Monday, June 20, 2011

ಪ್ರಶಸ್ತಿ ಸ್ಫೂರ್ತಿ ಆಗಲಿ:ಸಚಿವ ಪಾಲೆಮಾರ್

ಮಂಗಳೂರು,ಜೂನ್.20:ಸುಚಿತ್ವಕ್ಕೆ ಹೆಚ್ಚಿನ ಆದ್ಯತೆ ಕೊಡುವ ಮೂಲಕ ಗ್ರಾಮ ಪಂಚಾಯತ್ ಗಳು,ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಸುಂದರ ಮತ್ತು ಆರೋಗ್ಯ ಪೂರ್ಣ ಪರಿಸರ ನಿರ್ಮಾಣ ಮಾಡುವ ಗುರಿಯನ್ನು ಹೊಂದಬೇಕುಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಕರೆ ನೀಡಿದ್ದಾರೆ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ 2009-10ನೇ ಸಾಲಿನ ಕರ್ನಾಟಕ ರಾಜ್ಯ ನೈರ್ಮಲ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯ ನೈ ರ್ಮಲ್ಯ ರತ್ನ ಪ್ರಶಸ್ತಿ ಬಂದಿ ರುವುದು ಜಿಲ್ಲೆಯ ಜನ ತೆಗೆ ಸಿಕ್ಕ ಗೌರವ ಆಗಿದೆ.ಸದಾ ಸ್ವಚ್ಛ ಜಿಲ್ಲೆ ಯಾಗಿ ದಕ್ಷಿಣ ಕನ್ನಡ ವನ್ನು ಗುರು ತಿಸಿ ಕೊಳ್ಳುವ ಮೂಲಕ ಮಾದರಿ ಜಿಲ್ಲೆ ಯಾಗಲಿ. ಮುಂದಿನ ವರ್ಷ ದಿಂದ ಪರಿಸರ ಪ್ರಶಸ್ತಿ ಯನ್ನು ನೀಡು ವುದಾಗಿ ರಾಜ್ಯ ಸರ ಕಾರ ಈಗಾ ಗಲೇ ಘೋಷಿ ಸಿದ್ದು, ಈ ಪ್ರಶಸ್ತಿ ಕೂಡ ಸಿಗುವ ನಿಟ್ಟಿನಲ್ಲಿ ಸಾಂಘಿಕ ಪ್ರಯತ್ನ ಮಾಡಬೇಕೆಂದರು.
ರಸ್ತೆ ಬದಿ ಕಸ ಸುರಿದು ಹೋಗುವ ಲಾರಿಗಳು ಮತ್ತು ಇತರ ವಾಹನಗಳ ಬಗ್ಗೆ ನಿಖರ ಮಾಹಿತಿ ಲಭಿಸಿದ ತಕ್ಷಣ ಯಾವುದೇ ಮುಲಾಜಿಲ್ಲದೆ ಅಂತಹ ಲಾರಿಗಳನ್ನು ಮುಟ್ಟುಗೋಲು ಹಾಕಲಾಗುವುದು.ಆಸ್ಪತ್ರೆಯ ತ್ಯಾಜ್ಯಗಳನ್ನು ರಸ್ತೆ ಬದಿ ಹಾಕುವಂತದ್ದು ಕಂಡು ಬಂದರೂ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಯಾವುದೇ ಭಾಗದಲ್ಲಿ ಲಾರಿಗಳಲ್ಲಿ ತ್ಯಾಜ್ಯವನ್ನು ತಂದು ಬೇಕಾಬಿಟ್ಟಿ ಎಲ್ಲೆಡೆ ರಸ್ತೆ ಬದಿ ಸುರಿದು ಹೋಗಿ ಾ ಮೂಲಕ ಪರಿಸರ ಹಾಳು ಮಾಡುವುದು ಕಂಡು ಬಂದಲ್ಲಿ ಆ ಲಾರಿಯ ನಂಬರ್ ಸಮೇತ ಹೆಲ್ಪ್ ಲೈನ್ ಮೂಲಕ ಗಮನಕ್ಕೆ ತರಬೇಕು. ಪ್ರಥಮವಾಗಿ ಮಾಹಿತಿ ನೀಡುವ ಮಂದಿಗೆ ರೂ.ಒಂದು ಸಾವಿರ ಬಹುಮಾನ ನೀಡಲಾಗುವುದು.ಈ ಬಗ್ಗೆ ಶೀಘ್ರದಲ್ಲಿ ಹೆಲ್ಪ್ಲೈನ್ ಸ್ಥಾಪಿಸಿ ನಂಬರ್ ನೀಡಲಾಗುವುದು ಎಂದು ಸಚಿವರು ಹೇಳಿದರು.

