Monday, June 27, 2011

ತುಮಕೂರು-ಗುಬ್ಬಿ ನಡುವೆ ನಡೆದ ಅಪಘಾತದಲ್ಲಿ ಮಡಿದವರಿಗೆ ತಲಾ ಒಂದು ಲಕ್ಷ ರೂ ಪರಿಹಾರ: ಮುಖ್ಯಮಂತ್ರಿ

ಮಂಗಳೂರು,ಜೂ.27: ಸುಬ್ರಹ್ಮಣ್ಯದಿಂದ ನೇರವಾಗಿ ಮಂಗಳೂರಿಗೆ
ಆಗ ಮಿಸಿದ ಮುಖ್ಯ ಮಂತ್ರಿ ಗಳು ಎರಡು ದಿನಗಳ ಮಾತೃ ವಿಯೋಗ ದಿಂದ ದು:ಖಿ ತರಾದ ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ರಾದ ಬಿ ನಾಗ ರಾಜ ಶೆಟ್ಟಿ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದರು.ಈ ಸಂದರ್ಭ ದಲ್ಲಿ ಮಾಧ್ಯಮ ದೊಂದಿಗೆ ಮಾತ ನಾಡಿದ ಮುಖ್ಯ ಮಂತ್ರಿಗಳು ತುಮಕೂರು - ಗುಬ್ಬಿ ನಡುವೆ ನಡೆದ ಅಪಘಾತದಲ್ಲಿ ಇಂದು ಮೃತಪಟ್ಟ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ಘೋಷಿಸಿದರು.
ಈ ಸಂದ ರ್ಭದಲ್ಲಿ ಸಚಿವರಾದ ಕೃಷ್ಣ ಜೆ ಪಾಲೆಮಾರ್, ರೇಣುಕಾಚಾರ್ಯ, ವಿಧಾನಸಭಾ ಉಪಾಧ್ಯಕ್ಷರಾದ ಎನ್ ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಕ್ಯಾ ಗಣೇಶ್ ಕಾರ್ಣಿಕ್ ಮತ್ತಿತರರು ಉಪಸ್ಥಿತರಿದ್ದರು.