಿವಿಧ ಹಂತಗಳಲ್ಲಿ ಕಾರ್ಯಾಚರಿಸಲು ಆರಂಭಿಸುವುದು. ಅರ್ಜಿ ದಾಖಲಾದ ಕೂಡಲೇ ಅದನ್ನು ದೂರಿಗೆ ಸಂಬಂಧಿಸಿದ ಇಲಾಖೆಯ ಪ್ರಥಮ ಹಂತದ ಅಧಿಕಾರಿಗಳಿಗೆ ರವಾನಿಸಲಾಗುವುದು. ಸದರಿ ಅರ್ಜಿಯು ಅದೇ ಕಛೇರಿಯಲ್ಲಿ ಇತ್ಯರ್ಥಗೊಳ್ಳಬಹುದು ಅಥವಾ ಮುಂದಿನ ಕ್ರಮಕ್ಕಾಗಿ ಅಧೀನ ಕಛೇರಿಗೆ ರವಾನೆ ಆಗಬಹುದು. ಅರ್ಜಿಯ ವಿಲೇವಾರಿಯ ವಿವಿಧ ಹಂತದ ಮಾಹಿತಿಯು ಅರ್ಜಿದಾರರಿಗೆ ವೆಬ್ ಸೈಟ್ ನಲ್ಲಿ ದೊರೆಯುವುದು.

ಸಾರ್ವಜನಿಕ ಕುಂದು ಕೊರತೆಗಳ ನಿರ್ವಹಣಾ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಈ ಕೆಳಗಿನ ಸೌಲಭ್ಯಗಳನ್ನು ಒದಗಿಸಲಾಗಿದೆ.
  1. ಕುಂದು ಕೊರತೆಗಳನ್ನು ದಾಖಲಿಸುವುದು :-
                        ನಾಗರಿಕರು Lodge Grievance ನ್ನು ಕ್ಲಿಕ್ ಮಾಡಿ ತಮ್ಮ ಕುಂದುಕೊರತೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ದಾಖಲಿಸಬಹುದು. ಅರ್ಜಿ ಸಲ್ಲಿಸಿದ ಕೂಡಲೇ ಅರ್ಜಿದಾರರಿಗೆ ಅರ್ಜಿ ದಾಖಲಿಸಿದ ಬಗ್ಗೆ ರಿಜಿಸ್ಟ್ರೇಶನ್ (ನೋಂದಣಿ ಸಂಖ್ಯೆ) ಸಂಖ್ಯೆಯು ನೀಡಲ್ಪಡುತ್ತದೆ ಮತ್ತು ಈ ಕ್ರಮಾಂಕವನ್ನು ಮುಂದಿನ ತಮ್ಮ ವ್ಯವಹರಣೆ ವೇಳೆ ಬಳಸಬಹುದು.

  1. ಹಿಂದೆ ಸಲ್ಲಿಸಿದ ಕುಂದು ಕೊರತೆ ಅರ್ಜಿ ಬಗ್ಗೆ ನೆನಪೋಲೆ/ಸ್ಪಷ್ಟೀಕರಣ :-
                        ಈ ಲಿಂಕ್ ಅನ್ನು ಬಳಸಿ ನಾಗರಿಕರು ತಮ್ಮ ಅನಿಸಿಕೆಗಳನ್ನು ಮತ್ತು ಹಿಂದೆ ಸಲ್ಲಿಸಿದ ಕುಂದು ಕೊರತೆ ಅರ್ಜಿ ಬಗ್ಗೆ ಸ್ಪಷ್ಟೀಕರಣಗಳನ್ನು ಕೇಳಬಹುದು.

  1. ಕುಂದು ಕೊರತೆಗಳ ಮಾಹಿತಿ:
                        ಈ ಲಿಂಕ್ ಅನ್ನು ಬಳಸುವ ಮೂಲಕ ಅರ್ಜಿದಾರನು ಪ್ರಕೃತ ತನ್ನ ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ತನ್ನ ಅರ್ಜಿ ನೋಂದಣಿ ಸಂಖ್ಯೆ ದಾಖಲಿಸುವ ಮೂಲಕ ಅರಿತುಕೊಳ್ಳಬಹುದು.

            ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಅರ್ಜಿಗಳ ಉಸ್ತುವಾರಿಯನ್ನು ನಿರ್ವಹಿಸಲು ಈ ಕೆಳಗಿನ ವ್ಯವಸ್ಥೆ ಇರುತ್ತದೆ.
ಮಾನಿಟರಿಂಗ್ ಮೇಜು :-
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಾನಿಟರಿಂಗ್ ಸೆಲ್ ಇರುವುದು. ಸೆಲ್ ನಲ್ಲಿ ಇಂಟರ್ ನೆಟ್ ಮೂಲಕ ಬಂದ ಕುಂದು ಕೊರತೆಗಳ ಅರ್ಜಿಗಳನ್ನು ಸೂಕ್ತ ಕ್ರಮಕ್ಕಾಗಿ ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಲಾಗುವುದು. ಈ ರೀತಿ ರವಾನಿಸಿದ ಅರ್ಜಿಗಳ ಇತ್ಯರ್ಥ ಮತ್ತು ನಾಗರಿಕರಿಂದ ಬಂದ ಅರ್ಜಿಗಳ ಪೈಕಿ ಇತ್ಯರ್ಥವಾಗದೆ ಬಾಕಿ ಇರುವ ಎಲ್ಲಾ ಹಂತಗಳನ್ನು ಪರಿಶೀಲಿಸಲಾಗುವುದು ಹಾಗೂ ಇದರ ಮೂಲಕ ಕಾಲ ಕಾಲಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಕುಂದು ಕೊರತೆ/ಅಹವಾಲಿನ ಇತ್ಯರ್ಥಕ್ಕೆ ಗಮನಹರಿಸುವಂತೆ ಕ್ರಮವಹಿಸಲಾಗುವುದು.


ಅಥವಾ
ಜಿಲ್ಲಾ ವೆಬ್ ಸೈಟ್ www.dk.nic.in ನಲ್ಲಿ  Public Grievance