Sunday, June 19, 2011

ಎಂಡೋಸಲ್ಫಾನ್ ಪೀಡಿತರಿಗೆ ಶಾಶ್ವತ ಪುನರ್ವಸತಿಗೆ ರೂ. 70 ಲಕ್ಷ : ಶೋಭಾ ಕರಂದ್ಲಾಜೆ

ಮಂಗಳೂರು,ಜೂನ್.19:ಕಳೆದ 15 ವರ್ಷಗಳಿಂದ ಕೊಕ್ಕಡ,ಪಟ್ರಮೆ, ಅಲಂಕಾರ ಪ್ರದೇಶಗಳಲ್ಲಿರುವ ಎಂಡೋಸಲ್ಫಾನ್ ನಿಂದ ಬಾಧಿತರಾದ ಅಂಗವಿಕಲರು ಹಾಗೂ ಅವರ ಹೆತ್ತವರ ನೋವನ್ನು ಗಮನದಲ್ಲಿರಿಸಿ ರಾಜ್ಯ ಸರ್ಕಾರ ತಾತ್ಕಾಲಿಕ ಡೇ ಕೇರ್ ಸೆಂಟರನ್ನು ಕೊಕ್ಕಡದಲ್ಲಿ ಆರಂಭಿಸಿದೆ ಎಂದು ಇಂಧನ ಹಾಗೂ ಆಹಾರ ಸಚಿವರಾದ ಕು. ಶೋಭಾ ಕರೆಂದ್ಲಾಜೆ ಹೇಳಿದರು.

ಇಂದು ದ.ಕ ಜಿಲ್ಲೆಯ ಬೆಳ್ತಂ ಗಡಿಯ ಕೊಕ್ಕಡ ದಲ್ಲಿ ತಾತ್ಕಾ ಲಿಕ ಡೇ ಕೇರ್ ಸೆಂಟ ರನ್ನು ಉದ್ಘಾ ಟಿಸಿ ಮಾತ ನಾಡಿದ ಅವರು, ಪಕ್ಕ ದಲ್ಲೇ ಹತ್ತು ಸೆಂಟ್ಸ್ ಜಾಗ ಮತ್ತು 70 ಲಕ್ಷ ರೂ.ಗಳ ಅಂದಾಜು ಪಟ್ಟಿಯನ್ನು ಶಾಶ್ವತ ಕಟ್ಟಡಕ್ಕೆ ರೂಪಿಸಲಾಗಿದ್ದು ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದರು.ಪುನರ್ ವಸತಿ ಕೇಂದ್ರ ಬೆ.8 ಗಂಟೆ ಯಿಂದ ಸಂಜೆ 6.30 ರವ ರೆಗೆ ಕಾರ್ಯಾ ಚರಿ ಸಲಿದೆ. ಇಲ್ಲಿ ಸೌಲಭ್ಯ ಗಳನ್ನು ಒದ ಗಿಸಲು 22 ಲಕ್ಷ ರೂ.ಗಳನ್ನು ಸರ್ಕಾರ ಈಗಾ ಗಲೇ ಬಿಡು ಗಡೆ ಮಾಡಿದೆ. ಎಂಡೋಸಲ್ಫಾನ್ ನಿಷೇಧಕ್ಕೆ ರಾಜ್ಯ ಬದ್ಧವಾಗಿದ್ದು ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನಿಗೂ ಪತ್ರ ಬರೆಯಲಾಗಿದೆ ಎಂದರು. ಇದಲ್ಲದೆ ಇಲ್ಲಿನ ಪೀಡಿತರ ಅಹವಾಲಿಗೆ ಸ್ಪಂದಿಸಿ ಜೆನೆಟಿಕ್ ಪರೀಕ್ಷೆ ನಡೆಸಲು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್ ದೆಹಲಿಯ ಜೊತೆ ಮಾತುಕತೆ ನಡೆಸಲಾಗಿದೆ ಎಂದರು. ಈಗಾಗಲೇ ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿ ಸರ್ಕಾರ 28.2.10ರಂದು ಪರಿಹಾರ ಹಾಗೂ ಮಾಸಾಶನ ನೀಡಲಾಗಿದೆ. ಈ ಸಂಬಂಧ ಜಿಲ್ಲಾಡಳಿತದ ನೆರವನ್ನು ಪಡೆದು ಸಮಗ್ರ ಸಮೀಕ್ಷೆಗೂ ಸೂಚನೆ ನೀಡಲಾಗಿದೆ ಎಂದರು.ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ ಪಾಲೆ ಮಾರ್ ಅವರು ಮಾತ ನಾಡಿ, ರಾಸಾ ಯಿನಿ ಕಗ ಳನ್ನು ವಿವೇಚ ನೆಯಿ ಲ್ಲದೆ ಬಳ ಸುವು ದರಿಂ ದಾಗುವ ದುಷ್ಪರಿಣಾಮಗಳನ್ನು ವಿವರಿಸಿದರು. ಮಲಿನ ಪರಿಸರವನ್ನು ಶುದ್ಧೀಕರಿಸಲು ಹಾಗೂ ಪರಿಸರವನ್ನು ಸಂರಕ್ಷಿಸಲು ಪರಿಸರ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಅಂಗವಿಕಲ ಮಕ್ಕಳಿಗೆ ಚೆಂಡು ಹಾಗೂ ಅವರಿಗೆ ನೆರವಾಗುವ ಪರಿಕರಗಳನ್ನು ಕೇಂದ್ರಕ್ಕೆ ನೀಡಲಾಯಿತು. ಜಿಲ್ಲಾ ಪಂಚಾ ಯತ್ ಅಧ್ಯಕ್ಷ ರಾದ ಕೆ ಟಿ ಶೈಲಜಾ ಭಟ್, ಉಪಾ ಧ್ಯಕ್ಷ ರಾದ ಧನಲಕ್ಷ್ಮಿ, ಬೆಳ್ತಂ ಗಡಿ ತಾಲೂಕು ಪಂಚಾ ಯಿತಿ ಅಧ್ಯಕ್ಷ ರಾದ ಮಮತಾ ಎಂ. ಶೆಟ್ಟಿ, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ಕುಶಾಲಪ್ಪ ಗೌಡ, ಪಟ್ರಮೆ ಗ್ರಾ.ಪಂ.ಅಧ್ಯಕ್ಷ ಆನಂದ ಗೌಡ, ನಿಡ್ಲೆ ಗ್ರಾ.ಪಂ. ಅಧ್ಯಕ್ಷ ಪುಷ್ಪ ಅಂಗವಿಕಲ ಆಯೋಗದ ಆಯುಕ್ತರಾದ ಕೆ. ವಿ. ರಾಜಣ್ಣ, ಪ್ರಭಾರ ಸಿಇಒ ಶಿವರಾಮೇಗೌಡ, ಪುತ್ತೂರು ಎಸಿ ಡಾ.ಹರೀಶ್ ಕುಮಾರ್ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಸ್ ಕೆ ಡಿ ಆರ್ ಡಿಪಿ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್. ಮಂಜುನಾಥ್ ಮಾತನಾಡಿದರು.