Wednesday, March 28, 2012

ಡಾ:ಬಾಬು ಜಗಜೀವನರಾಂ,ಡಾ:ಬಿ ಆರ್ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆ

ಮಂಗಳೂರು,ಮಾರ್ಚ್.27: 2012 ನೇ ಸಾಲಿನಲ್ಲಿ ದಿನಾ0ಕ 5.4.12 ರ0ದು ಡಾ:ಬಾಬು ಜಗಜೀವನ ರಾ0 ಇವರ 105 ನೇ ಹಾಗೂ ದಿನಾ0ಕ 14.4.12 ರ0ದು ಡಾ: ಬಿ ಆರ್ ಅ0ಬೇಡ್ಕರ್ ರವರ 121 ನೇ ಜಯ0ತಿಯನ್ನು ಆಚರಿಸುವ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಜಿಲ್ಲಾಧಿಕಾರಿ ಡಾ. ಎನ್ ಎಸ್ ಚೆನ್ನಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿತು.
ಡಾ ಜಗ ಜೀವನರಾ0 ಜಯ0ತಿ ಯ0ದು ಕಾರ್ಯ ಕ್ರಮವನ್ನು ಜಿಲ್ಲಾ ಪ0ಚಾಯತ್ ಸಭಾ0ಗಣದಲ್ಲಿ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸುವ ಕುರಿತು ಹಾಗೂ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.
ಡಾ ಬಿ ಆರ್ ಅ0ಬೇಡ್ಕರ್ ಜಯ0ತಿಯನ್ನು ನಗರದ ಪುರಭವನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಆಹ್ವಾನಿಸುವ ಗಣ್ಯರ ಪಟ್ಟಿಯನ್ನು ತಯಾರಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಅ0ದು ವಿವಿದ ಇಲಾಖೆಗಳಿ0ದ ಸವಲತ್ತುಗಳನ್ನು ವಿತರಿಸುವ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕನ್ನಡ ಸ0ಸ್ಕೃತಿ ಇಲಾಖೆಯಿ0ದ ವಾದ್ಯಪರಿಕರಗಳನ್ನು ವಿತರಿಸಲಾಗುವುದು ಎಂದು ಇಲಾಖೆಯ ಅಧಿಕಾರಿ ಶ್ರೀಮತಿ ಮಂಗಳಾ ಅವರು ಹೇಳಿದರು.
ಕಾರ್ಯಕ್ರಮಗಳು ಬೆಳಿಗ್ಗೆ 10.30 ಕ್ಕೆ ಆರಂಭವಾಗಲಿದ್ದು, ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬ0ದಿ ವರ್ಗದವರು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ0ತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ ದಯಾನ0ದ್ ಹಾಗೂ ಇತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.