Tuesday, March 20, 2012

ಪಾಲಿಕೆ ವ್ಯಾಪ್ತಿಯಲ್ಲಿ ರೂ.5.25 ಕೋ.ಕಾಮಗಾರಿ ಪೂರ್ಣ-ಯೋಗೀಶ್ ಭಟ್

ಮಂಗಳೂರು,ಮಾರ್ಚ್.20:ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಒಳರಸ್ತೆಗಳ ಅಭಿವೃದ್ಧಿಗೆ ಸಂಬಂಧ 60 ವಾರ್ಡುಗಳಿಗೆ ತಲಾ 25 ಲಕ್ಷದಂತೆ ಮಂಜೂರಾತಿ ನೀಡಲಾಗಿದ್ದು,ಈಗಾಗಲೇ 21 ವಾರ್ಡ್ ಗಳ ಕಾಮಗಾರಿ ಪೂರ್ಣಗೊಂಡಿದ್ದು,ಇದರ ಒಟ್ಟುಮೊತ್ತ ರೂ.5.25 ಕೋಟಿಗಳಾಗಿದೆಯೆಂದು ಮಂಗಳೂರು ದಕ್ಷಿಣ ವಿಧಾನಸಭಾ ಸದಸ್ಯರು ಹಾಗೂ ವಿಧಾನಸಭೆಯ ಉಪಾಧ್ಯಕ್ಷರಾದ ಎನ್.ಯೋಗೀಶ ಭಟ್ ಅವರು ತಿಳಿಸಿದ್ದಾರೆ. ಅವರು ಇತ್ತೀಚೆಗೆ ಮಂಗಳೂರು ಮಹಾನಗರಪಾಲಿಕೆಗೆ ಮಾನ್ಯ ಮುಖ್ಯಮಂತ್ರಿಗಳು ನೀಡಿರುವ ರೂ.100 ಕೋಟಿ ಅನುದಾನದದ 2ನೇ ಹಂತದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ ಈ ಮಾಹಿತಿ ನೀಡಿದರು.,
ಪ್ರಗತಿಯಲ್ಲಿರುವಂತಹ 39 ವಾರ್ಡುಗಳ ಕಾಮಗಾರಿಗಳಲ್ಲಿ ವಿವಿಧ ಹಂತಗಳಲ್ಲಿರುವ ಕಾಮಗಾರಿ ಸುಮಾರು ರೂ.10 ಕೋಟಿ, ಮಂಜೂರಾದ 5 ವಿದ್ಯುದ್ಧೀಕರಣ ಕಾಮಗಾರಿಗಳಲ್ಲಿ ಕಾಂಕ್ರೀಟ್ ರಸ್ತೆ ವಿಭಾಜಕದಲ್ಲಿ ವಿದ್ಯುತ್ ದೀಪ ಅಳವಡಿಕೆ ಮುಂತಾದ 3 ಕಾಮಗಾರಿಗಳು ಪೂರ್ತಿಗೊಂಡಿದ್ದು ತಗಲಿದ ಒಟ್ಟು ವೆಚ್ಚ ರೂ.68ಲಕ್ಷ ,ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಕಾರ್ಯಾದೇಶ ನೀಡಿರುವ ಕಾಮಗಾರಿಗಳು ರೂ.2.5ಕೋಟಿ ಟೆಂಡರ್ ಹಂತದಲ್ಲಿರುವ ಕಾಮಗಾರಿಗಳು ಒಟ್ಟು ರೂ.33.46 ಕೋಟಿ ರೂ.ಗಳೆಂದು ಅವರು ತಿಳಿಸಿದ್ದಾರೆ.