Thursday, March 22, 2012

ದ.ಕ. ಜಿಲ್ಲೆಗೆ 'ನಿರ್ಮಲ ಗ್ರಾಮ' ಪುರಸ್ಕಾರ ಗೌರವ

ಮಂಗಳೂರು,ಮಾರ್ಚ್.22: ದಕ್ಷಿಣ ಕನ್ನಡ ಜಿಲ್ಲೆಗೆ ಸ್ವಚ್ಚತೆಗಾಗಿ 'ನಿರ್ಮಲ ಗ್ರಾಮ'
ಪುರಸ್ಕಾ ರದ ಗೌರವ ದೊರೆ ತ್ತಿದ್ದು,ಬುಧ ವಾರ ನವ ದೆಹಲಿ ಯಲ್ಲಿ ನಡೆದ ಸಮಾ ರಂಭ ದಲ್ಲಿ ರಾಷ್ಟ್ರ ಪತಿ ಶ್ರೀ ಮತಿ ಪ್ರತಿಭಾ ಪಾಟೀಲ್ ದೇವಿ ಸಿಂಗ್ ಅವರು ಜಿಲ್ಲಾ ಪಂಚಾ ಯತ್ ಅಧ್ಯಕ್ಷೆ ಶ್ರೀ ಮತಿ ಕೆ.ಟಿ. ಶೈಲಜಾ ಭಟ್ ಅವರಿಗೆ ಪುರಸ್ಕಾ ರವನ್ನು ಪ್ರದಾನ ಮಾಡಿ ದರು. ಸಿಇಓ ಡಾ. ಕೆ.ಎನ್. ವಿಜಯ ಪ್ರಕಾಶ್,ಮಂಗ ಳೂರು ತಾಲೂಕ್ ಪಂಚಾ ಯತ್ ಅಧ್ಯಕ್ಷರು, ಕಾರ್ಯ ನಿರ್ವಾಹ ಣಾಧಿ ಕಾರಿ,ಜಿಲ್ಲಾ ಪಂಚಾ ಯತ್ ನೈರ್ಮಲ್ಯ ಧಿಕಾರಿ ಮಂಜುಳ ಅವರು ಸಮಾ ರಂಭದಲ್ಲಿ ಉಪಸ್ಥಿತರಿದ್ದರು. ನಿರ್ಮಲ ಗ್ರಾಮ ಪ್ರಶಸ್ತಿ ಸ್ವೀಕರಿಸುತ್ತಿರುವ ದೇಶದ 11 ನೇ ಮತ್ತು ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ದಕ್ಷಿಣ ಕನ್ನಡ ಜಿಲ್ಲೆ ಪಾತ್ರವಾಗಿದೆ.