Wednesday, March 21, 2012

ಸಂಸ್ಕೃತಿ ವಿನಿಮಯದಿಂದ ಪರಸ್ಪರ ಪ್ರೀತಿ ಹೆಚ್ಚಲಿದೆ

ಮಂಗಳೂರು,ಮಾರ್ಚ್.21:ಒಂದು ಪ್ರದೇಶದ ಜನರು ಮತ್ತೊಂದು ಪ್ರದೇಶದ ಜನರೊಂದಿಗೆ ತಮ್ಮ ಸಂಸ್ಕೃತಿಯನ್ನು ಪ್ರದರ್ಶಿಸುವುದರಿಂದ ಪರಸ್ಪರರಲ್ಲಿ ಪ್ರೀತಿ ಪ್ರೇಮ ಭಾಂದವ್ಯ ಹೆಚ್ಚಲಿದೆ ಎಂದು ಕೊಲ್ನಾಡು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಸುಭಾಷ್ಚಂದ್ರ ಶೆಟ್ಟಿ ಅವರು ತಿಳಿಸಿದ್ದಾರೆ.ಅವರು ಮಂಗಳ ವಾರ ಮಂಗ ಳೂರು ತಾಲೂ ಕಿನ ಕೊಲ್ನಾಡು ಗ್ರಾಮ ಪಂಚಾ ಯ್ತಿಯ ಸಾಲೆ ತ್ತೂರು ಗಾಂಧಿ ಗ್ರಾಮದ ಡಾ|ಬಿ.ಆರ್. ಅಂಬೇ ಡ್ಕರ್ ಭವನ ಆವರ ಣದಲ್ಲಿ ವಾರ್ತಾ ಇಲಾಖೆ ವತಿ ಯಿಂದ ಏರ್ಪ ಡಿಸಿದ್ದ ಸೋಲಿ ಗರ ನೃತ್ಯ ಕಾರ್ಯ ಕ್ರಮ ಉದ್ಘಾ ಟಿಸಿ ಮಾತ ನಾಡಿದರು.

ಕಾಡು ವಾಸಿ ಗಳಾದ ಸೋಲಿ ಗರ ರೊಟ್ಟಿ, ಹಬ್ಬದ ಕುಣಿತ, ಮಾರಿ ಹಬ್ಬದ ಕುಣಿತ,ಗೌಜಲು ಹಕ್ಕಿ ಹಿಡಿ ಯುವ ಕುಣಿತ,ಮಾರಿ ಕುಣಿತ,ಬಿಳಿ ಗಿರಿ ರಂಗ ಯ್ಯನ ಹಾಡು ಎಲ್ಲವೂ ಅವರ ಬದುಕಿನ ಬಗ್ಗೆ ತಿಳಿಸು ವಂತಿದೆ ಎಂದು ಅವರು ತಿಳಿ ಸಿದರು.ಸಮಾ ರಂಭ ದಲ್ಲಿ ಗ್ರಾಮ ಪಂಚಾ ಯತ್ ಸದಸ್ಯ ರಾದ ವಿಶ್ವ ನಾಥ ಶೆಟ್ಟಿ,ಪವಿತ್ರ ಪೂಂಜ ಸಿಬ್ಬಂದಿ ಜಯ ರಾಮ್ ಸೇರಿದಂತೆ ವಿವಿಧ ಸಂಘ ಟನೆಗಳ ಮುಖ್ಯ ಸ್ಥರು ಭಾಗ ವಹಿ ಸಿದ್ದರು.ವಾರ್ತಾ ಇಲಾಖೆ ಸಹಾ ಯಕ ರಾದ ಬಿ.ಆರ್.ಚಂದ್ರ ಶೇಖರ ಆಜಾದ್ ಕಾರ್ಯ ಕ್ರಮ ನಿರೂ ಪಿಸಿದರು.