Saturday, March 24, 2012

ವಿಶ್ವ ಕ್ಷಯರೋಗ ದಿನಾಚರಣೆ

ಮಂಗಳೂರು,ಮಾರ್ಚ್.24:ಸಾರ್ವಜನಿಕರು, ಸಂಘಸಂಸ್ಥೆಗಳು ಮತ್ತು ಸಮುದಾಯದವರ ಸಹಕಾರದಿಂದ ಮಾತ್ರ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಸಾಧ್ಯ ಎಂದು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು. ಅವರಿಂದು ನಗರದ ಜೆಪ್ಪುವಿನ ಸ್ಪಂದನಾ ಟ್ರಸ್ಟ್ ಸಭಾಂಗಣದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಭಿ ವೃದ್ಧಿ ಹೊಂದು ತ್ತಿರುವ ಭಾರತ ದೇಶ ಕ್ಷಯ ರೋಗ ದಿಂದ ಇನ್ನೂ ಮುಕ್ತ ವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಹಲವು ಉತ್ತಮ ಮಾದರಿ ಗಳನ್ನು ಎಲ್ಲ ಕ್ಷೇತ್ರ ಗಳಲ್ಲೂ ನೀಡಿದ್ದು, ಆರೋಗ್ಯ ಕ್ಷೇತ್ರ ದಲ್ಲೂ ತನ್ನ ಸಾಧನೆ ಯನ್ನು ದಾಖ ಲಿಸ ಬೇಕಿದೆ. ಕೇವಲ ಅಧಿಕಾ ರಿಗ ಳಿಂದ ಮಾತ್ರ ಈ ಸಾಧನೆ ಸಾಧ್ಯ ವಿಲ್ಲ; ಇದಕ್ಕೆ ಸಮು ದಾಯದ ಸಹ ಭಾಗಿ ತ್ವದ ಅಗತ್ಯ ವಿದೆ ಎಂದು ಅವರು ನುಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನ ಮಾಡುತ್ತಿದೆ ಎಂದು ಶ್ಲಾಘಿಸಿದ ಅವರು, ಆರೋಗ್ಯದ ಬಗ್ಗೆ ಪಡೆದ ಮಾಹಿತಿಯ ಸದ್ಬಳಕೆ ಆಗಬೇಕಿದೆ ಎಂದರು.
ಕಾರ್ಯ ಕ್ರಮದ ಬಗ್ಗೆ ಡಾ ಕಿಶೋರ್ ಪ್ರಾಸ್ತಾ ವಿಕ ಮಾತು ಗಳಲ್ಲಿ, ಸಮು ದಾಯ ವನ್ನು ಕ್ಷಯ ರೋಗ ದಿಂದ ಮುಕ್ತ ಮಾಡು ವುದೇ ರಾಷ್ಟ್ರೀಯ ಕ್ಷಯ ನಿಯಂ ತ್ರಣ ಕಾರ್ಯ ಕ್ರಮದ ಉದ್ದೇಶ ವಾಗಿದೆ ಎಂದರು. ಮುಖ್ಯ ಅತಿಥಿ ಗಳಾ ಗಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿ ಕಾರಿ ಡಾ ಓ ಆರ್ ಶ್ರೀ ರಂಗಪ್ಪ ಅವರು ಜಿಲ್ಲೆಯಲ್ಲಿ ಆರೋಗ್ಯಕ್ಕೆ ಪೂರಕವಾಗಿ ರೂಪಿಸಿಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪ್ರಸ್ತುತ ಸಾಲಿನಲ್ಲಿ ಅಕ್ಟೋಬರ್ 2012ರೊಳಗೆ ಜಿಲ್ಲೆಯಲ್ಲಿ ಡಾಟ್ಸ್ ಪ್ಲಸ್ (treatment for multi Drug resistant TB cases) ಕಾರ್ಯಕ್ರಮದ ಯೋಜನೆ ಹಾಕಿಕೊಳ್ಳಲಾಗಿದೆ.
ಈ ಸಂಬಂಧ ಪೂರ್ವ ಸಿದ್ಧತೆಗಳು ನಡೆದಿದೆ ಎಂದರು. ಪರಿಷ್ಕೃತ ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ ಮಂಗಳೂರು, ಮೂಡಬಿದ್ರೆ, ಬಂಟ್ವಾಳ, ಪುತ್ತೂರು (ಸುಳ್ಯ ತಾಲೂಕು ಸೇರಿ), ಬೆಳ್ತಂಗಡಿ ಹೀಗೆ ಒಟ್ಟು 5 ಕ್ಷಯ ಚಿಕಿತ್ಸಾ ಘಟಕಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ 29 ನಿಗದಿತ ಪ್ರಯೋಗ ಶಾಲೆಗಳು (ಸರಕಾರಿ ಆರೋಗ್ಯ ಸಂಸ್ಥೆಗಳು ಹಾಗೂ 6 ವೈದ್ಯಕೀಯ ಕಾಲೇಜುಗಳು ಸೇರಿ) ಕಾರ್ಯನಿರ್ವಹಿಸುತ್ತಿದೆ.
ಡಾ ಎಂ ರಾಮಕೃಷ್ಣ ರಾವ್ ಸ್ವಾಗತಿಸಿದರು. ಇನ್ಫೆಂಟ್ ಮೇರೀಸ್ ಕಾನ್ವೆಂಟ್ ಭಗಿನಿ ಮೇರಿ ಎಮ್ಮ ಜೋಸೆಫ್ ಮತ್ತು ಭಗಿನಿ ಇವಾಂಜಿಲಿನ್ ಉಪಸ್ಥಿತರಿದ್ದರು. ತೀರ್ಥ ಕೆ ಎಸ್ ವಂದಿಸಿದರು. ಆರೋಗ್ಯ ಇಲಾಖೆಯ ಜಯರಾಮ್ ಅವರು ಕಾರ್ಯಕ್ರಮ ನಿರ್ವಹಿಸಿದರು.