Thursday, March 22, 2012

ನಗರದ ಪುರಭವನದಲ್ಲಿ ಸೋಲಿಗರ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಸಮಾರೋಪ

ಮಂಗಳೂರು,ಮಾರ್ಚ್22:ಜಿಲ್ಲೆಯಲ್ಲಿ ಸತತ ಏಳು ಪ್ರದೇಶಗಳಲ್ಲಿ ತಮ್ಮ ಸೋಲಿಗರ ನೃತ್ಯ ಹಾಗೂ ಸಂಸ್ಕೃತಿಯನ್ನು ಪರಿಚಯಿಸಿದ ಕೊಳ್ಳೇಗಾಲದ ಯಳಂದೂರಿನ ಪುಷುಮಾಲೆ ತಂಡ ಕೊನೆಯದಾಗಿ ನಗರದ ಪುರಭವನದಲ್ಲಿ ತಮ್ಮ ಪ್ರದರ್ಶನ ನೀಡಿದರು.




ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ, ಡಿಸಿಪಿ ಮುತ್ತು ರಾಯರು, ಸಾರ್ವ ಜನಿಕ ಶಿಕ್ಷಣ ಇಲಾ ಖೆಯ ಉಪ ನಿರ್ದೇ ಶಕ ರಾದ ಮೋಸೆಸ್ ಜಯ ಶೇಖರ್, ಸರ್ವ ಶಿಕ್ಷಣ ಅಭಿ ಯಾನದ ಅಧಿ ಕಾರಿ ಶಿವ ಪ್ರಕಾಶ್, ಒಂಬುಡ್ಸ ಮನ್ ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್ ನ ಕೃಷ್ಣ ಮೂಲ್ಯರು ಕಾರ್ಯ ಕ್ರಮ ವೀಕ್ಷಿ ಸಿದರು. ತಮ್ಮ ಸಾಂಪ್ರ ದಾಯಿಕ ಹಾಡು ಹಾಗೂ ನೃತ್ಯ ವನ್ನು ಪ್ರದರ್ಶಿ ಸಿದ ಸೋಲಿ ಗರ ತಂಡದ ನಾಯಕ ಬಸವ ರಾಜ್ ಜಿಲ್ಲೆ ಯಲ್ಲಿ ಎಲ್ಲರೂ ನೀಡಿದ ಸಹ ಕಾರಕ್ಕೆ ಕೃತ ಜ್ಞತೆ ಅರ್ಪಿ ಸಿದರು.