Tuesday, June 28, 2011

ನಗರದ ಮಾರುಕಟ್ಟೆಗಳಿಗೆ ಅಗತ್ಯ ಸೌಲಭ್ಯ:ಸಚಿವ ಪಾಲೆಮಾರ್

ಮಂಗಳೂರು,ಜೂನ್.28:ನಗರದ ಸೆಂಟ್ರಲ್ ಮಾರ್ಕೆಟ್,ಸ್ಟೇಟ್ ಬ್ಯಾಂಕ್ ಬಳಿಯ ಮೀನು ಮಾರುಕಟ್ಟೆ ಪ್ರದೇಶಗಳಿಗೆ ಬಂದರು, ಮೀನುಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ವ್ಯಾಪಾರಿಗಳ ಅಹವಾಲುಗಳನ್ನು ಆಲಿಸಿದರು.

ಮಾರು ಕಟ್ಟೆ ಪ್ರದೇಶ ಗಳಲ್ಲಿ ರುವ ವ್ಯಾಪಾ ರಿಗಳಿಗೆ ಸಮ ರ್ಪಕ ಕುಡಿ ಯುವ ನೀರು, ವಿದ್ಯುತ್,ಶುಚಿತ್ವ ಸೇರಿ ದಂತೆ ಮೂಲ ಭೂತ ಸೌಕರ್ಯ ಗಳನ್ನು ಪಾಲಿಕೆ ವತಿಯಿಂದ ಮುಂದಿನ ಒಂದು ವಾರ ದೊಳಗೆ ನೀಡಲು ಕ್ರಮ ಕೈ ಗೊಳ್ಳುವು ದಾಗಿ ಮತ್ತು ತಕ್ಷಣ ದಿಂದ ಪರಿಸ ರದ ಸುಚಿತ್ವ ವನ್ನು ನಿರ್ವ ಹಿಸಲು ಪಾಲಿಕೆಯ ಅಧಿ ಕಾರಿ ಗಳಿಗೆ ಸೂಚನೆ ನೀಡ ಲಾಗಿದೆ ಎಂದು ಸಚಿವರು ಸುದ್ದಿ ಗಾರರಿಗೆ ಹೇಳಿ ದರು.ಶೀಘ್ರ ದಲ್ಲೇ ಸರ್ಕಾ ರದ ವತಿ ಯಿಂದ 100 ಕೋಟಿ ರೂ.ಗಳ ಸು ಸಜ್ಜಿತ ಮಾರು ಕಟ್ಟೆ ನಿರ್ಮಿ ಸಲಾ ಗುವುದು ಎಂದು ಸಚಿವರು ನುಡಿದರು.
ಬೀದಿ ಬದಿ ವ್ಯಾಪರಿಗಳಿಗೆ ಆಗುತ್ತಿರುವ ತೊಂದರೆ ಗಳನ್ನು ಗಮನಿ ಸಲಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಜಿಲ್ಲಾಧಿಕಾರಿ,ಪೋಲಿಸ್ ಮತ್ತು ಪಾಲಿಕೆಯ ಅಧಿಕಾರಿಗಳ ಸಂಯುಕ್ತ ಸಭೆ ಕರೆದು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.ಮೇಯರ್ ಪ್ರವೀಣ್, ಉಪಮೇಯರ್ ಗೀತಾ ನಾಯಕ್, ಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್,ಪಾಲಿಕೆಯ ಸದಸ್ಯರುಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.