Saturday, March 3, 2012

ಕ್ರಿಯಾಶೀಲ ಆಡಳಿತಕ್ಕೆ 'ಸಕಾಲ'

ಮಂಗಳೂರು,ಮಾರ್ಚ್.03:ಆಡಳಿತಾತ್ಮಕ ವ್ಯವಸ್ಥೆಯನ್ನು ಪಾರದರ್ಶಕವಾಗಿಸುವ ಮತ್ತು ಜವಾಬ್ದಾರಿಯುತವಾಗಿಸುವ ನಿಟ್ಟಿನಲ್ಲಿ ಹಲವು ವಿನೂತನ ಕಾಯಿದೆಗಳನ್ನು ಜಾರಿಗೆ ತರಲಾಗಿದ್ದರೂ, ಇವಕ್ಕೆಲ್ಲಾ ಮಿಗಿಲಾಗಿ ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ ಅನುಷ್ಠಾನಕ್ಕೆ ತರಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾ ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ದ.ಕ.ಜಿಲ್ಲಾ ಪಂಚಾ ಯತ್ ಸಭಾಂ ಗಣ ದಲ್ಲಿ ಮೈ ಸೂರು ಆಡ ಳಿತ ತರ ಬೇತಿ ಸಂಸ್ಥೆ ಯ ಸಹ ಕಾರ ದಿಂದ ಆಯೋ ಜಿಸ ಲಾದ ಎರಡು ದಿನ ಗಳ ಕಾರ್ಯಾ ಗಾರದ ಸಮಾ ರೋಪ ಸಮಾ ರಭ ದಲ್ಲಿ ಮುಖ್ಯ ಅತಿಥಿ ಗಳಾಗಿ ಅವರು ಮಾತ ನಾಡು ತ್ತಿದ್ದರು. ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣದ ಈ ಯುಗದಲ್ಲಿ ಸರ್ಕಾರಿ ಸೇವೆಗಳೂ ಇದೇ ಮಾದರಿಯಲ್ಲಿ ಲಭ್ಯವಾಗಬೇಕಾದುದು ಜನರ ಹಕ್ಕು ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆ ಈ ಅಧಿನಿಯಮದ ಅನುಷ್ಠಾನದಲ್ಲಿ ಮಾದರಿಯಾಗಲಿದೆ ಎಂದರು.ಸಮಾ ರಂಭದ ಆಶಯ ಭಾಷಣ ಮಾಡಿದ ಮಹಾ ತ್ಮಗಾಂ ಧಿ ಗ್ರಾ ಮೀಣ ಉ ದ್ಯೋಗ ಖಾತ ರಿಯ ಒಂಬ ಡ್ಸ್ ಮನ್ ಶೀನ ಶೆಟ್ಟಿ ಯವರು, ಇಲ್ಲಿನ ವ್ಯವ ಸ್ಥೆಯ ಇಚ್ಛಾ ಶಕ್ತಿ, ಜ್ಞಾನ ಹಾಗೂ ಕ್ರಿಯಾ ಶಕ್ತಿ ಯಿಂದ ಸಕಾಲ ಯಶಸ್ವಿ ಯಾಗ ಲಿದ್ದು, ರಾಜ್ಯಕ್ಕೆ, ದೇಶಕ್ಕೆ ಹಲವು ಮಾದರಿ ಗಳನ್ನು ನೀಡಿದ ಜಿಲ್ಲೆ ನಮ್ಮದು ಎಂದರು. ವೈಯಕ್ತಿಕ ಸ್ವಚ್ಛತೆ ಮತ್ತು ವ್ಯವಸ್ಥೆಯ ಸ್ವಚ್ಛತೆಯಿಂದ ಹಾಗೂ ಸೇವೆ ನೀಡುವ ಅಧಿಕಾರಿಗಳ ಬದ್ಧತೆಯಿಂದ ಮಾತ್ರ ಕಾಯಿದೆ ಯಶಸ್ವಿಯಾಗಲು ಸಾಧ್ಯ ಎಂದರು.ಸಮಾ ರಂಭದ ಅಧ್ಯ ಕ್ಷತೆ ವಹಿ ಸಿದ್ದ ದ.ಕ. ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಅವರು, ಸಂಪ ನ್ಮೂಲ ವ್ಯಕ್ತಿ ಗಳೊಂ ದಿಗೆ ಹಾಗೂ ಕಾರ್ಯಾ ಗಾರ ದಲ್ಲಿ ಪಾಲ್ಗೊಂ ಡವರ ಜೊತೆ ಸಂವಾದ ನಡೆ ಸಿದ ರಲ್ಲದೆ, ಕಾಯಿ ದೆಗೆ ಸಂಬಂ ಧಿಸಿ ದಂತೆ ಹಲವು ಸ್ಪಷ್ಟೀ ಕರಣ ಗಳನ್ನು ಕೇಳಿದರು. ಕಾರ್ಯಾಗಾರದಲ್ಲಿ ಉದ್ಭವವಾದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವಂತೆ ಸಂಪನ್ಮೂಲ ವ್ಯಕ್ತಿಗಳಿಗೆ ಹೇಳಿದರು. ಇದೇ ಸಂದರ್ಭದಲ್ಲಿ ಕಾಯಿದೆ ಅನುಷ್ಠಾನಕ್ಕೆ ಪೂರಕವಾಗಿರುವ ಸೌಕರ್ಯಗಳಿಗೆ ಅಗತ್ಯವಿರುವ ವೆಚ್ಚಗಳ ಪ್ರಸ್ತಾಪವನ್ನು ಮಾರ್ಚ್ 7 ರೊಳಗೆ ಸಲ್ಲಿಸುವಂತೆ ಎಲ್ಲ ಇಲಾಖೆಗಳಿಗೆ ಸೂಚಿಸಿದರು.
ಕಾರ್ಯಾಗಾರದಲ್ಲಿ ಏರ್ಪಡಿಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಉಪಕಾರ್ಯದರ್ಶಿಗಳಾದ ಶಿವರಾಮೇಗೌಡ ಅವರು ಸ್ವಾಗತಿಸಿದರು. ಸಹಾಯಕ ಕಾರ್ಯದರ್ಶಿ ಶಿವರಾಮಯ್ಯ ವಂದಿಸಿದರು.