Saturday, June 18, 2011

ರಾಜ್ಯಕ್ಕೆ 167 ನೂತನ ಸಬ್ ಸ್ಟೇಷನ್, 2500 ಲೈನ್ ಮ್ಯಾನ್ ನೇಮಕ: ಇಂಧನ ಸಚಿವರು

ಮಂಗಳೂರು,ಜೂನ್.18: ರಾಜ್ಯವನ್ನು ವಿದ್ಯುತ್ ಸ್ವಾವಲಂಬಿಯನ್ನಾಗಿ ಮಾಡಲು ಹಲವು ದಿಟ್ಟ ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು, ಪೂರಕ ಅನುದಾನವನ್ನೂ ನೀಡಲಾಗಿದೆ. ಸಮರ್ಪಕ ವಿದ್ಯುತ್ ಪೂರೈಕೆಗೆ ಇನ್ನಷ್ಟು ಹೊಸ ಮಾರ್ಗಗಳು ಮತ್ತು ಸಬ್ ಸ್ಟೇಷನ್ ಗಳ ಅಗತ್ಯವಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಹೊಸ ಮಾರ್ಗ ಗಳ ನಿರ್ಮಾ ಣಕ್ಕೆ ಕ್ರಮ ಕೈ ಗೊಳ್ಳ ಲಾಗಿದೆ. 167 ಹೊಸ ಸಬ್ ಸ್ಟೇ ಷನ್ ಗಳನ್ನು ಸ್ಥಾಪಿ ಸಲು ನಿರ್ಧ ರಿಸ ಲಾಗಿದೆ, ಇಲಾ ಖೆಗೆ ಅಗತ್ಯ ವಿರುವ 2,500 ಲೈನ್ ಮ್ಯಾನ್ ಗಳನ್ನು ಮೆರಿಟ್ ಆಧಾರ ದಲ್ಲಿ ನೇರ ನೇಮಕ ಮಾಡಲು ಕ್ರಮ ಕೈಗೊಳ್ಳ ಲಾಗಿದೆ ಎಂದ ಅವರು, ಮೆಸ್ಕಾಂಗೆ 411 ಲೈನ್ ಮ್ಯಾನ್ ಗಳನ್ನು ನೇಮಿಸ ಲಾಗು ವುದು ಎಂದು ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನಿಯರ್ ಗಳ ಸಂಘದ ಮಂಗಳೂರು ವಲಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡು ತ್ತಿದ್ದರು.ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ, ವಿಶ್ವಾಸ ಬರುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಸಿಬ್ಬಂದಿಗಳು ಇಂಧನ ಇಲಾಖೆಗೆ ಹೊಸ ಕಾಯಕಲ್ಪವನ್ನು ನೀಡಬೇಕು ಎಂದು ಸಚಿವರು ವಿನಂತಿಸಿದರು.ವಿದ್ಯುತ್ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ 1500 ಮೆ.ವ್ಯಾ. ವಿದ್ಯುತ್ ರಾಜ್ಯದ ಗ್ರಿಡ್ ಗೆ ಹೆಚ್ಚುವರಿಯಾಗಿ ಹರಿದು ಬರಲಿದೆ ಎಂದ ಅವರು, ಇಲಾಖಾ ನೌಕರರ ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನೌಕರರು ಪ್ರತಿಯಾಗಿ ಕಾರ್ಯದಕ್ಷತೆ ಹೆಚ್ಚಿಸಬೇಕು ಎಂದರು.ಕಾರ್ಯ ಕ್ರಮ ದಲ್ಲಿ ಮುಖ್ಯ ಅತಿಥಿ ಯಾಗಿ ಪಾ ಲ್ಗೊಂಡ ವಿಧಾನ ಸಭೆಯ ಉಪ ಸಭಾ ಪತಿಗ ಳಾದ ಎನ್. ಯೋಗೀಶ್ ಭಟ್ ಮಾತ ನಾಡಿ, ರಾಜ್ಯದ 10 ವಲಯ ಗಳ ಪೈಕಿ 8 ವಲಯ ಗಳು ಸ್ವಂತ ಕಟ್ಟಡವನ್ನು ಹೊಂದಿವೆ. ಮಂಗಳೂರು ಮತ್ತು ಬಿಜಾಪುರಕ್ಕೆ ಕಟ್ಟಡದ ಕೊರತೆ ಇತ್ತು. ಇಂದು ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆದಿದು, ಸಮಯಮಿತಿಯಲ್ಲಿ ಕಾಮಗಾರಿ ಪೂರೈಸುವ ಸಂಕಲ್ಪವನ್ನು ಮಾಡಬೇಕೆಂದರು.
