ಹೊಸ ಮಾರ್ಗ ಗಳ ನಿರ್ಮಾ ಣಕ್ಕೆ ಕ್ರಮ ಕೈ ಗೊಳ್ಳ ಲಾಗಿದೆ. 167 ಹೊಸ ಸಬ್ ಸ್ಟೇ ಷನ್ ಗಳನ್ನು ಸ್ಥಾಪಿ ಸಲು ನಿರ್ಧ ರಿಸ ಲಾಗಿದೆ, ಇಲಾ ಖೆಗೆ ಅಗತ್ಯ ವಿರುವ 2,500 ಲೈನ್ ಮ್ಯಾನ್ ಗಳನ್ನು ಮೆರಿಟ್ ಆಧಾರ ದಲ್ಲಿ ನೇರ ನೇಮಕ ಮಾಡಲು ಕ್ರಮ ಕೈಗೊಳ್ಳ ಲಾಗಿದೆ ಎಂದ ಅವರು, ಮೆಸ್ಕಾಂಗೆ 411 ಲೈನ್ ಮ್ಯಾನ್ ಗಳನ್ನು ನೇಮಿಸ ಲಾಗು ವುದು ಎಂದು ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನಿಯರ್ ಗಳ ಸಂಘದ ಮಂಗಳೂರು ವಲಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡು ತ್ತಿದ್ದರು.ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ, ವಿಶ್ವಾಸ ಬರುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಸಿಬ್ಬಂದಿಗಳು ಇಂಧನ ಇಲಾಖೆಗೆ ಹೊಸ ಕಾಯಕಲ್ಪವನ್ನು ನೀಡಬೇಕು ಎಂದು ಸಚಿವರು ವಿನಂತಿಸಿದರು.ವಿದ್ಯುತ್ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ 1500 ಮೆ.ವ್ಯಾ. ವಿದ್ಯುತ್ ರಾಜ್ಯದ ಗ್ರಿಡ್ ಗೆ ಹೆಚ್ಚುವರಿಯಾಗಿ ಹರಿದು ಬರಲಿದೆ ಎಂದ ಅವರು, ಇಲಾಖಾ ನೌಕರರ ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನೌಕರರು ಪ್ರತಿಯಾಗಿ ಕಾರ್ಯದಕ್ಷತೆ ಹೆಚ್ಚಿಸಬೇಕು ಎಂದರು.
ಸಿಬ್ಬಂದಿಗಳಲ್ಲಿ ಕಾರ್ಯಕ್ಷಮತೆಯನ್ನು ಪ್ರೋತ್ಸಾಹಿಸಲು 10 ವಲಯಗಳ ಮಧ್ಯೆ ಸೇವೆ ನೀಡುವ ವಿಷಯದಲ್ಲಿ ಸ್ಪರ್ಧೆಯನ್ನು ಏರ್ಪಡಿಸಬೇಕು. ಆ ಮೂಲಕ ಸೇವಾ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದ ಯೋಗೀಶ್ ಭಟ್, ನಗರದ ಕೆಲವು ಭಾಗಗಳಲ್ಲಿರುವ ಲೋ ವೋಲ್ಟೇಜ್ ಸಮಸ್ಯೆಯನ್ನು ಕೆಪಿಟಿಸಿಎಲ್ ಮತ್ತು ಮೆಸ್ಕಾಂ ಜೊತೆಯಾಗಿ ಬಗೆಹರಿಸಬೇಕೆಂದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ.ಟಿ. ಶೈಲಜಾ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಂಡು ಶುಭಹಾರೈಸಿದರು. ಕೆಪಿಟಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಪಿ. ರವಿಕುಮಾರ್, ಕೆಪಿಟಿಸಿಎಲ್ ತಾಂತ್ರಿಕ ನಿರ್ದೇಶಕ ಪ್ರತಾಪ್ ಕುಮಾರ್, ಮೆಸ್ಕಾಂ ಕಾರ್ಯನಿರ್ವಾಹಕ ನಿರ್ದೇಶಕ ವಿಜಯ ನರಸಿಂಹ, ತಾಂತ್ರಿಕ ನಿರ್ದೇಶಕ ಎಚ್. ನಾಗೇಶ್ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಂಡರು. ಸಂಘದ ಪ್ರಧಾನ ಕಾರ್ಯದರ್ಶಿ ವಿ. ವೆಂಕಟಶಿವ ರೆಡ್ಡಿ ಸ್ವಾಗತಿಸಿ, ಹಿರಿಯ ಉಪಾಧ್ಯಕ್ಷ ಎಸ್. ರಾಜೇಂದ್ರಕುಮಾರ್ ವಂದಿಸಿದರು.