Wednesday, March 7, 2012

'ಸಕಾಲ' ಜಿಲ್ಲಾಧಿಕಾರಿಗಳಿಂದ ಪ್ರಗತಿ ಪರಿಶೀಲನೆ

ಮಂಗಳೂರು,ಮಾರ್ಚ್.07:ನಾಗರಿಕರಿಗೆ ಸಮಯಮಿತಿಯಲ್ಲಿ ಸೇವೆ ಕೊಡುವ ನಾಗರಿಕ ಸೇವಾ ಖಾತರಿ ಕಾಯಿದೆ ಪುತ್ತೂರಿನಲ್ಲಿ ಮಾರ್ಚ್ ಒಂದರಿಂದ ಜಾರಿಗೆ ಬಂದಿದ್ದು,ಈ ಸಂಬಂಧ ಸಂಬಂಧಪಟ್ಟು 11 ಇಲಾಖೆಗಳು ಅರ್ಜಿ ಸ್ವೀಕರಿಸಿ, ಉತ್ತರಿಸಿರುವ ಕುರಿತು ಹಾಗೂ ಎದುರಾದ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಆಲಿಸಲು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆಯನ್ನು ಕರೆದಿದ್ದರು.ಪುತ್ತೂರು ಆರ್ ಟಿ ಒ ಕಚೇರಿ ಕಾಯಿದೆ ಯಡಿ ಅತೀ ಹೆಚ್ಚು ಅರ್ಜಿ ಗಳನ್ನು ಸ್ವೀಕ ರಿಸಿದ್ದು, ಅರ್ಜಿ ಯನ್ನು ನಿಗ ದಿತ ಸಮ ಯದೊ ಳಗೆ ವಿಲೇ ಮಾಡಲು ಕ್ರಮ ಕೈಗೊಳ್ಳ ಲಾಗು ವುದು ಎಂದು ಆರ್ ಟಿ ಒ ಮಲ್ಲಿ ಕಾರ್ಜುನ್ ಜಿಲ್ಲಾ ಧಿಕಾ ರಿಗಳಿಗೆ ತಿಳಿ ಸಿದರು. ಇಲಾಖೆ ಆನ್ ಲೈನ್ ಆಗಿ ರುವು ದರಿಂದ ಕೆಲವು ತಾಂ ತ್ರಿಕ ಸಮಸ್ಯೆ ಗಳನ್ನು ಹೊರತು ಪಡಿಸಿ ದರೆ ತಮ್ಮ ಇಲಾಖೆ ಯಲ್ಲಿ ಸಕಾಲ ನ್ನು ಯಶಸ್ವಿ ಯಾಗಿ ಜಾರಿಗೊಳಿಸುವುದಾಗಿ ಉತ್ತರಿಸಿದರು.
ಆದರೆ, ಮಂಗಳೂರಿನ ಕಚೇರಿಯಲ್ಲಿ ಇಲಾಖೆಯಲ್ಲಿ ಐದು ಸೇವೆಗೆ ಪ್ರತಿದಿನ 800 ಅರ್ಜಿಗಳು ಬರುತ್ತಿದ್ದು, ತಾಂತ್ರಿಕ ಹಾಗೂ ನುರಿತ ಸಿಬ್ಬಂದಿಗಳ ಅಗತ್ಯವಿದೆ ಎಂಬುದನ್ನು ಆರ್ ಟಿ ಒ ಅವರು ಸಭೆಯ ಗಮನಕ್ಕೆ ತಂದರು.ಇನ್ನು ಪುತ್ತೂರು ಆ ರೋಗ್ಯ ಇಲಾಖೆ ಯಲ್ಲಿ 117 ಅರ್ಜಿ ಗಳು ಬಂದಿದ್ದು, ಅರ್ಜಿ ಗಳ ತುರ್ತು ವಿಲೇಗೆ ಎದು ರಾಗು ತ್ತಿರುವ ಸಮಸ್ಯೆ ಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಗಳಾದ ಓ ಶ್ರೀ ರಂಗಪ್ಪ ಅವರು ವಿವ ರಿಸಿ ದರು. ಈ ಸಂಬಂ ಧ ತಮ್ಮ ಇಲಾಖಾ ಮುಖ್ಯ ಸ್ಥರ ಗಮನ ಸೆಳೆದಿ ರುವು ದಾಗಿಯೂ ಸಭೆಯ ಗಮನಕ್ಕೆ ತಂದರು. ಎಲ್ಲ 11 ಇಲಾಖೆಗಳು ಕಾಯಿದೆ ಅನುಷ್ಠಾನಕ್ಕೆ ಪೂರಕವಾಗಿ ತಮಗೆ ಬೇಕಿರುವ ಅಗತ್ಯಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.
ಸಕಾಲದ ಸಮಗ್ರ ಅನುಷ್ಠಾನಕ್ಕೆ ಜಿಲ್ಲೆಗೆ ಒಬ್ಬ ನೋಡಲ್ ಅಧಿಕಾರಿ ನೇಮಿಸುವ ಬಗ್ಗೆ ಹಾಗೂ ಈ ಸಂಬಂಧ ದಿನನಿತ್ಯದ ಪ್ರಗತಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಏಪ್ರಿಲ್ ಎರಡರಿಂದ ದ.ಕ. ಜಿಲ್ಲೆಯಾದ್ಯಂತ ಪೂರ್ಣ ಪ್ರಮಾಣದಲ್ಲಿ ಕಾಯಿದೆ ಜಾರಿಯಾಗಲಿದ್ದು ಇದಕ್ಕೆ ಪೂರಕವಾಗಿ ಪೂರ್ವ ತಯಾರಿ ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಮಾರ್ಚ್ 12ರಿಂದ 30ರವರೆಗೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಅಧಿಕಾರಿಗಳಿಗೆ ಈ ಸಂಬಂಧ ಕಾರ್ಯಾಗಾರ ಏರ್ಪಡಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಯಿಂದ ಅಧಿಕಾರಿಗಳು ಕಾರ್ಯಾಗಾರಕ್ಕೆ ಹಾಜರಾಗಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಪರ ಜಿಲ್ಲಾಧಿಕಾರಿ ಕೆ.ದಯಾನಂದ ಅವರು ಸ್ವಾಗತಿಸಿದರು. ಪುತ್ತೂರು ಎಎಸ್ಪಿ ಅನುಚೇತ್ ಅವರನ್ನೊಳಗೊಂಡಂತೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.