Friday, March 2, 2012

ಸಕಾಲ ದಿಂದ ಕರ್ತವ್ಯ ನಿರ್ವಹಣೆಗೆ ವೇಗೋತ್ಕರ್ಷ:ಯೋಗೀಶ್ ಭಟ್

ಮಂಗಳೂರು,ಮಾರ್ಚ್.02:ಕರ್ನಾಟಕ ನಾಗರಿಕರಿಗೆ ಸೇವೆಗಳ ಖಾತರಿ ಅಧಿನಿಯಮ ರಾಜ್ಯದ ನಾಗರಿಕರಿಗೆ ಗೊತ್ತುಮಾಡಿದ ಕಾಲಮಿತಿಯೊಳಗೆ ಸೇವೆಗಳ ಖಾತರಿಗಾಗಿ ಮತ್ತು ಅದಕ್ಕೆ ಸಂಬಂಧಿಸಿದ ಹಾಗೂ ಅದಕ್ಕೆ ಪ್ರಾಸಂಗಿಕವಾದ ವಿಷಯಗಳಿಗೆ ಉಪಬಂಧ ಕಲ್ಪಿಸುವುದಕ್ಕಾಗಿರುವ ಒಂದು ಅಧಿನಿಯಮ. ಈ ಅಧಿನಿಯಮ ನಮ್ಮಲ್ಲಿ ನಿಗದಿತ ಸಮಯದೊಳಗೆ ಕೆಲಸವನ್ನು ಮಾಡಲು ಪ್ರೇರೇಪಿಸುತ್ತದೆ. ಕೆಲಸ ಮಾಡಬೇಕೆಂಬ ಇಚ್ಛಾಶಕ್ತಿಯಿಂದ ಮಾತ್ರ ಈ ಅಧಿನಿಯಮ ಯಶಸ್ವಿಯಾಗಲು ಸಾಧ್ಯ ಎಂದು ವಿಧಾನಸಭಾ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಹೇಳಿದರು.ಅವ ರಿಂದು ಜಿಲ್ಲಾ ಪಂಚಾ ಯತ್ನ ನೇತ್ರಾ ವತಿ ಸಭಾಂ ಗಣ ದಲ್ಲಿ ಆಯೋ ಜಿಸ ಲಾದ ಕೆಜಿ ಎಸ್ಸಿ ಆಕ್ಟ್ ಸಮ ರ್ಪಕ ಅನು ಷ್ಠಾನಕ್ಕೆ ಎರಡು ದಿನ ಗಳ ಕಾರ್ಯಾ ಗಾರ ವನ್ನು ಉದ್ಘಾ ಟಿಸಿ ಮಾತ ನಾಡು ತ್ತಿದ್ದರು. ಸರ್ಕಾರಿ ಅಧಿ ಕಾರಿ ಗಳು ಹಾಗೂ ನೌಕ ರರಲ್ಲಿ ತಮ್ಮ ಕೆಲಸದ ಬಗ್ಗೆ ಪ್ರೀತಿ ಹೆಚ್ಚಬೇಕು. ಇದಕ್ಕೆ ಸರ್ಕಾರಿ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳಿರಬೇಕು; ಅಗತ್ಯ ಮಾಹಿತಿಗಳು, ಕಂಪ್ಯೂಟರೀಕೃತ ವ್ಯವಸ್ಥೆ ಇರಬೇಕೂ ಎಂದು ವಿಧಾನಸಭಾ ಉಪಾಧ್ಯಕ್ಷರು ಹೇಳಿದರು. ಇಚ್ಛಾಶಕ್ತಿಯಿಂದಾಗು ತ್ತಿರುವ ಉತ್ತಮ ಮಾದರಿಗಳು, ಸರ್ಕಾರಿ ವಲಯದ ಲ್ಲಾಗುತ್ತಿರುವ ಕೆಲಸಗಳನ್ನು ಉದಾಹರಣೆ ಸಹಿತ ವಿವರಿಸಿದರು.ಜಿಲ್ಲಾ ಪಂಚಾ ಯತ್ ನ ಉಪಾ ಧ್ಯಕ್ಷ ರಾದ ಶ್ರೀ ಮತಿ ಧನಲಕ್ಷ್ಮಿ ಅವರು ಮಾತ ನಾಡಿ, ಅಧಿ ನಿಯ ಮದಿಂದ ಗ್ರಾಮೀ ಣರಿಗೆ ನೆರ ವಾಗ ಲಿದೆ. ಜನರು ಒಂದು ಕೆಲ ಸಕ್ಕೆ ಹತ್ತಾರು ಬಾರಿ ಅಲೆ ದಾಡು ವುದು ತಪ್ಪ ಲಿದೆ ಎಂದು ಅಭಿ ಪ್ರಾಯ ಪಟ್ಟರು.ಅಧ್ಯಕ್ಷೀಯ ಭಾಷಣ ಮಾಡಿದ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಅಧಿನಿಯಮದ ಸಮಗ್ರ ಅನುಷ್ಠಾನಕ್ಕೆ ಸಂಬಂಧಪಟ್ಟವರಿಗೆ ಕಾರ್ಯಾಗಾರ ನಡೆಸುವುದರಿಂದ ನೆರವಾಗಲಿದೆ. ಎಲ್ಲರೂ ಜವಾಬ್ದಾರಿಯಿಂದ ಹಾಗೂ ನಿಯಮಾನುಸಾರ ಕೆಲಸ ಮಾಡಿದರೆ ಜಿಲ್ಲೆಗೆ ಒಳ್ಳೆಯ ಹೆಸರು ಎಂದರು. ಪ್ರಾಸ್ತಾವಿಕ ಭಾಷಣ ಮಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು,ಅಧಿನಿಯಮ ಅನುಷ್ಠಾನ ಕುರಿತು ಮಾತನಾಡಿದರು. ಸಹಾಯಕ ಕಾರ್ಯದರ್ಶಿ ಶಿವರಾಮಯ್ಯ ವಂದಿಸಿದರು.
ಇಂದು ಮತ್ತೆ ನಾಳೆ ಎಲ್ಲ ಜಿಲ್ಲಾ ಮಟ್ಟದ ಹಾಗೂ ಪುತ್ತೂರು ತಾಲೂಕಿನ ಅಧಿಕಾರಿಗಳಿಗೆ ಆಡಳಿತ ತರಬೇತಿ ಸಂಸ್ಥೆ ಮೈಸೂರು ಇವರ ವತಿಯಿಂದ ತರಬೇತಿ ನೀಡಲಾಗುತ್ತಿದೆ.