ಸಿಬ್ಬಂದಿಗಳಲ್ಲಿ ಕಾರ್ಯಕ್ಷಮತೆಯನ್ನು ಪ್ರೋತ್ಸಾಹಿಸಲು 10 ವಲಯಗಳ ಮಧ್ಯೆ ಸೇವೆ ನೀಡುವ ವಿಷಯದಲ್ಲಿ ಸ್ಪರ್ಧೆಯನ್ನು ಏರ್ಪಡಿಸಬೇಕು. ಆ ಮೂಲಕ ಸೇವಾ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದ ಯೋಗೀಶ್ ಭಟ್, ನಗರದ ಕೆಲವು ಭಾಗಗಳಲ್ಲಿರುವ ಲೋ ವೋಲ್ಟೇಜ್ ಸಮಸ್ಯೆಯನ್ನು ಕೆಪಿಟಿಸಿಎಲ್ ಮತ್ತು ಮೆಸ್ಕಾಂ ಜೊತೆಯಾಗಿ ಬಗೆಹರಿಸಬೇಕೆಂದರು.ಅಧ್ಯ ಕ್ಷತೆ ವಹಿ ಸಿದ್ದ ಕರ್ನಾ ಟಕ ವಿದ್ಯುತ್ ಮಂಡ ಳಿ ಇಂಜಿ ನಿಯ ರಿಂಗ್ ಸಂಘದ ಅಧ್ಯಕ್ಷ ಎಲ್.ರವಿ ಮಾ ತನಾಡಿ, ಇಂ ಧನ ಇಲಾಖೆ ಯಲ್ಲಿ ನೌಕರರ ವರ್ಗಾವಣೆಗೆ ನೂತನ ವರ್ಗಾವಣೆ ನೀತಿಯನ್ನು ಜಾರಿಗೊಳಿಸುವಂತೆಯೂ ರವಿ ಒತ್ತಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ.ಟಿ. ಶೈಲಜಾ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಂಡು ಶುಭಹಾರೈಸಿದರು. ಕೆಪಿಟಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಪಿ. ರವಿಕುಮಾರ್, ಕೆಪಿಟಿಸಿಎಲ್ ತಾಂತ್ರಿಕ ನಿರ್ದೇಶಕ ಪ್ರತಾಪ್ ಕುಮಾರ್, ಮೆಸ್ಕಾಂ ಕಾರ್ಯನಿರ್ವಾಹಕ ನಿರ್ದೇಶಕ ವಿಜಯ ನರಸಿಂಹ, ತಾಂತ್ರಿಕ ನಿರ್ದೇಶಕ ಎಚ್. ನಾಗೇಶ್ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಂಡರು. ಸಂಘದ ಪ್ರಧಾನ ಕಾರ್ಯದರ್ಶಿ ವಿ. ವೆಂಕಟಶಿವ ರೆಡ್ಡಿ ಸ್ವಾಗತಿಸಿ, ಹಿರಿಯ ಉಪಾಧ್ಯಕ್ಷ ಎಸ್. ರಾಜೇಂದ್ರಕುಮಾರ್ ವಂದಿಸಿದರು.