Thursday, March 29, 2012

ತ್ಯಾಜ್ಯದ ಸದ್ಬಳಕೆಯಿಂದ ನೈರ್ಮಲ್ಯ ಸವಾಲಿಗೆ ಜವಾಬು: ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್.29:ಮಂಗಳೂರನ್ನು ನಿರ್ಮಲ ನಗರವನ್ನಾಗಿಸಲು ಮಂಗಳೂರಿಗರ ಸಹಕಾರ ಅಗತ್ಯ. ದಿನನಿತ್ಯ ನಾವು ಉತ್ಪಾದಿಸುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಲು, ಅದನ್ನು ಅಡುಗೆ ಅನಿಲವನ್ನಾಗಿ ಮಾರ್ಪಾಡು ಗೊಳಿಸಲು ಹಲವು ಯಶಸ್ವಿ ಮಾದರಿಗಳು ನಮ್ಮ ಮುಂದಿದ್ದು ಅನುಷ್ಠಾನಕ್ಕೆ ತರುವಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯವಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.
ಅವರಿಂದು ರೋಟರಿ ಕ್ಲಬ್ ಮಂಗಳೂರು ಸಹ ಯೋಗದಲ್ಲಿ ನಗರದ ಫಾದರ್ ಮುಲ್ಲರ್ ಚಾರಿ ಟೇಬಲ್ ಸಂಸ್ಥೆಯಲ್ಲಿ ಆಯೋ ಜಿಸಲಾದ ಜೈವಿಕ ಅನಿಲ ಘಟಕಕ್ಕೆ ಚಾಲನೆ ನೀಡಿ ಮಾತ ನಾಡುತ್ತಿದ್ದರು. ಬೆಳೆಯು ತ್ತಿರುವ ನಗರ ಶುಚಿತ್ವ ಹಾಗೂ ಸೌಂದರ್ಯ ದಲ್ಲೂ ಮುಂದಿರ ಬೇಕೆಂಬ ದೃಷ್ಟಿಯಿಂದ ಹಲವು ಯೋಜನೆ ಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ. ಪ್ಲಾಸ್ಟಿಕ್ ನಿಷೇಧವನ್ನೂ ಜಾರಿ ಮಾಡಲಾಗಿದೆ; ಆದರೆ ಪರಿಣಾಮ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ರೋಟರಿಯಂತಹ ಸಂಘಸಂಸ್ಥೆಗಳು ಈ ನಿಟ್ಟಿನಲ್ಲಿ ಮುಖ್ಯ ಪಾತ್ರವಹಿಸಬೇಕು.ಸಂಘಟನೆಗಳು ಕೈಗೊಳ್ಳುವ ಇಂತಹ ಕಾರ್ಯ ಕ್ರಮಗಳಿಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ. ಇಂತಹ ಮಾದರಿ ಗಳಿಗೆ ಚಾಲನೆ ನೀಡಿ ಅರ್ಧಕ್ಕೇ ನಿಲ್ಲದೆ ಅವುಗಳ ನಿರಂತರ ನಿರ್ವಹಣೆ ಯಾಗಬೇಕು; ಹಾಗಾದರೆ ಮಾತ್ರ ಜನರಿಗೆ, ಸಮಾಜಕ್ಕೆ ಅನುಕೂಲವಾಗಲಿದೆ ಎಂದರು.
ನಗರದಲ್ಲಿ ಮೆಡಿಕಲ್ ಕಾಲೇಜುಗಳು, ಹಾಸ್ಟೆಲ್ ಗಳು, ಹೋಟೆಲ್ ಗಳು ಸಾಕಷ್ಟು ಸಂಖ್ಯೆಯಲ್ಲಿದ್ದು ಎಲ್ಲವನ್ನೂ ಜಿಲ್ಲಾಡಳಿತ ಕಾನೂನು ಮೂಲಕ ಹೇರದೆ ಸ್ವಯಂಪ್ರೇರಿತವಾಗಿ ಪರ್ಯಾಯ ಶಕ್ತಿಗಳನ್ನು, ಪರಿಸರ ಸ್ನೇಹಿ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕೆಂದರು. ಅಂತಹ ಒಂದು ಯತ್ನ ರೋಟರಿಯವರ ಪ್ರಯತ್ನದಿಂದ ಫಾದರ್ ಮುಲ್ಲರ್ಸ್ ಸಂಸ್ಥೆಯ ಅಡುಗೆ ಕೋಣೆಯಲ್ಲಿ ಅಡುಗೆ ಅನಿಲ ಪೂರೈಸಲು ಜೈವಿಕ ಅನಿಲ ಘಟಕ ಆರಂಭವಾಗಿದ್ದು ಅಭಿನಂದನೀಯ ಎಂದರು.ಈ ಕುರಿತು ಪ್ರಾಸ್ತಾವಿಕ ಮಾತುಗ ಳನ್ನಾಡಿದ ಪ್ರಕಾಶ್ ಕಲ್ಬಾವಿ ಅವರು, ಐದು ಲಕ್ಷ ರೂ. ವೆಚ್ಚದಲ್ಲಿ ಜೈವಿಕ ಅನಿಲ ಘಟಕವನ್ನು ಫಾದರ್ ಮುಲ್ಲರ್ಸ್ ನಲ್ಲಿ ಆರಂಭಿಸಿದ್ದು, 300 ಕೆ ಜಿ ಹಸಿ ತ್ಯಾಜ್ಯಗಳ ಬಳಕೆಯಿಂದ 14 ಕೆ ಜಿ ಮಿಥೇನ್ ಅನಿಲ ಉತ್ಪಾದನೆಯಾಗುತ್ತದೆ. ಇಂತಹ ಪಯರ್ಾಯ ವಿಧಾನಗಳು ದೊಡ್ಡ ದೊಡ್ಡ ಸಂಸ್ಥೆಗಳಿಗೆ ಲಾಭದಾಯಕ ವಾಗುವುದಲ್ಲದೆ,ಆಡಳಿತಕ್ಕೆ ಸವಾಲಾಗಿ ಪರಿಣಮಿಸಿರುವ ತ್ಯಾಜ್ಯ ವಿಲೇಗೂ ಸಹಕಾರಿಯಾಗಲಿದೆ ಎಂದರು.
ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್, ಫಾದರ್ ಮುಲ್ಲರ್ಸ್ ನಿರ್ದೇಶಕರಾದ ಪ್ಯಾಟ್ರಿಕ್ ರೋಡ್ರಿಗಸ್, ಆಡಳಿತ ನಿರ್ದೇಶಕ ರಿಚರ್ಡ್ ಕುವೆಲ್ಲೊ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಕಾರ್ಯಕ್ರಮ ನಿರೂಪಿಸಿದರು.