ಸಮಾ ರಂಭ ದಲ್ಲಿ ಸಚಿ ವರು ನೈ ರ್ಮಲ್ಯ ರತ್ನ ಪ್ರ ಶಸ್ತಿ ವಿ ಜೇತ ದ.ಕ. ಜಿಲ್ಲಾ ಪಂಚಾ ಯತ್ ಗೆ ರೂ.30 ಲಕ್ಷ ಮೊತ್ತದ ದ ಚೆಕ್, ಪ್ರ ಶಸ್ತಿ ಫಲಕ ವಿತರಿ ಸಿದರು.ಅಲ್ಲದೆ ನೈ ರ್ಮಲ್ಯ ರತ್ನ, ಸ್ವರ್ಣ ನೈ ರ್ಮಲ್ಯ, ರಜತ ನೈ ರ್ಮಲ್ಯ ಹಾಗೂ ನೈ ರ್ಮಲ್ಯ ಪ್ರಶಸ್ತಿ ಪಡೆದ ಹೊಸಂ ಗಡಿ ಗ್ರಾ.ಪಂ.ಗೆ ರೂ. 19 ಲಕ್ಷದ ಚೆಕ್,ಪ್ರಶಸ್ತಿ ಹಾಗೂ ರಜತ ನೈ ರ್ಮಲ್ಯ ದ್ವಿ ತೀಯ ಪ್ರಶಸ್ತಿ ಮತ್ತು ನೈ ರ್ಮಲ್ಯ ಪ್ರಶಸ್ತಿ ಪಡೆದ ಬಂ ಟ್ವಾಳ ತಾಲೂ ಕಿನ ಇರಾ ಗ್ರಾಮ ಪಂಚಾ ಯತ್ ಗೆ ರೂ.3 ಲಕ್ಷದ ಚೆಕ್ ಮತ್ತು ಪ್ರಶಸ್ತಿ ಪ್ರದಾನ ಮಾಡ ಲಾಯಿತು.
ರಜತ ನೈರ್ಮಲ್ಯ ತೃತೀಯ ಮತ್ತು ನೈರ್ಮಲ್ಯ ಪ್ರಶಸ್ತಿ ವಿಜೇತ ಪುತ್ತೂರು ತಾಲೂಕಿನ 34ನೇ ನೆಕ್ಕಿಲಾಡಿ ಗ್ರಾ.ಪಂ, ನೈರ್ಮಲ್ಯ ಪ್ರಶಸ್ತಿ ಪಡೆದ ಮಂಗಳೂರು ತಾಲೂಕಿನ ಕಿಲ್ಪಾಡಿ ಮತ್ತು ಸುಳ್ಯದ ಆಲೆಟ್ಟಿ ಗ್ರಾ.ಪಂ.ಗಳಿಗೆ ತಲಾ ರೂ.ಒಂದು ಲಕ್ಷದಂತೆ ಪ್ರಶಸ್ತಿ ವಿತರಿಸಲಾಯಿತು.
ಅಂಗನವಾಡಿ ನೈರ್ಮಲ್ಯ ಪ್ರಶಸ್ತಿ:
ಬಂಟ್ವಾಳ ಬಾರಿಂಜೆ ಅಂಗನವಾಡಿ,(ರೂ 15 ಸಾವಿರ), ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಪೂಂಜಾಲಕಟ್ಟೆ, ಮಂಗಲೂರಿನ ಕಲ್ಲ ಮುಂಡ್ಕೂರು, ಪೂತ್ತೂರು ಕೊಯ್ಲ ಏನಿತಡ್ಕ, ಮತ್ತು ಸುಳ್ಯ ತಾಲೂಕಿನ ಅಮರ ಮುಡ್ನೂರು ಅಕ್ಕೋಜಿಪಾಲ್ ಅಂಗನವಾಡಿಗಳಿಗೆ ತಲಾ 10 ಸಾವಿರದ ಚೆಕ್ನೊಂದಿಗೆ ಪ್ರಶಸ್ತಿ ವಿತರಿಸಲಾಯಿತು.
ಶಾಲೆಗಳಿಗೆ ನೈರ್ಮಲ್ಯ ಪ್ರಶಸ್ತಿ:
ಬಂಟ್ವಾಳ ತಾಲೂಕಿನ ಕೆದ್ದಳಿಕೆ ಕಾವಳ ಮುಡೂರು ಸ.ಹಿ.ಪ್ರಾ.ಶಾಲೆ(ರೂ.30ಸಾವಿರ), ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ, ಕುವೆಟ್ಟು ಪ್ರಾಥಮಿಕ ಶಾಲೆ, ಮಂಗಳೂರು ತಾಲೂಕಿನ ಕುಪ್ಪೆಪದವು, ಪುತ್ತೂರು ತಾಲೂಕಿನ ಉಪ್ಪಿನಂಗಡಿ ಮತ್ತು ಸುಳ್ಯ ತಾಲೂಕಿನ ಅಜ್ಜಾವರ ಮುಳ್ಯ ಅಟೂರು ಶಾಲೆಗಳಿಗೆ ಪ್ರಶಸ್ತಿಯೊಂದಿಗೆ ತಲಾ 20 ಸಾವಿರದ ಚೆಕ್ ವಿತರಿಸಲಾಯಿತು
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಟಿ.ಶೈಲಜಾ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸ್ವಚ್ಛತಾ ಸಿಡಿ ಮತ್ತು ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್, ಶಾಸಕರಾದ ಯು.ಟಿ.ಖಾದರ್, ಬಿ.ರಮಾನಾಥ ರೈ , ತಾ.ಪಂ.ಅಧ್ಯಕ್ಷೆ ಭವ್ಯ, ಜಿ.ಪಂ.ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ದನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಈಶ್ವರ ಕಟೀಲ್, ಜನಾರ್ದನ ಗೌಡ, ನವೀನ್ ಕುಮಾರ್ ಮೇನಾಲ,ಜಿಲ್ಲಾ ಪಂಚಾಯತ್ ಸದ್ಯರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಜಿಲ್ಲಾ ಪಂಚಾಯತ್ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇ ಗೌಡ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.